ಚಿಕ್ಕಮಗಳೂರು-ಮರಬಿದ್ದು ಮನೆ ಜಖಂ – ಓರ್ವರು ಆಸ್ಪತ್ರೆಗೆ ದಾಖಲು

ಚಿಕ್ಕಮಗಳೂರು, ಮೇ.27:– ನಿನ್ನೆ ರಾತ್ರಿ ಸುರಿದ ಮಳೆಯಿಂದ ವಸ್ತಾರೆ ಹೋಬಳಿ ಮೈಲಿಮನೆ ಗ್ರಾಮದ ವಾಸಿ ಕವಿತಾ ಅವರ ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.

ಆಕೆಯ ಸೊಸೆ ನಂದಿನಿ ಅವರಿಗೆ ಕಾಲು ಮತ್ತು ಬೆನ್ನಿಗೆ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಈ ಸಂದರ್ಭದಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಇದ್ದರು.

– ಸುರೇಶ್‌ ಎನ್.



Leave a Reply

Your email address will not be published. Required fields are marked *