ಚಿಕ್ಕಮಗಳೂರು : ನಗರದ ಧರ್ಮಸ್ಥಳ ಸಂಘದ ಜಿಲ್ಲಾ ಕಚೇರಿ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ನಿರ್ದೇಶಕ ಶ್ರೀ ಸದಾನಂದ ಬಂಗೇರ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಿಗೆ ಉತ್ತಮ ಗಾಳಿ, ನೀರು, ಪ್ರಶಾಂತವಾದ ವಾತವರಣ ಅಗತ್ಯವಾಗಿದೆ ಇದಕ್ಕಾಗಿ ಪರಿಸರ ರಕ್ಷಣೆ ಮಾಡುವುದು ಎಲ್ಲರ ಹೊಣೆ. ಉತ್ತಮ ಗಿಡ ಮರಗಳು ಇದ್ದರೆ ಪ್ರಾಣಿ ಪಕ್ಷಿಗಳು ಹಾಗು ಮನುಷ್ಯರು ಆರೋಗ್ಯವಂತ ಸಮಾಜದಲ್ಲಿ ಬದುಕಬಹುದಾಗಿದೆ. ಪರಿಸರ ರಕ್ಷಣೆ ಜೊತೆಗೆ ಅದನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಸಂದೇಶ್, ಚಿಕ್ಕಮಗಳೂರು 1 ಕ್ಷೇತ್ರ ಯೋಜನೆಅಧಿಕಾರಿ ರೂಪಾ ಜೈನ್, ಚಿಕ್ಕಮಗಳೂರು ಕ್ಷೇತ್ರ 2 ರ ಯೋಜನಧಿಕಾರಿ ರಮೇಶ್, ಸಿ.ಹೆಚ್.ಎಸ್.ಸಿ ಯೋಜನೆ ಅಧಿಕಾರಿ ದಯಾನಂದ್, ಎಲ್ಲಾ ಪ್ರಬಂದಕರು, ಕಚೇರಿಯ ಸಿಬ್ಬಂದಿಗಳು, ಸಹಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.|
– ಸುರೇಶ್ ಎನ್.