ಚಿಕ್ಕಮಗಳೂರು-ಆಹಾರ ಪ್ಯಾಕೆಟ್ ವಿತರಿಸುವ ಕಾರ್ಯ ಶ್ಲಾಘನೀಯ- ಡಾ|| ಮೋಹನ್

ಚಿಕ್ಕಮಗಳೂರು, ಮೇ.29:– ಬಡರೋಗಿಗಳು ಹೆಚ್ಚು ದಾಖಲಾಗುವ ಜಿಲ್ಲಾಸ್ಪತ್ರೆಗಳಿಗೆ ಪ್ರತಿದಿನವು ಆ ಹಾರದ ಪ್ಯಾಕೆಟ್‌ಗಳನ್ನು ವಿತರಿಸುವ ಮೂಲಕ ಮಲಬಾರ್ ಗ್ರೂಪ್ ಸಾಮಾಜಿಕವಾಗಿ ಸ್ಪಂದಿಸುತ್ತಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ|| ಮೋಹನ್‌ಕುಮಾರ್ ಹೇಳಿದರು.

ನಗರದ ಕೆ.ಎಂ.ರಸ್ತೆ ಸಮೀಪ ಮಲಬಾರ್ ಗೋಲ್ಡ್ ಶಾಖಾ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ‘ಹಸಿವು ಮುಕ್ತ ದಿನ’ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಸಿಎಸ್‌ಆರ್ ಯೋಜನೆಯಿಂದ 2.50 ಕೋಟಿ ರೂ. ವೆಚ್ಚ ದಲ್ಲಿ 70 ಸಾವಿರ ಆಹಾರ ಪ್ಯಾಕೇಟ್‌ಗಳನ್ನು ನಿರಂತರವಾಗಿ ವಿತರಿಸಿದ್ದು ಅದರಂತೆ ಜಿಲ್ಲಾಸ್ಪತ್ರೆಯಲ್ಲೂ 150 ಆಹಾರ ಪ್ಯಾಕೇಟ್‌ಗಳನ್ನು ರೋಗಿ ಆಪ್ತರಿಗೆ ವಿತರಿಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.

ಮಲಬಾರ್ ಗ್ರೂಪ್ ವಾರ್ಷಿಕ ಬಜೆಟ್‌ನ 60 ಪ್ರತಿ ಶತವನ್ನು ಆರೋಗ್ಯ, ಶಿಕ್ಷಣ, ರಕ್ಷಣೆ, ಹಸಿವು, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಮೀಸಲಿಟ್ಟು ಬಡವರ ಕಲ್ಯಾಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಸ್ತುತ ಜಿಲ್ಲಾಸ್ಪತ್ರೆಗೆ ರೋಗಿಗಳ ತುರ್ತು ಆರೈಕೆ ದೃಷ್ಟಿಯಿಂದ ಮಲಬಾರ್ ಸಂಸ್ಥೆ ಸಿಎಸ್‌ಆರ್ ಯೋ ಜನೆಯಿಂದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಬೇಕು ಎಂದ ಅವರು ಮುಂದಿನ ದಿನ ಗಳಲ್ಲಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಬಡವರ್ಗದವರಿಗೆ ಕೈಹಿಡಿಯುವಂತಾಗಲಿ ಎಂದರು.

ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಪ್ರತಿದಿನವು ಆಹಾರ ಪ್ಯಾಕೇಟ್‌ಗಳನ್ನು ವಿತ ರಿಸುತ್ತಿರುವ ಶ್ಲಾಘನೀಯ. ಆಸ್ತಿ, ಅಂತಸ್ತು ಕೂಡಿಟ್ಟರೆ ಬದುಕಿನಲ್ಲಿ ಏನನ್ನು ಸಾಧಿಸಲಾಗದು. ಆದರೆ ನಾಲ್ಕೈದು ಮಂದಿಗೆ ಸಹಾಯಹಸ್ತ ಚಾಚಿದರೆ ಜೀವನ ಸಾರ್ಥಕವಾಗಲಿದೆ ಎಂಬುದು ಮಲಬಾರ್ ಸಂಸ್ಥೆಯ ಕಾರ್ಯವೇ ಉದಾಹರಣೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶಂಭುಲಿಂಗೇಗೌಡ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನ ಜಿಲ್ಲಾ ಶಾಖೆಯ ಮುಖ್ಯಸ್ಥ ಶ್ರೀನಾಥ್, ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *