ಅರಕಲಗೂಡು- ಮುಗುಳೂರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಜಾಗೃತಿ ಕಾರ್ಯಕ್ರಮ

ಅರಕಲಗೂಡು, ಜೂನ್ 11: ಅರಕಲಗೂಡು ತಾಲ್ಲೂಕಿನ ರಾಮನಾಥಪುರ ವಲಯದ ಮುಗುಳೂರು ಕಾರ್ಯ ಕ್ಷೇತ್ರದ ಶ್ರೀ ಆದರ್ಶ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ವತಿಯಿಂದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಗಣ್ಯರು, ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಆರೋಗ್ಯದ ಜೊತೆಗಿನ ನೇರ ಸಂಬಂಧದ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಅಧ್ಯಕ್ಷತೆಯನ್ನು ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷ A. R. ಕೇಶವ್ ಪ್ರಸಾದ್ ವಹಿಸಿದ್ದರು.

ಮುಖ್ಯ ಭಾಷಣ ಮಾಡಿದ ಗ್ರಾಮ ವಿಕಾಸ ಜಿಲ್ಲಾ ಪಾಲಕ ಸೋಮಶೇಖರ್ ಮತ್ತು ಯೋಜನಾಧಿಕಾರಿ ಪ್ರಕಾಶ್ ಮೊಗವೀರ ಪರಿಸರ ಜಾಗೃತಿ ಸೇರಿದಂತೆ ಯೋಜನೆಯ ವಿವಿಧ ಕಾರ್ಯಕ್ರಮಗಳ ಪರಿಚಯ ನೀಡಿದರು. ನಿವೃತ್ತ ನಿರ್ದೇಶಕ B. K. ಬಸವರಾಜು, ಅರಣ್ಯ ಇಲಾಖೆಯ ದೇವೇಂದ್ರ ಅವರು ಪರಿಸರ ರಕ್ಷಣೆ, ಗಿಡ ನೆಡುವ ಮಹತ್ವದ ಬಗ್ಗೆ ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳನ್ನು ಹಂಚಿದರು.

ಶಾಲಾ ನಿರ್ದೇಶಕ ಕೃಷ್ಣ, ಮುಖ್ಯ ಶಿಕ್ಷಕ ಶಿವರಾಮು, ಕೃಷಿ ಮೇಲ್ವಿಚಾರಕ ಸುನೀಲ್ ಕುಮಾರ್, CSC ನೋಡಲ್ ಅಧಿಕಾರಿ ಅಭಿಜಿತ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

– ಶಿಶಿ ಕುಮಾರ

Leave a Reply

Your email address will not be published. Required fields are marked *