ಚಿಕ್ಕಮಗಳೂರು:– ನಗರದ ಶಂಕರಮಠದಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ಮ ಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರವನ್ನು ಸೋಮವಾರ ಏರ್ಪಡಿಸಿ ಶ್ಲೋಕ, ಸಂಗೀತ, ಆತ್ಮ ರಕ್ಷಣೆ, ಪ್ರಥಮ ಚಿಕಿತ್ಸೆ, ಮಾನಸಿಕ ಆರೋಗ್ಯ, ಹಾಗೂ ಹಲವಾರು ಆಟಗಳು ಆಡಿಸುವ ಮೂಲಕ ನಡೆಸಲಾಯಿತು.
ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಆಧುನಿಕತೆ ಯುಗದಲ್ಲಿ ಶಿಬಿರಗಳು ಹಣಕ್ಕಾಗಿ ನಡೆಯುತ್ತಿವೆ. ಈ ಮಧ್ಯೆ ಟ್ರಸ್ಟ್ ಫಲಪೇಕ್ಷೆ ಇಲ್ಲದೇ ಸೇವಾಗುಣ ಬೆಳೆಸಿಕೊಂಡಿದೆ. ಹೀಗಾಗಿ ಹಿಂದುಳಿದ ಮಕ್ಕಳು ಶಿಬಿರದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಪ್ರತಿ ವರ್ಷವು ಉಚಿತ ಶಿಬಿರ ಆಯೋ ಜಿಸಿ ಮಕ್ಕಳಲ್ಲಿ ಸಾಮಾಜಿಕ ಜ್ಞಾನ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಶಿಬಿರದಲ್ಲಿ ಭಾಗವಹಿಸಿದ ಪ್ರತಿ ಮಕ್ಕಳಿಗೂ ಲಘು ಉಪಾಹಾರ, ತಂಪು ಪಾನೀಯ, ಕಿರು ಕಾಣಿಕೆಗ ಳನ್ನು ಉಚಿತವಾಗಿ ನೀಡಿ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ ತುಂಬುವ ಪ್ರಯತ್ನ ಮಾಡಲಾಯಿತು.
– ಸುರೇಶ್ ಎನ್.