ಚಿಕ್ಕಮಗಳೂರು, ಜೂನ್ 05:- ಪ್ರಕೃತಿಯ ಪಂಚಭೂತಗಳನ್ನು ಉಪಯೋಗಿಸಿಕೊಳ್ಳುವ ಮಾನವ ರು, ಪರಿಸರಕ್ಕೆ ತಿರುಗಿ ವಿಷವನ್ನು ಉಣಿಸಿ ಹಾಳುಮಾಡುತ್ತಿರುವುದು ಭವಿಷ್ಯಕ್ಕೆ ದೊಡ್ಡ ಮಾರಕವಾಗಲಿದೆ ಎಂದು ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.
ನಗರದ ತೇಗೂರು ಸಮೀಪದ ಮಹರ್ಷಿ ವಿದ್ಯಾಮಂದಿರದಲ್ಲಿ ನೇಚರ್ ಕನ್ಸವೇಷನ್ ಟ್ರಸ್ಟ್ ವತಿಯಿಂ ದ ಪರಿಸರ ದಿನಾಚರಣೆ ಪ್ರಯುಕ್ತ ಗುರುವಾರ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ಧ ಪರಿಸರ ಜಾಗೃತಿ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪೃಥ್ವಿಯಿಂದ ಗಾಳಿ, ನೀರು, ಆಹಾರವನ್ನು ದೈನಂದಿನ ಬದುಕಿಗೆ ಪೂರೈಸಿಕೊಂಡು, ಸ್ವಾರ್ಥ ಬದುಕಿ ಗಾಗಿ ಮರಗಳನ್ನೇ ನೆಲಸಮಗೊಳಿಸುವುದು ಸರಿಯಲ್ಲ. ನೀರು, ಆಹಾರವಿಲ್ಲದೇ ವಾರಗಟ್ಟಲೇ ಕಳೆಯಬಹು ದು. ಆದರೆ ಗಾಳಿಯಿಲ್ಲದೇ ಎಂಟು ನಿಮಿಷಗಳು ಕಳೆಯಲಾಗದು. ಜೀವಕ್ಕೆ ಜೀವ ಕೊಡುವ ಮರಗಳನ್ನು ರಕ್ಷಿಸುವ ಕಾಯಕ ಮಾಡಬೇಕಿದೆ ಎಂದರು.
ಕಾರ್ಖಾನೆ ಅಥವಾ ಮನೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ಸುಡುವುದರಿಂದ ಕಣ್ಣಿಗೆ ಕಾಣದಷ್ಟು ಸಣ್ಣ ಸಣ್ಣ ಕಣಗಳು ಉಸಿರಾಟದಿಂದ ಒಳಹೊಕ್ಕಿ ಹೃದಯಕ್ಕೆ ಸೇರಿಕೊಳ್ಳುತ್ತಿರುವ ಪರಿಣಾಮ ಬಾಲ್ಯದಲ್ಲೇ ಯುವಕ ರು ಸಾವಪ್ಪುತ್ತಿದ್ದು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಮಾನವ ಸಂಕುಲಕ್ಕೆ ಸಾವು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಇದೇ ವೇಳೆ ಶಾಲಾವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು. ಈ ಸಂದರ್ಭ ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥೀಗಳಿದ್ದರು.
– ಸುರೇಶ್ ಎನ್.