ಚಿಕ್ಕಮಗಳೂರು-ತಂಬಾಕು ಆರೋಗ್ಯವನ್ನು ಹಾಳುಗೆಡಗುವ ಪದಾರ್ಥ -ಜಿಲ್ಲಾ ಆಯುಷ್ ಅಧಿಕಾರಿ ಗೀತಾ

ಚಿಕ್ಕಮಗಳೂರು, ಮೇ.31:- ತಂಬಾಕು ಸೇವನೆಯಿಂದ ಆರೋಗ್ಯವು ಹದಗೆಡುವ ಜೊತೆಗೆ ಶಾರೀರಿಕ ಹಾಗೂ ಮಾನಸಿಕವಾಗಿ ಕುಗ್ಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಗೀತಾ ಹೇಳಿದರು.

ತಾಲ್ಲೂಕಿನ ಕೆ.ಆರ್.ಪೇಟೆ ಸಮೀಪದ ಬೂದನಿಕೆ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋ ಜನೆ ಅಂಬಳೆ ವಲಯದಿಂದ ಶನಿವಾರ ನಡೆದ ವಿಶ್ವ ತಂಬಾಕು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಆರೋಗ್ಯವನ್ನು ನಾವೆ ಕಾಪಾಡಬೇಕು. ತಂಬಾಕು ಸೇವನೆಯಿಂದಾಗುವ ಅನಾರೋಗ್ಯ ಸಮಸ್ಯೆ ಗಳು ಹೆಚ್ಚಾಗಿ ಮನುಷ್ಯನನ್ನು ಕಾಡಲಿದೆ. ಹೆಚ್ಚು ಸೊಪ್ಪು ತರಕಾರಿ ಸೇವಿಸಬೇಕು. ಅಲ್ಲದೇ ಉಪ್ಪಿನ ಬಳಕೆ ಕಡಿಮೆ ಮಾಡಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವುದು, ಅಡುಗೆ ಮನೆ ಸ್ವಚ್ಛತೆ, ಬಿಸಿ ನೀರು ಕುಡಿ ಯಬೇಕು ಎಂದರು.‌

ಹೆಚ್ಚು ಸಮಯ ನಿದ್ದೆ ಮಾಡಬಾರದು, ಯೋಗ ಧ್ಯಾನ ಮಾಡಬೇಕು, ಮಹಿಳೆಯರಲ್ಲಿ ಬರುವ ರೋಗ ಲಕ್ಷಣಗಳ ಗಮನಹರಿಸಬೇಕು. ಮನೆ ಮದ್ದುಗಳಿಂದ ಆರೋಗ್ಯ ಸರಿಪಡಿಸಿಕೊಳ್ಳುವ ಮಾಹಿತಿಗಳನ್ನು ಹಂಚಿ ಕೊಂಡರು. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಬಹಳ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿರು ವುದು ಸಂತಸ ತಂದಿದೆ ಎಂದರು.

ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ದಿನೇಶ್ ಮಾತನಾಡಿ ಹದಿಹರೆಯದ ವಯಸ್ಸಿನಲ್ಲಿ ಯುವ ಕರು ತಂಬಾಕು ಪದಾರ್ಥಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ಶಾಶ್ವತವಾಗಿ ತಡೆಗಟ್ಟಲು ಮೊದಲು ಉತ್ಪಾದಿ ಸುವ ಕಂಪನಿಗಳ ನಿಲ್ಲಿಸುವ ಪ್ರಯತ್ನಿಸಬೇಕು. ಹೀಗಾಗಿ ಯುವಸಮೂಹ ಉಜ್ವಲ ಭವಿಷ್ಯದತ್ತ ಹೆಚ್ಚು ಚಿಂ ತಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ , ಖುಷಿ ಕೇಂದ್ರದ ಹಿರಿಯ ಸದಸ್ಯೆ ಮೂಟಮ್ಮ, ಸೇವಾಪ್ರತಿನಿಧಿ ಪ್ರಶಾಂತ್, ಶೋಭಾ, ಸಂಪ್ರಿತಾ, ನಿವೇದಿತಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರುತಿ ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *