ಚಿಕ್ಕಮಗಳೂರು, ಮೇ.28:- ಪ್ಯಾರಾಲಿಂಪಿಕ್ನ ಚಿನ್ನದ ಪದಕ ವಿಜೇತೆ ಕು.ರಕ್ಷಿತ ರಾಜ್ ಅವರಿಗೆ ಮಂಗಳವಾರ ಸಂಜೆ ನಗರದಲ್ಲಿ ಯುರೇಕಾ ಅಕಾಡೆಮಿ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ದೀಪಕ್ದೊಡ್ಡಯ್ಯ ಮುಂದಿನ 2028ರಲ್ಲಿ ಒಲಂಪಿಕ್ಸ್ನಲ್ಲಿ ಭಾಗವಹಿಸುತ್ತಿ ರುವ ಕು.ರಕ್ಷಿತ ಆ ಸ್ಪರ್ಧೆಯಲ್ಲೂ ಚಿನ್ನದ ಪದಕ ಗಳಿಸುವ ಮೂಲಕ ದೇಶದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ನಗರಾಧ್ಯಕ್ಷ ಸಚಿನ್ಸಿಂಗ್, ಭಾಜಪ ಮುಖಂಡರುಗಳಾದ ಶಶಿ ಆಲೂರು, ವರುಣ್ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.