ಚಿಕ್ಕಮಗಳೂರು, ಜೂನ್ 13:- ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಲ್ಲೂ ಶಿಸ್ತು, ದೇಶ ಪ್ರೇಮ ಹಾಗೂ ಬದುಕಿನ ಶಿಕ್ಷಣವನ್ನು ಒದಗಿಸಲು ಸ್ಕೌಟ್ಸ್-ಗೈಡ್ಸ್ ಕಾರ್ಯಪ್ರವೃತ್ತವಾಗಿದೆ ಎಂದು ರಾಜ್ಯ ಸ್ಕೌಟ್ಸ್- ಗೈಡ್ಸ್ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ನಗರದ ಸ್ಕೌಟ್ ಭವನದಲ್ಲಿ ಗುರುವಾರ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 2024-25ನೇ ಸಾಲಿ ನ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟçಮಟ್ಟ ದಲ್ಲಿ ಪರೀಕ್ಷೆಗಳನ್ನು ಎದುರಿಸಲು ಮತ್ತು ಪ್ರಶಸ್ತಿ ಗಳಿಸಲು ಸೂಕ್ತ ಶಿಕ್ಷಣ ಬೋಧಿಸುವ ಮುಂದಾಲೋಚನೆ ಹೊಂದಿದ್ದು ಆಸಕ್ತಿ ಹೊಂದಿರುವ ಆಯ್ದ ಮಕ್ಕಳನ್ನು ಗುರುತಿಸಿ ಸಂಸ್ಥೆಯಿಂದ ಪ್ರೋತ್ಸಾಹಿಸಲಾಗುವುದು ಎಂದರು.

ವಿಶೇಷವಾಗಿ ಸರ್ಕಾರಿ ಶಾಲಾಮಕ್ಕಳಿಗೆ ಹೆಚ್ಚಿನ ಸಹಕಾರ ನೀಡುವ ಆಲೋಚನೆಯಿದೆ. ಜೊತೆಗೆ ಜಿಲ್ಲೆ ಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳನ್ನು ಸಮಾಜದ ಮುಂಚೂಣಿಗೆ ಕರೆತಂದು ಬದುಕಿನ ಪಾಠವನ್ನು ಬೋಧಿ ಸುವ ಕಾಯಕವನ್ನು ಸಂಸ್ಥೆ ಅನೇಕ ವರ್ಷಗಳಿಂದ ಮಾಡುತ್ತಿದೆ ಎಂದು ಹೇಳಿದರು.
ಸ್ಕೌಟ್ಸ್ ಜಿಲ್ಲಾ ಆಯುಕ್ತ ಎಂ.ಎನ್.ಷಡಕ್ಷರಿ ಮಾತನಾಡಿ ಸರ್ಕಾರಿ ಶಾಲೆಯ ಸ್ಕೌಟ್ಸ್-ಗೈಡ್ಸ್ ಮಕ್ಕಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲೆಯ ಗ್ರಾ.ಪಂ. ಆಡಳಿತಕ್ಕೆ ಕೋರಲಾಗಿದ್ದು. ಪಂಚಾಯಿತಿ ದೇಣಿಗೆ ದೊರೆತಲ್ಲಿ ಸ್ಕೌಟ್ಸ್ ಮಕ್ಕಳಿಗೆ ಸಮವಸ್ತç, ಶೂಗಳನ್ನು ಪೂರೈಸುತ್ತೇವೆ ಎಂದು ತಿಳಿಸಿದರು.
ಸ್ಕೌಟ್ಸ್ ಜಿಲ್ಲಾ ಖಜಾಂಚಿ ಕೆ.ಎನ್.ರಮೇಶ್ 2024-25ನೇ ಸಾಲಿನ ಜಮಾ, ಖರ್ಚು ಮತ್ತು ಆಡಿಟ್ ವರದಿಯನ್ನು ಮಂಡಿಸಿದರು. ಕಾರ್ಯದರ್ಶಿ ನೀಲಕಂಠಚಾರ್ ಪ್ರಸಕ್ತ ಸಾಲಿನ ಕಾರ್ಯ ಯೋಜನೆ ಮತ್ತು ಆಯವ್ಯಯ ಮುಂಗಡ ಪತ್ರ ಓದಿ ಸಭೆಯ ಅನುಮೋದನೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಗೈಡ್ಸ್ ಜಿಲ್ಲಾ ಆಯುಕ್ತ ಡಿ.ಎಸ್.ಮಮತ, ಸಂಘಟಕ ಕಿರಣ್ಕುಮಾರ್ ಹಾಗೂ ವಿವಿಧ ತಾಲ್ಲೂಕು ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಶಿಕ್ಷಕರು ಹಾಗೂ ಅಧಿಕಾರಿಗಳಿದ್ದರು.
- ಸುರೇಶ್ ಎನ್.