ಚಿಕ್ಕಮಗಳೂರು, ಮೇ.04:- ಸಮಾಜದ ಕೊಳಕನ್ನು ಹಗಲಿರುಳೆನ್ನದೇ, ಸಾವಿಗೂ ಭಯಪಡದೇ ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರ ಬೇಡಿಕೆಯನ್ನು ಈಡೇರಿಸುವುದು ಸರ್ಕಾ ರದ ಮೂಲ ಕರ್ತವ್ಯ ಎಂದು ಪೌರಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ಧ ಡಾ|| ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ಜಯಂತಿ ಹಾಗೂ ಪೌರಕಾರ್ಮಿಕರ ಮಹಾಸಂಘದ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾನುವಾರ ಅವರು ಮಾತನಾಡಿದರು.
ಸ್ವಚ್ಚತಾ ದೃಷ್ಟಿಯಿಂದ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸುತ್ತಿರ ಲಿಲ್ಲ. ಕಾರ್ಮಿಕರ ಕಷ್ಟ, ಸುಖ ಹಾಗೂ ಸವಲತ್ತು ಒದಗಿಸಲು ಜಿಲ್ಲಾ ಹಾಗೂ ರಾಜ್ಯಾದ್ಯಂತ ಎಂದಿಗೂ ಪ್ರ ಯತ್ನಿಸಿಲ್ಲ. ಈ ವಿರುದ್ಧ ಹಲವಾರು ಕಾರ್ಮಿಕರು ತಮ್ಮನ್ನು ಭೇಟಿ ಮಾಡಿ ಸಂಘ ಸ್ಥಾಪಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

ಹಬ್ಬಹರಿದಿನ, ಉತ್ಸವ ಅಥವಾ ಇನ್ನಿತರೆ ಕಾರ್ಯಕ್ರಮದಲ್ಲಿ ರಜೆಗಳಿಲ್ಲದೇ ದುಡಿಯುವ ಕಾಯಕ ಯೋಗಿ ಪೌರಕಾರ್ಮಿಕರಿಗೆ ಕನಿಷ್ಟ ವೇತನ, ಮೂಲಸೌಕರ್ಯ ಕಲ್ಪಿಸಲು ರಾಜ್ಯಾದ್ಯಂತ ಹೋರಾಟ ರೂಪಿ ಸಿದ ಬಳಿಕವೇ ಮುಖ್ಯಮಂತ್ರಿಗಳು ಹತ್ತು ಸಾವಿರಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಖಾಯಂಗೊಳಿಸಿವೆ ಎಂದು ಹೇಳಿದರು.
ಇಂದಿಗೂ ಹಲವಾರು ಜಿಲ್ಲೆಗಳ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಪೌರಸೇವಕರು ಕಡಿಮೆ ವೇತನದಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದಾರೆ. ಈ ಪದ್ಧತಿ ಹೋಗಲಾಡಿಸಿ ಶಾಶ್ವತ ಕೆಲಸ, ನೆಮ್ಮದಿ ಹಾಗೂ ಸದೃಢ ಆರೋಗ್ಯದ ನಿಟ್ಟಿನಲ್ಲಿ ಹೋರಾಟ ರೂಪಿಸುವ ಮೂಲಕ ಪೌರ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಸಮಾಜದ ಯಾವುದೇ ಕಾರ್ಯಕ್ರಮಗಳಲ್ಲಿ ಪೌರ ನೌಕರರ ಸೇವೆ ಅತ್ಯವಶ್ಯ. ದುಡಿಮೆಗೆ ತಕ್ಕಪ್ರತಿಫಲ ಸಿಗಲೇಬೇಕು. ಆ ನಿಟ್ಟಿನಲ್ಲಿ ನೌಕರರ ಜೊತೆ ರಕ್ತಸಂ ಬಂಧವಿಲ್ಲದಿದ್ದರೂ ಓರ್ವ ಸಹೋದರನಾಗಿ ಸಾಮಾಜಿಕ, ಆರ್ಥಿಕವಾಗಿ ಸಹಕಾರ ನೀಡುವ ಮೂಲಕ ಕೈ ಜೋಡಿಸುತ್ತೇನೆ ಎಂದು ತಿಳಿಸಿದರು.
ಬಿ.ಆರ್.ಅಂಬೇಡ್ಕರ್ರವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂರು ಅಂಶಗಳನ್ನು ಸದ್ಬಳಿಸಿ ಕೊಳ್ಳಬೇಕು. ಮುಖ್ಯವಾಗಿ ಶಿಕ್ಷಣದ ಮೂಲಕ ಹುಲಿಯಂತೆ ಘರ್ಜಿಸಬೇಕು. ಅನ್ಯಾಯದ ವಿರುದ್ಧ ಸಂಘಟ ನಾತ್ಮಕವಾಗಿ ತಯಾರಾಗಿ ನ್ಯಾಯಕ್ಕಾಗಿ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ನ್ಯಾಯಾಧೀಶ ಹನುಮಂತಪ್ಪ ಮಾತನಾಡಿ, ಒಂದು ಕಾಲದಲ್ಲಿ ರಾಜಮಹಾರಾಜರ ಕುಟುಂಬವೇ ಆಳ್ವಿ ಕೆ ನಡೆಸಬೇಕಾಗಿತ್ತು. ಅಂಬೇಡ್ಕರ್ ಮತದಾನ ಹಕ್ಕನ್ನು ನೀಡಿ ರಾಷ್ಟçದ ಪ್ರಜೆಗಳು ಸೂಕ್ತ ನಾಯಕರನ್ನು ಆರಿ ಸಲು ಅವಕಾಶ ಕಲ್ಪಿಸುವ ಮೂಲಕ ಪ್ರಜೆಗಳನ್ನು ಆಳ್ವಿಕೆಯ ಒಂದುಭಾಗವಾಗಿಸಿದರು ಎಂದರು.
ದೇಶವು ಸ್ವಾತಂತ್ರ್ಯಗೊಂಡು ಏಳುವರೆ ದಶಕ ಪೂರೈಸಿದರೂ ದೀನದಲಿತರ ಮೇಲೆ ದೌರ್ಜನ್ಯ, ಅಸ್ಪ ಶ್ಯತೆ ಹಾಗೂ ಅತ್ಯಾಚಾರಗಳು ತಾಂಡವವಾಡುತ್ತಿವೆ. ಕ್ಷಲಕ ಕಾರಣಕ್ಕೆ ಕೈಗಳನ್ನು ಕತ್ತರಿಸಿರುವ ಉದಾಹರಣೆ ಗಳಿವೆ ಎಂದ ಅವರು ಇವುಗಳ ವಿರುದ್ಧ ದಿಟ್ಟತನದಿಂದ ಹೋರಾಡಲು ಅಂಬೇಡ್ಕರ್ ಚಿಂತನೆ ಅತ್ಯಗತ್ಯ ಎಂ ದು ತಿಳಿಸಿದರು.
ಸಂಘದ ನೂತನ ಜಿಲ್ಲಾಧ್ಯಕ್ಷ ಮುರುಗೇಶ್ ಮಾತನಾಡಿ ಕಾರ್ಮಿಕರ ನೋವು, ಬದುಕಿನ ಬವಣೆಯ ನ್ನು ನಿವಾರಿಸುವುದೇ ಸಂಘದ ಮೂಲಧ್ಯೇಯ. ಒಗಟ್ಟಿನಲ್ಲಿ ಬಲವಿರುವ ಕಾರಣ ಎಲ್ಲರೂ ಒಕ್ಕೊರಲಿನಿಂದ ಖಾಯಂಗೊಳಿಸುವ ಸಂಬಂಧ ಅಧಿಕಾರಿಗಳ ವರ್ಗದ ವಿರುದ್ಧ ಹೋರಾಟ ರೂಪಿಸಿದರೆ ಖಂಡಿತವಾಗಿ ಕಾರ್ಮಿಕರ ಬದುಕು ಹಸನಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಪದಾಧಿಕಾರಿಗಳು : ಮುರುಗೇಶ್ (ಅಧ್ಯಕ್ಷ), ಸಿ.ಬಿ.ನಾಗರಾಜ್ (ಗೌರವಾಧ್ಯಕ್ಷ), ಪ್ರವೀಣ್ಕು ಮಾರ್ (ಪ್ರ.ಕಾರ್ಯದರ್ಶಿ), ದೇವೇಂದ್ರ, ಹನುಮಂತ, ನಾಗರಾಜ್, ಬಿ.ಎ.ಭರತ್ (ಉಪಾಧ್ಯಕ್ಷರು), ವೆಂಕಟರಾಮ್ (ಸಹ ಕಾರ್ಯದರ್ಶಿ), ಪ್ರದೀಪ್ (ಖಜಾಂಚಿ). ಮಹಿಳಾ ಘಟಕ : ಸುಮಾ (ಅಧ್ಯಕ್ಷೆ), ಗೀತಾ (ಪ್ರ.ಕಾರ್ಯದರ್ಶಿ), ಸುನೀತಾ, ಕಣ್ಣಮ್ಮ (ಉಪಾಧ್ಯಕ್ಷರು), ಶೈಲಮ್ಮ, ಸರಸ್ವತಿ (ಸಹ ಕಾರ್ಯದರ್ಶಿ), ಜ್ಯೋತಿ (ಖಜಾಂಚಿ).
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ನಗರಸಭಾ ಸದಸ್ಯರಾದ ಮುನೀರ್ಅಹ್ಮದ್, ಗೋಪಿ, ರಿಯಾಜ್, ಮಾಜಿ ಸದಸ್ಯ ಸಿ.ನರ ಸಿಂಹ, ಮೈಸೂರು ವಿಭಾಗೀಯ ಸಂಚಾಲಕ ಕೀರ್ತಿ ಕುಮಾರ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷö್ಮಣ್, ವಕೀಲರ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ಮುಖಂಡರುಗಳಾದ ಹೊನ್ನೇಶ್, ರಮೇಶ್, ಅನಿಲ್ಆನಂದ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.