ಚಿಕ್ಕಮಗಳೂರು-ಎಲ್‌ಜಿಕೆ-ಯುಜಿಕೆ ತರಗತಿ ಪ್ರಾರಂಭ ಶ್ಲಾಘನೀಯ -ಮೂಡಿಗೆರೆ ಶಾಸಕಿ ನಯನ ಮೋಟಮ್ಮ

ಚಿಕ್ಕಮಗಳೂರು, ಜೂನ್ 05:- ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಮಾದರಿಯ ತರಗತಿಗಳನ್ನು ತೆರೆದು ಪೌಷ್ಠಿಕ ಆಹಾರ ಮತ್ತು ಗುಣಮಟ್ಟದ ಶಿಕ್ಷಣ ಪೂರೈಸುತ್ತಿರುವುದು ಶ್ಲಾಘನೀಯ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.

ತಾಲ್ಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು, ಸ್ಥಳೀಯರು ಹಾಗೂ ಶಾಲಾಡಳಿತ ಸಹಕಾರದಿಂದ 2025-26 ನೇ ಸಾಲಿನ ಆಂಗ್ಲ ಮತ್ತು ಕನ್ನಡಮಾಧ್ಯಮ ಎಲ್‌ಕೆಜಿ-ಯುಕೆಜಿ ತರಗತಿಗಳಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪಾಲಕರ ಆಶಯದಂತೆ ಗ್ರಾಮೀಣ ಭಾಗದಲ್ಲೂ ಎಲ್‌ಕೆಜಿ-ಯುಕೆಜಿ ತರಗತಿ ತೆರೆದು ಹೆಜ್ಜೆಯಿಟ್ಟಿರುವ ಮುಗುಳುವಳ್ಳಿ ಶಾಲೆ ಮೆಚ್ಚುವಂತ ಕೆಲಸ. ಎಳೆವಯಸ್ಸಿನಲ್ಲಿ ಮಕ್ಕಳನ್ನು ತಿದ್ದುವ ಮಹಾತ್ತರ ಕಾರ್ಯ ಶಿಕ್ಷಕರ ಮೇಲಿರುವ ಕಾರಣ ಹೆಚ್ಚಿನ ಜವಾಬ್ದಾರಿಯನ್ನು ಶಾಲಾಡಳಿತ ವಹಿಸಬೇಕು ಎಂದು ಸೂಚಿಸಿದರು.

ಪ್ರಸ್ತುತ ಅಂಗನವಾಡಿ ಕೇಂದ್ರಗಳಲ್ಲಿ ಪುಟ್ಟ ಮಕ್ಕಳ ಆರೈಕೆ ಮಾಡಲಾಗುತ್ತಿದೆ. ಕಾಲಕ್ರಮೇಣ ಖಾಸಗೀ ಶಾಲೆಗಳು ಬೆಳೆದಂತೆ ಪ್ರತಿ ತರಗತಿಗಳನ್ನು ಪ್ರಾರಂಭಿಸುತ್ತಿರುವ ಕಾರಣ ಸರ್ಕಾರಿ ಶಾಲೆಗಳನ್ನು ಕ್ಷೀಣಿಸಲಾರಂಭಿಸಿದವು. ಇದೀಗ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತೆರೆದು ಶಾಲೆಗಳನ್ನು ಉಳಿಸುವಂಥ ಕೆಲಸ ಸ್ಥಳೀಯರು ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ರಾಜ್ಯಸರ್ಕಾರ ಕಳೆದ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಜಿಕೆ ಆರಂಭಿಕವಾಗಿ ತೆರೆದು ಯಶಸ್ವಿಗೊಂಡಿತು. ಈ ಸಾಲಿನಲ್ಲಿ ತರಗತಿ ತೆರೆಯಲು ಪ್ರಕ್ರಿಯೆಯಲ್ಲಿದ್ದು ಸದ್ಯದಲ್ಲೇ ಸಂಬಂಧಿಸಿದ ಸಚಿವ ರೊಂದಿಗೆ ಭೇಟಿ ಮಾಡಿ ಗ್ರಾಮೀಣ ಬಡಮಕ್ಕಳಿಗೆ ಖಾಸಗೀ ಶಾಲೆಗಳಂತೆ ಎಲ್ಲಾ ಸೌಕರ್ಯಗಳನ್ನು ಒದಗಿ ಸುವುದಾಗಿ ಭರವಸೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಹಾಗೂ ಪರಿಸರವನ್ನು ಅಚ್ಚುಕಟ್ಟಾಗಿರಬೇಕು. ಮಕ್ಕಳಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಮನುಷ್ಯನಿಗೆ ಶಿಕ್ಷಣವಿಲ್ಲದಿದ್ದರೆ ಯಾರು ಬೇಕಾದರೂ ಯ ಮಾರಿಸಬಹುದು. ಶಿಕ್ಷಣವೆಂಬ ದೊಡ್ಡಅಸ್ತç ಕೈಯಲಿದ್ದಾರೆ ದಾರಿತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ವಿದ್ಯಾವಂತರಾಗಬೇಕು ಎಂದು ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್ ಮಾತನಾಡಿ ತಾಲ್ಲೂಕಿನಲ್ಲಿ ಸುಮಾರು 27 ಶಾಲೆಗಳಲ್ಲಿ ಎಲ್ ಕೆಜಿ-ಯುಕೆಜಿ ತರಗತಿ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದ್ದು ಅನುದಾನ ಬಿಡುಗಡೆಗೊಳ್ಳಬೇಕಿದೆ. ಅಲ್ಲದೇ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಸರಿದೂಗಿಸಲು ಅತಿಥಿ ಶಿಕ್ಷಕ ವರ್ಗವನ್ನು ನೇಮಿಸಿಕೊಂಡು ಸಮಗ್ರ ವಿದ್ಯಾಭ್ಯಾಸ ಪೂರೈಸುತ್ತಿದೆ ಎಂದರು.

ಇತ್ತೀಚೆಗೆ ಕಡುಬಡವನು ನೆರೆಯವರ ವ್ಯಾಮೋಹದಿಂದ ಖಾಸಗೀ ಶಾಲೆಗೆ ದಾಖಲಿಸಿ ಶುಲ್ಕ ಕಟ್ಟಲು ಒದ್ದಾಡುವ ಸ್ಥಿತಿಯಿದೆ. ಈ ನಡುವೆ ಸರ್ಕಾರಿ ಶಾಲೆ ಶಿಕ್ಷಣ, ಸಮವಸ್ತ್ರ ಸೇರಿದಂತೆ ಸಕಲ ಸವಲತ್ತನ್ನು ಉಚಿ ತವಾಗಿ ನೀಡಿದರೂ ಬರುತ್ತಿಲ್ಲ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಂಡು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು ಎಂದು ಸಲಹೆ ಮಾಡಿದರು.

ಶಾಲೆಯ ಮುಖ್ಯೋಪಾಧ್ಯಾಯ ಶೇಖರ್‌ನಾಯ್ಕ ಮಾತನಾಡಿ ಪ್ರಸ್ತುತ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಗೆ 16 ಮತ್ತು ಯುಕೆಜಿಗೆ 17 ಮಕ್ಕಳು ದಾಖಲಾಗಿದ್ದಾರೆ. ಜೊತೆಗೆ ಈರ್ವರು ಶಿಕ್ಷಕರು, ಓರ್ವ ಆಯಾ ಕೆಲಸ ಕ್ಕೆ ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗಿದ್ದು ಮಕ್ಕಳಿಗೆ ಸಮವಸ್ತç, ಬ್ಯಾಗ್, ಶೂ, ಲೇಖನಿ, ನೋಟ್‌ಪುಸ್ತಕ ಹಾಗೂ ಶಿಕ್ಷಕರಿಗೆ ವೇತನದ ಸಂಪೂರ್ಣ ವೆಚ್ಚವನ್ನು ದಾನಿ, ಸ್ಥಳೀಯರು ಹಾಗೂ ಶಾಲಾಡಳಿತ ವಹಿಸಿ ಕೊಂಡಿದೆ ಎಂದರು.

ಅಂಬಳೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ರಾಜ್ಯಸರ್ಕಾರ ಗ್ರಾಮೀಣ ಮ ಕ್ಕಳು ಶಿಕ್ಷಣದಿಂದ ವಂಚಿತರಾಗದೇ ಮೂಲಸವಲತ್ತು ನೀಡಿ ಪ್ರೋತ್ಸಾಹಿಸುತ್ತಿದೆ. ಆ ಹಿನ್ನೆಲೆ ಪಾಲಕರು ಯಾ ವುದೇ ವ್ಯಾಮೋಹಕ್ಕೆ ಒಳಗಾಗದೇ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು ಎಂದ ಅವರು ದೇಶದ ಗಣ್ಯರು ಬದುಕಿನಲ್ಲಿ ಸಾಧನೆ ಮಾಡಲು ಸರ್ಕಾರಿ ಶಾಲೆಗಳು ಕಲಿತಂಥ ವಿದ್ಯೆಯೇ ಕಾರಣ ಎಂದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ರೂಪ, ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಡಿ.ರವಿ, ಪಿಡಿಓ ಸುಮಾ, ಅಕ್ಷರ ದಾಸೋಹ ಸಂಯೋಜಕ ನೀಲಕಂಠಪ್ಪ, ದೈಹಿಕ ಶಿಕ್ಷಣ ಪರವೀಕ್ಷಕ ಶೇರ್‌ಆಲಿ, ಶಾಲಾ ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

– ಸುರೇಶ್‌ ಎನ್.

Leave a Reply

Your email address will not be published. Required fields are marked *