ಚಿಕ್ಕಮಗಳೂರು, ಜೂನ್ 13:- ರಾಷ್ಟ್ರದ ಸಮಗ್ರತೆ ಹಾಗೂ ಐಕ್ಯತೆಯನ್ನು ಎತ್ತಿಹಿಡಿಯಲು ಕಾರ್ಯ ಕರ್ತರು ಮಾನಸಿಕವಾಗಿ ಸಜ್ಜಾಗಬೇಕು. ವಿಕಸಿತ ಭಾರತದ ಅಭಿವೃದ್ದಿಯನ್ನು ಸಮಾಜದ ಮುಂದಿಡಲು ಪಕ್ಷಾತೀತವಾಗಿ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ನಗರ ಮಂಡಲದಿಂದ ಶುಕ್ರವಾರ ನಡೆದ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ 11 ವರ್ಷ ಪೂರೈಸಿದ ಅಂಗವಾಗಿ ವಿಕಸಿತ ಭಾರತ ಸಂಕಲ್ಪ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದಿನ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ನಿರುದ್ಯೋಗ, ಬಡತನ, ನಕ್ಸಲ್ ಹಾಗೂ ಭಯೋತ್ಪಾದನೆ ಚಟುವಟಿಕೆಗಳಿಂದ ನಲುಗಿ ಹೋಗಿತ್ತು. 2014ರಲ್ಲಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇ ಶದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ರಾಷ್ಟçವನ್ನು ಬಲಿಷ್ಟ ಗೊಳಿಸಲು ಮುಂದಾದರು.

ಭಾರತ ಸ್ವಾತಂತ್ರö್ಯಗೊAಡು ಏಳು ದಶಕ ಪೂರೈಸಿದರೂ ಬಡವರ ಪಾಲಿಗೆ ಕನಸಾಗಿದ್ಧ ಬ್ಯಾಂಕ್ ಖಾ ತೆ, ಅಡುಗೆ ಸಿಲಿಂಡರ್, ಜನೌಷಧಿ ಕೇಂದ್ರ ತೆರೆದರು. ಯುವಕರ ಸ್ವಾವಲಂಬಿ ಬದುಕಿಗೆ ಕೌಶಾಲ್ಯಾಭಿ ವೃದ್ದಿ ತರಬೇತಿ ನೀಡಿದರು. ಅಲ್ಲದೇ ಪ್ರತಿದಿನವು ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿಗೊಳಿಸಿ ಅಸಾಧ್ಯವಾಗಿದ್ದನ್ನು ಸಾ ಧ್ಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ದೇಶದ ಕೋಟ್ಯಾಂತರ ಜನರ ದೈನಂದಿನ ವ್ಯಾಪಾರವನ್ನು ಡಿಜಿಟಲೀಕರಣಗೊಳಿಸಿದ ಪರಿಣಾಮ ಇಂದು ದೇಶದಲ್ಲಿ 24 ಲಕ್ಷ ಕೋಟಿ ವಹಿವಾಟು ಯುಪಿಐನಿಂದ ನಡೆಯುತ್ತಿದೆ. ಕೋವಿಡ್ ವೇಳೆಯಲ್ಲಿ ಆತ್ಮ ನಿರ್ಭಾರ ಪ್ಯಾಕೇಜ್ ಘೋಷಣೆ ಹಾಗೂ ದೇಶದ ಪ್ರಜೆಗಳು ಸೇರಿದಂತೆ ವಿದೇಶಗಳಿಗೂ ಕೋವಿಡ್ ಲಸಿಕೆ ಯನ್ನು ವಿತರಿಸಿದ ದೇಶವೆಂದರೆ ಭಾರತ ಎಂದರು.
ದೇಶದ 285 ಜಿಲ್ಲೆಗಳಲ್ಲಿ ಸೂಕ್ಷö್ಮವಾಗಿ ಅಡಗಿದ್ದ ನಕ್ಸಲ್ ಚಟುವಟಿಕೆ ಕಡಿವಾಣಕ್ಕೆ ಮುನ್ನುಡಿ ಬರೆದ ವರು ಮೋದಿ. ಕಾಂಗ್ರೆಸ್ ಅವಧಿಯಲ್ಲಿ ಮಂಡಿಯೂರಿ ನಿಲ್ಲಿಸಿದ್ಧ ದೇಶವನ್ನು ಭುಜದೆತ್ತರಕ್ಕೆ ಕೊಂಡೊ ಯ್ದು ರಾಷ್ಟçದ ಪ್ರಗತಿಗೆ ಭದ್ರಬುನಾದಿ ಹಾಕಿದವರು. ಭಾರತದ ನೆಲದಲ್ಲಿ ವಿದೇಶಿ ಪ್ರಖ್ಯಾತ ಕಂಪನಿಗಳ ತಯಾರಿಕಾ ಘಟಕ ಸ್ಥಾಪಿಸಲು ಮೋದಿಯವರ ಸ್ನೇಹತ್ವವೇ ಕಾರಣ ಎಂದು ಹೇಳಿದರು.

ವಿಶ್ವಮಟ್ಟದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟçವಾಗಲು ಕಾರ್ಯಕರ್ತರು ಜೊತೆಗೆ ಜನಸಾಮಾ ನ್ಯರು ತಮ್ಮ ಜವಾಬ್ದಾರಿ ಅರಿತು ದೇಶದ ಕರ್ತವ್ಯ ನೆನಪು ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾ ರದ ಜನಪರ ಆಡಳಿತ ಯೋಜನೆಗಳನ್ನು ಜಿಲ್ಲೆ, ಹೋಬಳಿ, ವಾರ್ಡ್ ಹಾಗೂ ಬೂತ್ಗಳಲ್ಲಿ ನಿರಂತರವಾ ಗಿ ಕಾರ್ಯಾಗಾರ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಭಾರತೀಯರ ಶಾಂತಿ ಕದಡಲು ಯತ್ನಿಸುತ್ತಿದ್ದ ನೆರೆದೇಶ ಪಾಕಿಸ್ತಾವನ್ನು ಮೋದಿ ಆಡಳಿತದಲ್ಲಿ ಎರ್ ಮತ್ತು ಸರ್ಜಿಕಲ್ ಸ್ಟೆçöÊಕ್, ಉರಿ ಮುಖಾಂತರ ತಕ್ಕಪಾಠ ಕಲಿಸಿದೆ. ಈಚೆಗೆ ಆಪರೇಷನ್ ಸಿಂಧೂರ್ದ ಮೂ ಲಕ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಒಂಟಿಕಾಲಿನಲ್ಲಿ ನಿಲ್ಲುವಂತೆ ಮಾಡಲು ಮೋದಿಯವರ ಆಡಳಿತ ವೈಖರಿಯೇ ಕಾರಣವಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ ವಾಜಪೇಯಿ ಬಳಿಕ ದೇಶದ ಆರ್ಥಿಕತೆ, ರಕ್ಷಣೆ ವಿಚಾರದಲ್ಲಿ ಮುಂಚೂಣಿ ನಾಯಕರಾಗಿ ರಾಷ್ಟçಕ್ಕಾಗಿ ದುಡಿಯುತ್ತಿರುವ ನರೇಂದ್ರ ಮೋದಿಯವರು ಸದಾಕಾಲ ದೇಶದ ಮಕ್ಕಳ ಭವಿಷ್ಯ, ಜನತೆಗೆ ಬೆಂಗವಲಾಗಿ ನಿಂತಿರುವುದು ಶ್ಲಾಘನೀಯ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಗುಜರಾತ್ನಲ್ಲಿ 15 ವರ್ಷ ಮುಖ್ಯಮಂತ್ರಿ ಹಾಗೂ ಪ್ರಧಾನಿಗಳಾಗಿ 11 ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ದೇಶದ ಸುಮಾರು 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, 29 ಕೋಟಿ ಬ್ಯಾಂಕ್ಖಾತೆಗೆ ಅಡಿಪಾಯ ಹಾಗೂ ಭಾರತೀಯ ಕನಸಾಗಿದ್ದ ಶ್ರೀರಾಮಮಂದಿರದ ನಿರ್ಮಾಣಕ್ಕೆ ಕಾರಣೀಭೂತರಾದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪ್ರೇಮ್ಕುಮಾರ್, ಕೋಟೆ ರಂಗನಾಥ್, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರಸಭಾ ಸದಸ್ಯ ಮಧುಕುಮಾರ್ರಾಜ್ ಅರಸ್, ಮುಖಂ ಡರುಗಳಾದ ಬಸವರಾಜ್, ಕೌಶಿಕ್, ವೆಂಕಟೇಶ್ ಅರಸ್ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.