ಚಿಕ್ಕಮಗಳೂರು, ಜೂನ್ 10:- ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಜನ್ಮದಿನದ ಪ್ರಯುಕ್ತ ಸೋಮವಾರ ಸಂಜೆ ಕಾರ್ಯಕರ್ತರು ಮತ್ತು ಸ್ನೇಹಿತರು ನಗರದ ಹೆರಿಗೆ ಆಸ್ಪತ್ರೆಯ ಬಾಣಂತಿಯರಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಹೆಚ್.ಕೆ.ಕೇಶವಮೂರ್ತಿ, ಮಂಜುನಾಥ್, ಯತೀ ಶ್, ಗುರು, ಶಿವಕುಮಾರ್, ಚಂದ್ರು, ಸಚಿನ್, ಧರ್ಮರಾಜ್, ಗುರುಸ್ವಾಮಿ ರವಿ ಇದ್ದರು.
- ಸುರೇಶ್ ಎನ್.