ಚಿಕ್ಕಮಗಳೂರು:- ನಗರದ ವಿಜಯಪುರದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ದಲ್ಲಿ ಹನುಮ ಜಯಂತಿ ಪ್ರಯುಕ್ತ ಮುಂಜಾನೆಯಿಂದಲೇ ಶ್ರೀಯವರಿಗೆ ವಿಶೇಷಪೂಜೆ, ಅಭಿಷೇಕ ಹಾಗೂ ದಿವ್ಯಾಲಂಕಾರದಿಂದ ಪೂಜಾ ಕೈಂಕರ್ಯಾಗಳು ಸಂಪನ್ನಗೊಂಡಿತು.
ಬೆಳಿಗ್ಗೆ 5 ಗಂಟೆಯಿಂದಲೇ ಶ್ರೀ ವೀರಾಂಜನೇಯಸ್ವಾಮಿಗೆ ಫಲಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 11ಕ್ಕೆ ಸಾಮೂಹಿಕ ಸತ್ಯನಾರಾಯಣಪೂಜೆ, ವ್ರತ, ಮಹಾಮಂಗಳಾರತಿ ನಡೆಯಿತು. ನಂತರ ಭಕ್ತಾ ಧಿಗಳಿಗೆ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಯಿತು.
– ಸುರೇಶ್ ಎನ್.