Vibrant Mysore News https://vibrantmysorenews.com/ Vibrant Mysore News Thu, 22 May 2025 16:40:31 +0000 en-US hourly 1 https://wordpress.org/?v=6.8.1 https://i0.wp.com/vibrantmysorenews.com/wp-content/uploads/2024/08/cropped-vibrantmysorenews-logo-1.png?fit=32%2C32&ssl=1 Vibrant Mysore News https://vibrantmysorenews.com/ 32 32 183513056 ಎಚ್.ಡಿ.ಕೋಟೆ- ಇನ್ಸ್ ಪೆಕ್ಟರ್ ನಡೆಗೆ ಮಾಜಿ‌ ಶಾಸಕರ ಆಕ್ರೋಶ https://vibrantmysorenews.com/former-mlas-outraged-by-h-d-kote-inspectors-move/ https://vibrantmysorenews.com/former-mlas-outraged-by-h-d-kote-inspectors-move/#respond Thu, 22 May 2025 16:40:28 +0000 https://vibrantmysorenews.com/?p=17369 ಎಚ್.ಡಿ.ಕೋಟೆ: ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರ್ ಉಡಾಫೆಯಿಂದ ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಮುಖಂಡರು ಬುಧವಾರ ಪಟ್ಟಣದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 3 ದಿನಗಳ…

The post ಎಚ್.ಡಿ.ಕೋಟೆ- ಇನ್ಸ್ ಪೆಕ್ಟರ್ ನಡೆಗೆ ಮಾಜಿ‌ ಶಾಸಕರ ಆಕ್ರೋಶ appeared first on Vibrant Mysore News.

]]>

ಎಚ್.ಡಿ.ಕೋಟೆ: ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರ್ ಉಡಾಫೆಯಿಂದ ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಮುಖಂಡರು ಬುಧವಾರ ಪಟ್ಟಣದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

3 ದಿನಗಳ ಹಿಂದೆ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜೇಂದ್ರ, ಮಾಜಿ ಅಧ್ಯಕ್ಷ ನರಸಿಂಹೇಗೌಡ, ಪ್ರಕಾಶ್ ಮತ್ತಿತರರು ತಾಲೂಕಿನ ಜಿ.ಬಿ.ಸರಗೂರಿನ ಜಮೀನಿನ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಇನ್ಸ್ಪೆಕ್ಟರ್ ಗಂಗಾಧರ್ ಅಗೌರವದಿಂದ ನಡೆದುಕೊಂಡು ಉಡಾಫೆಯಿಂದ ಮಾತನಾಡಿ ಠಾಣೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ಸ್‌ಪೆಕ್ಟರ್ ನಡೆ ಖಂಡಿಸಿ ಬಿಜೆಪಿ, ಜೆಡಿಎಸ್‌ ಮುಖಂಡರು ಠಾಣೆಗೆ ಮುತ್ತಿಗೆ ಹಾಕಿ ಇನ್ಸ್‌ಪೆಕ್ಟರ್ ಅವರನ್ನು ತೀವ್ರ ತರಾಟೆ ತೆಗೆದು ಕೊಂಡರು.

ಇನ್ಸ್‌ಪೆಕ್ಟ‌ರ್ ಗಂಗಾಧರ್ ನಾನು ಯಾರೊಂದಿಗೂ ಅಗೌರವದಿಂದ ನಡೆದುಕೊಂಡಿಲ್ಲ.ಉಡಾಫೆಯಿಂದ ಮಾತನಾಡಿಲ್ಲ ಎಂದಾಗ ಕೆಲ ಕಾಲ‌ ಮಾತಿನ ಚಕಮಖಿ ನಡೆದು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕೆಲವು ದಾಖಲೆಗಳ ಆಧಾರದ ಮೇಲೆ ಎಲ್ಲರ ಸಮಸ್ಯೆಗಳಿಗೂ‌ ಸ್ಪಂದಿಸುತ್ತೇನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ ನಂತರ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಠಾಣೆಯಿಂದ ಹೊರ ನಡೆದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜೇಂದ್ರ, ಬಿಜೆಪಿ ಅಧ್ಯಕ್ಷ ಶಂಭೇಗೌಡ, ನರಸಿಂಹೇಗೌಡ, ವೆಂಕಟಸ್ವಾಮಿ, ಎಂ.ಸಿ.ದೊಡ್ಡನಾಯಕ, ಸಿ.ವಿ.ನಾಗರಾಜು, ಮೊತ್ತ ಬಸವರಾಜಪ್ಪ, ಯೋಗನರಸಿಂಹೇಗೌಡ, ಶಾಂತಕುಮಾರ್, ಪುರಸಭಾ ಸದಸ್ಯರಾದ ನಾಗರಾಜು, ನಂಜಪ್ಪ, ಮೆಕಾನಿಕ್ ಸೂರಿ, ವಿವೇಕ್, ಜಿಮ್ ಯಶ್ವಂತ್, ಎಂ.ಡಿ.ಮಂಚಯ್ಯ, ಶಿವಕುಮಾರ್, ರಾಜಣ್ಣ, ನಾಗನಾಯಕ, ನಿಂಗೇಗೌಡ, ರಂಗಪ್ಪ, ಡಿ.ಆರ್.ಮಹೇಶ್ ಸೇರಿದಂತೆ ಮತ್ತಿತರರಿದ್ದರು.

– ಶಿವಕುಮಾರ

The post ಎಚ್.ಡಿ.ಕೋಟೆ- ಇನ್ಸ್ ಪೆಕ್ಟರ್ ನಡೆಗೆ ಮಾಜಿ‌ ಶಾಸಕರ ಆಕ್ರೋಶ appeared first on Vibrant Mysore News.

]]>
https://vibrantmysorenews.com/former-mlas-outraged-by-h-d-kote-inspectors-move/feed/ 0 17369
ತುಮಕೂರು-ಪರವಾನಗಿ ಭೂಮಾಪಕರನ್ನು ಖಾಯಂಗೊಳಿಸಿ- ರಾಜ್ಯಾಧ್ಯಕ್ಷ ತಿರುಮಲೇಗೌಡ https://vibrantmysorenews.com/tumkur-make-licensed-land-surveyors-permanent-state-president-tirumalegowda/ https://vibrantmysorenews.com/tumkur-make-licensed-land-surveyors-permanent-state-president-tirumalegowda/#respond Thu, 22 May 2025 13:46:11 +0000 https://vibrantmysorenews.com/?p=17365 ತುಮಕೂರು: ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಭೂಮಾಪಕರ ಸಂಘ(ರಿ), ಬೆಂಗಳೂರು ಇವರು ನಗರದ ಜೈನಭವನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ತಿರುಮಲೇಗೌಡ ಅವರ ನೇತೃತ್ವದಲ್ಲಿ ರಾಜ್ಯ ಸಂಘದ ಸದಸ್ಯತ್ವ ನೊಂದಣಿ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ತಿರುಮಲೇಗೌಡ,ರಾಜ್ಯದಲ್ಲಿ…

The post ತುಮಕೂರು-ಪರವಾನಗಿ ಭೂಮಾಪಕರನ್ನು ಖಾಯಂಗೊಳಿಸಿ- ರಾಜ್ಯಾಧ್ಯಕ್ಷ ತಿರುಮಲೇಗೌಡ appeared first on Vibrant Mysore News.

]]>

ತುಮಕೂರು: ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಭೂಮಾಪಕರ ಸಂಘ(ರಿ), ಬೆಂಗಳೂರು ಇವರು ನಗರದ ಜೈನಭವನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ತಿರುಮಲೇಗೌಡ ಅವರ ನೇತೃತ್ವದಲ್ಲಿ ರಾಜ್ಯ ಸಂಘದ ಸದಸ್ಯತ್ವ ನೊಂದಣಿ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ತಿರುಮಲೇಗೌಡ,ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ 3500 ರಿಂದ 4000 ಜನ ಪರವಾನಗಿ ಪಡೆದ ಭೂಮಾಪಕರು ಕೆಲಸ ಮಾಡುತ್ತಿದ್ದು, ಸರಕಾರ ನೀಡಿದ ಎಲ್ಲಾ ಕೆಲಸ, ಕಾರ್ಯಗಳನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಸರಕಾರದಿಂದ ನಮಗೆ ತಲುಪಬೇಕಾದ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ತಲುಪಿಲ್ಲದಿರುವುದು ವಿಷಾದದ ಸಂಗತಿಯಾಗಿದೆ.

ಜನರ ನಡುವೆ ನೇರವಾಗಿ ಕೆಲಸ ಮಾಡುವ ನಮಗೆ ಕೆಲಸ,ಕಾರ್ಯದ ವೇಳೆ ಎಡರು, ತೊಡರುಗಳಿದ್ದರೂ ಅವುಗಳನ್ನು ನಿಭಾಯಿಸಿಕೊಂಡು, ಸರಕಾರ ನಿಗಧಿ ಮಾಡಿದ ಸಮಯಕ್ಕೆ ಕೊಟ್ಟ ಕೆಲಸವನ್ನು ಮಾಡಿ, ಮುಗಿಸಿ ವರದಿ ನೀಡಿರುತ್ತೇವೆ. ಆದರೆ ಸರಕಾರ ಮಾತ್ರ ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ.ಹಾಗಾಗಿ ಕಳೆದ 23 ವರ್ಷಗಳ ನಮ್ಮಗಳ ಸೇವೆಯನ್ನು ಪರಿಗಣಿಸಿ,ನಮ್ಮ ಸೇವೆಯನ್ನು ಖಾಯಂಗೊಳಿಸಿ, ನಮ್ಮನ್ನು ಸರಕಾರಿ ಭೂಮಾಪಕರೆಂದು ಪರಿಗಣಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಪಡೆದ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಮಾತನಾಡಿ,ಕಳೆದ 23 ವರ್ಷಗಳಿಂದ ಸರಕಾರದ ಪರವಾನಗಿ ಪಡೆದ ಭೂಮಾಪಕರು ಸರಕಾರದ ಯಾವುದೇ ಭತ್ಯೆ, ವೇತನ ಪಡೆಯದೆ ರೈತರು ನೀಡಿದ ಶುಲ್ಕವನ್ನು ಪಡೆದ ಕೆಲಸ ಮಾಡುತ್ತಾ ಬಂದಿದ್ದೇವೆ.

ಸೇವಾ ಭದ್ರತೆ ಇಲ್ಲದೆ ಅತಿ ಕಡಿಮೆ ಗೌರವ ಧನಕ್ಕೆ ಕೆಲಸ ಮಾಡುತ್ತಿದ್ದ ನಮ್ಮ ಮನವಿಗಳನ್ನು ಸರಕಾರ ನಿರ್ಲಕ್ಷ ಮಾಡುತ್ತಾ ಬಂದ ಹಿನ್ನೆಲೆಯಲ್ಲಿ, ಈಗ ಸಂಘಟಿತರಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಮುಂದಾಗಿದ್ದೇವೆ.ನಮ್ಮಗಳ ಸೇವೆಯನ್ನು ಖಾಯಂಗೊಳಿಸಿ, ನಮ್ಮನ್ನು ಸರಕಾರಿ ಭೂಮಾಪಕರಾಗಿ ಪರಿಗಣಿಸಬೇಕುಎಂಬುದು ನಮ್ಮ ಏಕೈಕ ಬೇಡಿಕೆಯಾಗಿದೆ.

ನಮ್ನ ಸೇವೆ ಖಾಯಂ ಗೊಳಿಸುವವರೆಗೆ ಕನಿಷ್ಠ ವೇತನದ ಅಡಿಯಲ್ಲಿ ವೇತನ ನೀಡಬೇಕೆಂಬುದು ನಮ್ಮ ಒತ್ತಾಯ. ಇದಕ್ಕೆ ಎಲ್ಲಾ ಸರಕಾರಿ ಪರವಾನಗಿ ಪಡೆದ ಭೂ ಮಾಪಕರು ಒಗ್ಗೂಡಿ ಹೋರಾಟ ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವೇದಿಕೆಯಲ್ಲಿ ಪ್ರಸನ್ನಕುಮಾರ್, ಸಿದ್ದರಾಜು, ಕೋದಂಡರಾಮು, ದ್ವಾರಕೀಶ್, ಸತೀಶ್ , ಪ್ರಭುರಾಜ್, ಷಣ್ಮುಖ, ರಾಜಣ್ಣ, ಬಚ್ಚೇಗೌಡ,ಪ್ರಾಣೇಶ್, ಬಸವರಾಜು ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

-ಕೆ.ಬಿ.ಚಂದ್ರಚೂಡ

The post ತುಮಕೂರು-ಪರವಾನಗಿ ಭೂಮಾಪಕರನ್ನು ಖಾಯಂಗೊಳಿಸಿ- ರಾಜ್ಯಾಧ್ಯಕ್ಷ ತಿರುಮಲೇಗೌಡ appeared first on Vibrant Mysore News.

]]>
https://vibrantmysorenews.com/tumkur-make-licensed-land-surveyors-permanent-state-president-tirumalegowda/feed/ 0 17365
ತುಮಕೂರು-ಧ್ವನಿ ಎತ್ತದೆ ದೌರ್ಜನ್ಯದಿಂದ ಬಿಡುಗಡೆ ಇಲ್ಲ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ https://vibrantmysorenews.com/tumkur-there-is-no-relief-from-violence-without-raising-your-voice-karnataka-state-womens-commission-chairperson-nagalakshmi-chaudhary/ https://vibrantmysorenews.com/tumkur-there-is-no-relief-from-violence-without-raising-your-voice-karnataka-state-womens-commission-chairperson-nagalakshmi-chaudhary/#respond Thu, 22 May 2025 13:31:51 +0000 https://vibrantmysorenews.com/?p=17359 ತುಮಕೂರು: ನಾವು ಸಮಾನವಾಗಿ, ಭ್ರಷ್ಟಾಚಾರ ರಹಿತ, ಶೋಷಣೆ ಇಲ್ಲದ, ಸಮಾಜದಲ್ಲಿ ಬದುಕಬೇಕು. ಅದಕ್ಕಾಗಿ ಹೋರಾಟ ಬಹಳ ಮುಖ್ಯ. ಎಲ್ಲಿಯವರೆಗೆ ನಾವು ಧ್ವನಿ ಎತ್ತಿ ಪ್ರಶ್ನಿಸದೆ ಸಹಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ…

The post ತುಮಕೂರು-ಧ್ವನಿ ಎತ್ತದೆ ದೌರ್ಜನ್ಯದಿಂದ ಬಿಡುಗಡೆ ಇಲ್ಲ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ appeared first on Vibrant Mysore News.

]]>

ತುಮಕೂರು: ನಾವು ಸಮಾನವಾಗಿ, ಭ್ರಷ್ಟಾಚಾರ ರಹಿತ, ಶೋಷಣೆ ಇಲ್ಲದ, ಸಮಾಜದಲ್ಲಿ ಬದುಕಬೇಕು. ಅದಕ್ಕಾಗಿ ಹೋರಾಟ ಬಹಳ ಮುಖ್ಯ. ಎಲ್ಲಿಯವರೆಗೆ ನಾವು ಧ್ವನಿ ಎತ್ತಿ ಪ್ರಶ್ನಿಸದೆ ಸಹಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣ ಕೇಂದ್ರ, ಬೆಂಗಳೂರು ಮತ್ತು ಈದಿನ ಡಾಟ್ ಕಾಮ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಅರಿವೇ ಅಂಬೇಡ್ಕರ್’ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಕಾನೂನು ಜ್ಞಾನವನ್ನು ಹೊಂದಿರಬೇಕು. ಅಸಮಾನತೆ ಗುಲಾಮಗಿರಿಯ ಬದುಕನ್ನು ಬದುಕದೆ ತಮ್ಮ ಹಕ್ಕುಗಳ ಬಗ್ಗೆ ತಿಳಿಯಲು ಹೋರಾಡಿ, ಅನ್ಯಾಯದ ವಿರುದ್ಧ ತಲೆಯೆತ್ತಿದರೆ ಮಾತ್ರ ನಾವು ಬದಲಾವಣೆಯನ್ನು ತರಲು ಸಾಧ್ಯ. ಉತ್ತಮ ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿಯು ಸಹ ತಮ್ಮ ಸುತ್ತಲಿನ ಪ್ರದೇಶದ ಜನರ ಅಭಿವೃದ್ಧಿಯನ್ನು ಬಯಸಿದರೆ ಅಂತಹವರಲ್ಲಿ ಅಂಬೇಡ್ಕರ್ ಅವರನ್ನು ಕಾಣಬಹುದು ಎಂದರು.

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಎ.ನಾರಾಯಣ ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನದ ಅರಿವು ತುಂಬಾ ಅಗಾಧವಾದದ್ದು. ನಮ್ಮ ದೇಶದಲ್ಲಿ ಅನೇಕ ಪೌರಾಣಿಕ, ಧಾರ್ಮಿಕ, ಗ್ರಂಥ, ದೇವರು, ಸಮಾಜ ಸುಧಾರಕರು, ರಾಜ – ಮಹಾರಾಜರು ಬಂದಿದ್ದರೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೀಳಾಗಿ ಕಾಣುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮೀಸಲಾತಿಗಳ ಕುರಿತು ತಪ್ಪು ಅಭಿಪ್ರಾಯದ ಬಗ್ಗೆ ಪ್ರಶ್ನೆ ಮಾಡಲು ಯಾರಿಗೂ ಧೈರ್ಯ ಬರಲಿಲ್ಲ. ಈ ಎಲ್ಲದರ ಬಗ್ಗೆ ತಿಳಿಯಲು ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, ಅಂಬೇಡ್ಕರ್ ನಿಜವಾದ ಮಾನವತಾವಾದಿ. ಅವರ ಜ್ಞಾನದ ಆಳ ಅರಿವುಗಳನ್ನು ಸೇರಿಸಿ ಒಂದು ಗ್ರಂಥಾಲಯವನ್ನೇ ತೆರೆಯಬಹುದಾಗಿದೆ. ಹಾಗೆಯೇ ಅಂಬೇಡ್ಕರ್ ಸಂವಿಧಾನದಲ್ಲಿ ಹೆಣ್ಣು ಮಕ್ಕಳ ಹಕ್ಕು ಅಧಿಕಾರ ಕುರಿತು ಹೆಚ್ಚು ಮಹತ್ವವನ್ನು ನೀಡಿದ್ದು, ಆ ಕಾನೂನುಗಳ ಸರಿಯಾದ ಬಳಕೆಯ ಬಗ್ಗೆ ಸಲಹೆಗಳನ್ನು ನೀಡಿ, ಎಲ್ಲರೂ ಉತ್ತಮ ಜೀವನ ನಡೆಸಲು ಅಂಬೇಡ್ಕರ್ ಆದರ್ಶವಾಗಿದ್ದಾರೆ ಎಂದರು.

ತುಮಕೂರು ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ ಇದೊಂದು ವಿದ್ಯಾರ್ಥಿಗಳಿಗೆ ಚೈತನ್ಯ ತುಂಬವ ಕಾರ್ಯಕ್ರಮವಾಗಿದ್ದು ನಮ್ಮೆಲ್ಲರ ನಿಜ ಜೀವನದ ಪ್ರತಿ ಕೆಲಸದಲ್ಲಿಯೂ ಅಂಬೇಡ್ಕರ್ ಜೀವಂತವಾಗಿ ಇದ್ದಾರೆ ಎಂದು ಹೇಳಿದರು.
ತುಮಕೂರು ವಿವಿಯ ಕುಲಸಚಿವೆ ನಾಹಿದ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಸಿಂಡಿಕೇಟ್ ಸದಸ್ಯರಾದ ಶಿವಣ್ಣ ಎಂ.ಟಿ., ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಕೇಶವ, ಪತ್ರಕರ್ತ ಚಂದನ್ ಡಿ.ಎನ್.ಉಪಸ್ಥಿತರಿದ್ದರು.

– ಕೆ.ಬಿ.ಚಂದ್ರಚೂಡ

The post ತುಮಕೂರು-ಧ್ವನಿ ಎತ್ತದೆ ದೌರ್ಜನ್ಯದಿಂದ ಬಿಡುಗಡೆ ಇಲ್ಲ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ appeared first on Vibrant Mysore News.

]]>
https://vibrantmysorenews.com/tumkur-there-is-no-relief-from-violence-without-raising-your-voice-karnataka-state-womens-commission-chairperson-nagalakshmi-chaudhary/feed/ 0 17359
ತುಮಕೂರು-ಧ್ವನಿ ಎತ್ತದೆ ದೌರ್ಜನ್ಯದಿಂದ ಬಿಡುಗಡೆ ಇಲ್ಲ- ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ https://vibrantmysorenews.com/tumkur-there-is-no-freedom-from-violence-without-raising-ones-voice-nagalakshmi-chaudhary/ https://vibrantmysorenews.com/tumkur-there-is-no-freedom-from-violence-without-raising-ones-voice-nagalakshmi-chaudhary/#respond Thu, 22 May 2025 13:23:20 +0000 https://vibrantmysorenews.com/?p=17354 ತುಮಕೂರು: ನಾವು ಸಮಾನವಾಗಿ, ಭ್ರಷ್ಟಾಚಾರ ರಹಿತ, ಶೋಷಣೆ ಇಲ್ಲದ, ಸಮಾಜದಲ್ಲಿ ಬದುಕಬೇಕು. ಅದಕ್ಕಾಗಿ ಹೋರಾಟ ಬಹಳ ಮುಖ್ಯ. ಎಲ್ಲಿಯವರೆಗೆ ನಾವು ಧ್ವನಿ ಎತ್ತಿ ಪ್ರಶ್ನಿಸದೆ ಸಹಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ…

The post ತುಮಕೂರು-ಧ್ವನಿ ಎತ್ತದೆ ದೌರ್ಜನ್ಯದಿಂದ ಬಿಡುಗಡೆ ಇಲ್ಲ- ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ appeared first on Vibrant Mysore News.

]]>

ತುಮಕೂರು: ನಾವು ಸಮಾನವಾಗಿ, ಭ್ರಷ್ಟಾಚಾರ ರಹಿತ, ಶೋಷಣೆ ಇಲ್ಲದ, ಸಮಾಜದಲ್ಲಿ ಬದುಕಬೇಕು. ಅದಕ್ಕಾಗಿ ಹೋರಾಟ ಬಹಳ ಮುಖ್ಯ. ಎಲ್ಲಿಯವರೆಗೆ ನಾವು ಧ್ವನಿ ಎತ್ತಿ ಪ್ರಶ್ನಿಸದೆ ಸಹಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣ ಕೇಂದ್ರ, ಬೆಂಗಳೂರು ಮತ್ತು ಈದಿನ ಡಾಟ್ ಕಾಮ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಅರಿವೇ ಅಂಬೇಡ್ಕರ್’ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಕಾನೂನು ಜ್ಞಾನವನ್ನು ಹೊಂದಿರಬೇಕು. ಅಸಮಾನತೆ ಗುಲಾಮಗಿರಿಯ ಬದುಕನ್ನು ಬದುಕದೆ ತಮ್ಮ ಹಕ್ಕುಗಳ ಬಗ್ಗೆ ತಿಳಿಯಲು ಹೋರಾಡಿ, ಅನ್ಯಾಯದ ವಿರುದ್ಧ ತಲೆಯೆತ್ತಿದರೆ ಮಾತ್ರ ನಾವು ಬದಲಾವಣೆಯನ್ನು ತರಲು ಸಾಧ್ಯ. ಉತ್ತಮ ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿಯು ಸಹ ತಮ್ಮ ಸುತ್ತಲಿನ ಪ್ರದೇಶದ ಜನರ ಅಭಿವೃದ್ಧಿಯನ್ನು ಬಯಸಿದರೆ ಅಂತಹವರಲ್ಲಿ ಅಂಬೇಡ್ಕರ್ ಅವರನ್ನು ಕಾಣಬಹುದು ಎಂದರು.

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಎ.ನಾರಾಯಣ ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನದ ಅರಿವು ತುಂಬಾ ಅಗಾಧವಾದದ್ದು. ನಮ್ಮ ದೇಶದಲ್ಲಿ ಅನೇಕ ಪೌರಾಣಿಕ, ಧಾರ್ಮಿಕ, ಗ್ರಂಥ, ದೇವರು, ಸಮಾಜ ಸುಧಾರಕರು, ರಾಜ – ಮಹಾರಾಜರು ಬಂದಿದ್ದರೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೀಳಾಗಿ ಕಾಣುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮೀಸಲಾತಿಗಳ ಕುರಿತು ತಪ್ಪು ಅಭಿಪ್ರಾಯದ ಬಗ್ಗೆ ಪ್ರಶ್ನೆ ಮಾಡಲು ಯಾರಿಗೂ ಧೈರ್ಯ ಬರಲಿಲ್ಲ. ಈ ಎಲ್ಲದರ ಬಗ್ಗೆ ತಿಳಿಯಲು ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ ಅಂಬೇಡ್ಕರ್ ನಿಜವಾದ ಮಾನವತಾವಾದಿ. ಅವರ ಜ್ಞಾನದ ಆಳ ಅರಿವುಗಳನ್ನು ಸೇರಿಸಿ ಒಂದು ಗ್ರಂಥಾಲಯವನ್ನೇ ತೆರೆಯಬಹುದಾಗಿದೆ. ಹಾಗೆಯೇ ಅಂಬೇಡ್ಕರ್ ಸಂವಿಧಾನದಲ್ಲಿ ಹೆಣ್ಣು ಮಕ್ಕಳ ಹಕ್ಕು ಅಧಿಕಾರ ಕುರಿತು ಹೆಚ್ಚು ಮಹತ್ವವನ್ನು ನೀಡಿದ್ದು, ಆ ಕಾನೂನುಗಳ ಸರಿಯಾದ ಬಳಕೆಯ ಬಗ್ಗೆ ಸಲಹೆಗಳನ್ನು ನೀಡಿ, ಎಲ್ಲರೂ ಉತ್ತಮ ಜೀವನ ನಡೆಸಲು ಅಂಬೇಡ್ಕರ್ ಆದರ್ಶವಾಗಿದ್ದಾರೆ ಎಂದರು.

ತುಮಕೂರು ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ ಇದೊಂದು ವಿದ್ಯಾರ್ಥಿಗಳಿಗೆ ಚೈತನ್ಯ ತುಂಬವ ಕಾರ್ಯಕ್ರಮವಾಗಿದ್ದು ನಮ್ಮೆಲ್ಲರ ನಿಜ ಜೀವನದ ಪ್ರತಿ ಕೆಲಸದಲ್ಲಿಯೂ ಅಂಬೇಡ್ಕರ್ ಜೀವಂತವಾಗಿ ಇದ್ದಾರೆ ಎಂದು ಹೇಳಿದರು.

ತುಮಕೂರು ವಿವಿಯ ಕುಲಸಚಿವೆ ನಾಹಿದ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಸಿಂಡಿಕೇಟ್ ಸದಸ್ಯರಾದ ಶಿವಣ್ಣ ಎಂ.ಟಿ., ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಕೇಶವ, ಪತ್ರಕರ್ತ ಚಂದನ್ ಡಿ.ಎನ್.ಉಪಸ್ಥಿತರಿದ್ದರು.

-ಕೆ.ಬಿ.ಚಂದ್ರಚೂಡ

The post ತುಮಕೂರು-ಧ್ವನಿ ಎತ್ತದೆ ದೌರ್ಜನ್ಯದಿಂದ ಬಿಡುಗಡೆ ಇಲ್ಲ- ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ appeared first on Vibrant Mysore News.

]]>
https://vibrantmysorenews.com/tumkur-there-is-no-freedom-from-violence-without-raising-ones-voice-nagalakshmi-chaudhary/feed/ 0 17354
ಕೆ.ಆರ್.ಪೇಟೆ-ದಾನಿಯ ಹೆಸರಿನಲ್ಲಿ ತಾಯಿ-ಮಗು ಆಸ್ಪತ್ರೆ – ದಾನ ಪರಂಪರೆಯ ಗೌರವಕ್ಕೆ ಶಾಸಕರ ಸೂಚನೆ https://vibrantmysorenews.com/k-r-pete-mother-and-child-hospital-in-the-name-of-the-donor-mlas-instructions-to-respect-the-legacy-of-donation/ https://vibrantmysorenews.com/k-r-pete-mother-and-child-hospital-in-the-name-of-the-donor-mlas-instructions-to-respect-the-legacy-of-donation/#respond Wed, 21 May 2025 17:03:48 +0000 https://vibrantmysorenews.com/?p=17348 ಕೆ.ಆರ್.ಪೇಟೆ, ಮೇ 21: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ತಾಯಿ-ಮಗು ಆಸ್ಪತ್ರೆಗೆ ನೂರಾರು ಕೋಟಿ ಮೌಲ್ಯದ ಏಳು ಎಕರೆ ಭೂಮಿಯನ್ನು ದಾನವಾಗಿ ನೀಡಿದ ಹೊಸಹೊಳಲಿನ ದಾನಿಯರಾದ ದಿವಂಗತ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರಿಡಬೇಕೆಂದು ಶಾಸಕ ಹೆಚ್.ಟಿ. ಮಂಜು…

The post ಕೆ.ಆರ್.ಪೇಟೆ-ದಾನಿಯ ಹೆಸರಿನಲ್ಲಿ ತಾಯಿ-ಮಗು ಆಸ್ಪತ್ರೆ – ದಾನ ಪರಂಪರೆಯ ಗೌರವಕ್ಕೆ ಶಾಸಕರ ಸೂಚನೆ appeared first on Vibrant Mysore News.

]]>

ಕೆ.ಆರ್.ಪೇಟೆ, ಮೇ 21: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ತಾಯಿ-ಮಗು ಆಸ್ಪತ್ರೆಗೆ ನೂರಾರು ಕೋಟಿ ಮೌಲ್ಯದ ಏಳು ಎಕರೆ ಭೂಮಿಯನ್ನು ದಾನವಾಗಿ ನೀಡಿದ ಹೊಸಹೊಳಲಿನ ದಾನಿಯರಾದ ದಿವಂಗತ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರಿಡಬೇಕೆಂದು ಶಾಸಕ ಹೆಚ್.ಟಿ. ಮಂಜು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ದುಂಡುಶೆಟ್ಟಿ ಲಕ್ಷ್ಮಮ್ಮ ಅವರು ಹಲವು ದಶಕಗಳ ಹಿಂದೆ ಸರ್ಕಾರಿ ಆಸ್ಪತ್ರೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಭೂಮಿ ದಾನ ಮಾಡಿದ ಮಹಾನ್ ದಾನಿ. ಇಂತಹ ದಾನಿಗಳ ಸ್ಮರಣಾರ್ಥ ತಾಯಿ-ಮಗು ಆಸ್ಪತ್ರೆಗೆ ಅವರ ಹೆಸರಿಡುವುದು ಸಮಾಜದ ಕರ್ತವ್ಯ,” ಎಂದ ಅವರು ಹೇಳಿದರು. ಈ ಬಗ್ಗೆ ಸರ್ಕಾರಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಯ ಸೇವೆಯ ಕುರಿತು ಕಟ್ಟುನಿಟ್ಟಾದ ಸೂಚನೆ

ಅಸ್ಪತ್ರೆಯ ಸಿಬ್ಬಂದಿ, ದಾದಿಯರು ಹಾಗೂ ಡಿ ಗ್ರೂಪ್ ನೌಕರರ ವಿರುದ್ಧ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದು, ರೋಗಿಗಳ ಜೊತೆ ಮೃದುವಾಗಿ ಹಾಗೂ ಸೌಜನ್ಯದಿಂದ ವರ್ತಿಸುವಂತೆ ಶಾಸಕರು ಸಲಹೆ ನೀಡಿದರು. “ವೈದ್ಯರು ನಿಸ್ವಾರ್ಥ ಸೇವೆ ಮಾಡುವುದರಿಂದ ಜನರ ನಂಬಿಕೆ ಸುಧಾರಿಸುತ್ತದೆ. ಅಗತ್ಯ ಔಷಧಿಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಕಳುಹಿಸದೇ ಆಸ್ಪತ್ರೆಯಲ್ಲಿಯೇ ನೀಡಬೇಕು. ಔಷಧಿಗಳ ಕೊರತೆಯಾಗದಂತೆ ಮುಂಗಡದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು,” ಎಂದು ಅವರು ತಿಳಿಸಿದರು.

ಆಸ್ಪತ್ರೆಯ ಶುಚಿತ್ವಕ್ಕೆ ಆದ್ಯತೆ

“ಪ್ರತಿದಿನ ಒಳರೋಗಿಗಳ ಹಾಸಿಗೆ ಬದಲಿ ಮಾಡಬೇಕು. ಆಸ್ಪತ್ರೆ ಆವರಣ ಸ್ವಚ್ಛವಾಗಿರಬೇಕು. ಗರ್ಭಿಣಿ ಮಹಿಳೆಯರಿಗೆ ಹಾಗೂ ತುರ್ತು ಚಿಕಿತ್ಸೆಗಾಗಿ ಉಚಿತ ಆಂಬುಲೆನ್ಸ್ ಸೌಲಭ್ಯವನ್ನು ಸುಲಭವಾಗಿ ತಲುಪಿಸಬೇಕು,” ಎಂಬ ಸೂಚನೆಗಳು ಶಾಸಕರಿಂದ ಬಂದುವು.

ಸಭೆಗೆ ಮುನ್ನ ಶಾಸಕರು ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ನೇರ ಸಂಭಾಷಣೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು.

ಪಾಂಡವಪುರ ಉಪವಿಭಾಗಾಧಿಕಾರಿ ಡಾ. ಕೆ.ಆರ್. ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ. ಸುಷ್ಮಾ, ತಾ.ಆರೋಗ್ಯಾಧಿಕಾರಿ ಡಾ. ಅಜಿತ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್, ಹಾಗೂ ರಕ್ಷಾ ಸಮಿತಿಯ ಸದಸ್ಯರು, ವೈದ್ಯರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.

The post ಕೆ.ಆರ್.ಪೇಟೆ-ದಾನಿಯ ಹೆಸರಿನಲ್ಲಿ ತಾಯಿ-ಮಗು ಆಸ್ಪತ್ರೆ – ದಾನ ಪರಂಪರೆಯ ಗೌರವಕ್ಕೆ ಶಾಸಕರ ಸೂಚನೆ appeared first on Vibrant Mysore News.

]]>
https://vibrantmysorenews.com/k-r-pete-mother-and-child-hospital-in-the-name-of-the-donor-mlas-instructions-to-respect-the-legacy-of-donation/feed/ 0 17348
ಕೆ.ಆರ್.ಪೇಟೆ-ಆರ್.ಟಿ.ಓ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಪೇಟೆಯಲ್ಲಿ ಬೃಹತ್ ಆರೋಗ್ಯ ಮೇಳ, ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ https://vibrantmysorenews.com/k-r-pete-rto-mallikarjuns-birthday-is-celebrated-with-a-huge-health-fair-blood-donation-camp-and-talent-award-in-k-r-pete/ https://vibrantmysorenews.com/k-r-pete-rto-mallikarjuns-birthday-is-celebrated-with-a-huge-health-fair-blood-donation-camp-and-talent-award-in-k-r-pete/#respond Wed, 21 May 2025 16:57:41 +0000 https://vibrantmysorenews.com/?p=17343 ಕೆ.ಆರ್.ಪೇಟೆ, ಮೇ 21: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ನಿನ್ನೆ (ಮೇ 20) ಪ್ರತಿಭಾ ಪುರಸ್ಕಾರ, ಬೃಹತ್ ಆರೋಗ್ಯ ಮೇಳ ಹಾಗೂ…

The post ಕೆ.ಆರ್.ಪೇಟೆ-ಆರ್.ಟಿ.ಓ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಪೇಟೆಯಲ್ಲಿ ಬೃಹತ್ ಆರೋಗ್ಯ ಮೇಳ, ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ appeared first on Vibrant Mysore News.

]]>

ಕೆ.ಆರ್.ಪೇಟೆ, ಮೇ 21: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ನಿನ್ನೆ (ಮೇ 20) ಪ್ರತಿಭಾ ಪುರಸ್ಕಾರ, ಬೃಹತ್ ಆರೋಗ್ಯ ಮೇಳ ಹಾಗೂ ರಕ್ತದಾನ ಶಿಬಿರ ನಡೆಯಿತು. ಈ ಮಹತ್ವದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಟ್ರಸ್ಟ್‌ನ ಪರವಾಗಿ ಟ್ರಸ್ಟಿ ಗಂಜೀಗೆರೆ ಮಹೇಶ್ ಅವರು ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಕಾರ್ಯಕ್ರಮಕ್ಕೆ ಶ್ರೀ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ನೇತೃತ್ವದ ಅಖಿಲ ಭಾರತ ಲಿಂಗಾಯತ ಪೀಠದ ಹಲವಾರು ಪರಮ ಪೂಜ್ಯ ಸ್ವಾಮೀಜಿಗಳು ಆಗಮಿಸಿ ಆಶೀರ್ವಾದ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಎಲ್. ದೇವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಸೇರಿದಂತೆ ವಿವಿಧ ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಿ.ಜಿ.ಎಸ್. ಆಸ್ಪತ್ರೆಯ ಜೊತೆಗೂಡಿ ರಾಜ್ಯದ ವಿವಿಧ ಖ್ಯಾತ ಆಸ್ಪತ್ರೆಗಳ ವೈದ್ಯರ ಸಹಕಾರದಿಂದ ನಡೆದ ಆರೋಗ್ಯ ಮೇಳದಲ್ಲಿ ಸುಮಾರು 3,000 ಜನರು ತಪಾಸಣೆಗೆ ಒಳಪಟ್ಟರು, ಅದರಲ್ಲಿ 250 ಜನರನ್ನು ಮುಂದಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಲಾಯಿತು. ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಸ್ಥಳದಲ್ಲಿಯೇ ಔಷಧಿ ವಿತರಣೆ ನಡೆಯಿತು.

ಅದೇ ಸಂದರ್ಭದಲ್ಲಿ 415 ಪ್ರತಿಭಾವಂತ ವಿದ್ಯಾರ್ಥಿಗಳು ಸನ್ಮಾನಿತರಾಗಿ ಗೌರವಿಸಲ್ಪಟ್ಟರು. ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳ ವಿತರಣೆ ಕೂಡ ನಡೆಯಿತು.

“ಕಾರ್ಯಕ್ರಮವು ಶ್ರೀಗಳು ಮತ್ತು ಭಕ್ತರ ಆಶೀರ್ವಾದದಿಂದ ಹಾಗೂ ಸಹಯೋಗದಿಂದ ಯಶಸ್ವಿಯಾಗಿ ನೆರವೇರಿತು. ಸಹಕರಿಸಿದ ಎಲ್ಲರಿಗೂ ಧನ್ಯವಾದ,” ಎಂದು ಟ್ರಸ್ಟಿ ಗಂಜೀಗೆರೆ ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಕೆ. ಹರಿಚರಣತಿಲಕ್, ಕೆ.ಆರ್. ನೀಲಕಂಠ, ಸಣ್ಣೇಗೌಡ, ಟಿ.ಎಂ. ದೇವರಾಜು, ಮಡುವಿನಕೋಡಿ ಉಮೇಶ್, ತಮ್ಮೇಗೌಡ ಮತ್ತು ಇತರರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

The post ಕೆ.ಆರ್.ಪೇಟೆ-ಆರ್.ಟಿ.ಓ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಪೇಟೆಯಲ್ಲಿ ಬೃಹತ್ ಆರೋಗ್ಯ ಮೇಳ, ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ appeared first on Vibrant Mysore News.

]]>
https://vibrantmysorenews.com/k-r-pete-rto-mallikarjuns-birthday-is-celebrated-with-a-huge-health-fair-blood-donation-camp-and-talent-award-in-k-r-pete/feed/ 0 17343
ಸಿಂಧುಘಟ್ಟ ಡೇರಿ ವರಿಷ್ಠರ ಚುನಾವಣೆ: ಲಾಟರಿ ಮೂಲಕ ಒಲಿದ ಅದೃಷ್ಠ-ಅಧ್ಯಕ್ಷರಾಗಿ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಆಯ್ಕೆ https://vibrantmysorenews.com/sindhughatta-dairy-board-election-unlucky-lotteries-s-r-hemanthakumar-elected-as-president-s-m-ravi-as-vice-president/ https://vibrantmysorenews.com/sindhughatta-dairy-board-election-unlucky-lotteries-s-r-hemanthakumar-elected-as-president-s-m-ravi-as-vice-president/#respond Wed, 21 May 2025 16:47:41 +0000 https://vibrantmysorenews.com/?p=17337 ಕೆ.ಆರ್.ಪೇಟೆ,ಮೇ.21: ತಾಲ್ಲೂಕಿನ ಸಿಂಧುಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ. ಈ ಹಿಂದೆ ಎರಡು ಭಾರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 6ಮಂದಿ ನಿರ್ದೇಶಕರು ಹಾಜರಾಗುತ್ತಿದ್ದರು. ಆದರೆ…

The post ಸಿಂಧುಘಟ್ಟ ಡೇರಿ ವರಿಷ್ಠರ ಚುನಾವಣೆ: ಲಾಟರಿ ಮೂಲಕ ಒಲಿದ ಅದೃಷ್ಠ-ಅಧ್ಯಕ್ಷರಾಗಿ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಆಯ್ಕೆ appeared first on Vibrant Mysore News.

]]>

ಕೆ.ಆರ್.ಪೇಟೆ,ಮೇ.21: ತಾಲ್ಲೂಕಿನ ಸಿಂಧುಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ.

ಈ ಹಿಂದೆ ಎರಡು ಭಾರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 6ಮಂದಿ ನಿರ್ದೇಶಕರು ಹಾಜರಾಗುತ್ತಿದ್ದರು. ಆದರೆ ಕಾಂಗ್ರೆಸ್-ರೈತ ಸಂಘ ಮೈತ್ರಿ ಕೂಟದ ನಿರ್ದೇಶಕರು ಗೈರು ಹಾಜರಾಗುತ್ತಿದ್ದರು. ಮೂರನೇ ಭಾರಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್-ಬಿಜೆಪಿಯಿಂದ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಎಂ.ರವಿ, ಕಾಂಗ್ರೆಸ್-ರೈತ ಸಂಘದಿಂದ ಅಧ್ಯಕ್ಷ ಸ್ಥಾನಕ್ಕೆ ಎಸ್.ಎಂ.ಮೋಹನ್‌ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಯ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ತಲಾ 6ಮತಗಳು ಚಲಾವಣೆ ಆದ ಕಾರಣ ಫಲಿತಾಂಶಕ್ಕಾಗಿ ಚುನಾವಣಾಧಿಕಾರಿಗಳು ಲಾಟರಿ ಮೊರೆ ಹೋದ ಕಾರಣ ಅಧ್ಯಕ್ಷರಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಅವರಿಗೆ ವಿಜಯಲಕ್ಷ್ಮಿ  ಒಲಿದು ಜಯಶೀಲರಾದರು. ಶಾಸಕರಾದ ಹೆಚ್.ಟಿ.ಮಂಜಣ್ಣ ಅವರಿಗೆ ಈ ಗೆಲುವು ಅರ್ಪಿಸುವುದಾಗಿ ಅಧ್ಯಕ್ಷ-ಉಪಾಧ್ಯಕ್ಷರು ತಿಳಿಸಿದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಡಿ.ಆಶಾ, ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ನಿಂಗರಾಜು ಕಾರ್ಯನಿರ್ವಹಿಸಿದರು.

ಈ ವೇಳೆ ಮಾತನಾಡಿ ಜೆಡಿಎಸ್ ಮುಖಂಡರಾದ ಎಸ್.ಐ.ಗಿರೀಶ್ ಅವರು ಡೇರಿ ಚುನಾವಣೆಯಲ್ಲಿ ನ್ಯಾಯಕ್ಕೆ ಕೊನೆಗೂ ಗೆಲುವು ಸಿಕ್ಕಿದೆ. ಎರಡು ಭಾರಿ ಚುನಾವಣೆಗೆ ಗೈರು ಹಾಜರಾಗಿ ಡೇರಿಗೆ ಸುಮಾರು 50ಸಾವಿರ ನಷ್ಟ ಉಂಟು ಮಾಡಿದ್ದಲ್ಲದೇ ವಾಮಮಾರ್ಗದಿಂದ ಅಧಿಕಾರಕ್ಕೇರಲು ಪ್ರಯತ್ನಿಸಿದ್ದ ಕಾಂಗ್ರೆಸ್-ರೈತ ಸಂಘದ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿದೆ. ದೇವರು ಒಳ್ಳೆಯತನಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾನೆ. ಎರಡು ಭಾರಿ ಗೈರು ಹಾಜರಾಗಿದ್ದವರಿಗೆ ಸೋಲಿನ ಶಿಕ್ಷೆ ನೀಡಿದ್ದಾನೆ ಎಂದು ಅಭಿಪ್ರಾಯಪಟ್ಟರು.

ನೂತನ ಅಧ್ಯಕ್ಷ ಎಸ್.ಆರ್.ಹೇಮಂತಕುಮಾರ್ ಮಾತನಾಡಿ ಸಂಘದ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರು ಹಾಗೂ ಮುಖಂಡರ ಸಹಕಾರ ಪಡೆದು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘಕ್ಕೆ ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ಎಸ್.ಎಂ.ರವಿ ಮಾತನಾಡಿ ಸಂಘದ ಅಭಿವೃದ್ದಿಗೆ ಅಧ್ಯಕ್ಷರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿ ಸಂಘವನ್ನು ಮತ್ತಷ್ಟು ಲಾಭದಾಯಕವಾಗಿ ಮುನ್ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಎಸ್.ಮೋಹನ್, ಶೋಭಾಮಂಜೇಗೌಡ, ಕೃಷ್ಣೇಗೌಡ, ಲೋಕೇಶ್, ಮುಖಂಡರಾದ ಗ್ರಾ.ಪಂ.ಮಾಜಿ ಅಧ್ಯಕ್ಷ ದಿವ್ಯಗಿರೀಶ್, ಗ್ರಾ.ಪಂ.ಸದಸ್ಯ ನವೀನ್‌ಕುಮಾರ್, ಮುಖಂಡರಾದ ಬಾಬು, ವೇಣುಗೋಪಾಲ್, ಹರೀಶ್, ಮಂಜುನಾಥ್, ಸೋಮೇಶ್, ರಂಗಣ್ಣ, ಮಧು, ಪ್ರಮೋದ್, ಮಂಜುನಾಥ್, ಮೋಹನ್, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್ ಆರ್.

The post ಸಿಂಧುಘಟ್ಟ ಡೇರಿ ವರಿಷ್ಠರ ಚುನಾವಣೆ: ಲಾಟರಿ ಮೂಲಕ ಒಲಿದ ಅದೃಷ್ಠ-ಅಧ್ಯಕ್ಷರಾಗಿ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಆಯ್ಕೆ appeared first on Vibrant Mysore News.

]]>
https://vibrantmysorenews.com/sindhughatta-dairy-board-election-unlucky-lotteries-s-r-hemanthakumar-elected-as-president-s-m-ravi-as-vice-president/feed/ 0 17337
ಧರ್ಮಸ್ಥಳ-ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಐಎಸ್‌ಒ 27001-2022ರ ಗರಿ ದೇಶದಲ್ಲಿಯೇ ಪ್ರಥಮ ಪ್ರಶಸ್ತಿ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ https://vibrantmysorenews.com/dharamsthala-sri-kshetra-dharamsthala-village-development-scheme-has-won-the-first-award-in-the-country-under-iso-27001-2022-for-dharamsthala-village-development-scheme/ https://vibrantmysorenews.com/dharamsthala-sri-kshetra-dharamsthala-village-development-scheme-has-won-the-first-award-in-the-country-under-iso-27001-2022-for-dharamsthala-village-development-scheme/#respond Wed, 21 May 2025 13:19:35 +0000 https://vibrantmysorenews.com/?p=17329 ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನ ಬಳಕೆ, ಸುರಕ್ಷತೆ, ಬದ್ಧತೆ, ಬ್ಯಾಂಕ್ ಮೂಲಕ ನಡೆಸುವ ವ್ಯವಹಾರಗಳ ದಾಖಲಾತಿ ನಿರ್ವಹಣೆ, ಕಾರ್ಯಕರ್ತರ ಕಾರ್ಯಕುಶಲತೆ, ವರದಿಗಳ ತಯಾರಿ ಮತ್ತು ಬಳಕೆ, ವ್ಯವಹಾರದಲ್ಲಿ ನೈಪುಣ್ಯತೆ ಮೊದಲಾದ 114 ಅಂಶಗಳಲ್ಲಿ 109 ಪ್ರಮುಖ…

The post ಧರ್ಮಸ್ಥಳ-ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಐಎಸ್‌ಒ 27001-2022ರ ಗರಿ ದೇಶದಲ್ಲಿಯೇ ಪ್ರಥಮ ಪ್ರಶಸ್ತಿ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ appeared first on Vibrant Mysore News.

]]>

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನ ಬಳಕೆ, ಸುರಕ್ಷತೆ, ಬದ್ಧತೆ, ಬ್ಯಾಂಕ್ ಮೂಲಕ ನಡೆಸುವ ವ್ಯವಹಾರಗಳ ದಾಖಲಾತಿ ನಿರ್ವಹಣೆ, ಕಾರ್ಯಕರ್ತರ ಕಾರ್ಯಕುಶಲತೆ, ವರದಿಗಳ ತಯಾರಿ ಮತ್ತು ಬಳಕೆ, ವ್ಯವಹಾರದಲ್ಲಿ ನೈಪುಣ್ಯತೆ ಮೊದಲಾದ 114 ಅಂಶಗಳಲ್ಲಿ 109 ಪ್ರಮುಖ ಅಂಶಗಳನ್ನು ಗಮನಿಸಿದ ಲಂಡನ್ನಿನ ಎನ್.ಕ್ಯೂ.ಎ.ಗ್ರಾಮಾಭಿವೃದ್ಧಿ ಯೋಜನೆಗೆ ಕೊಡಮಾಡಿದ ಐಎಸ್‌ಒ 27001-2013ನ್ನು ಮೇಲ್ದರ್ಜೆಗೇರಿಸಿದೆ.

ಸದರಿ ಐಎಸ್‌ಒ ಸಂಸ್ಥೆಯಲ್ಲಿ ಸುಮಾರು 170 ದೇಶಗಳು ಸದಸ್ಯತ್ವ ಹೊಂದಿವೆ. ಎನ್‌ಕ್ಯೂಎ ಸಂಸ್ಥೆ 90 ದೇಶಗಳ ಪ್ರತಿಷ್ಠಿತ ಸಂಸ್ಥೆಗಳನ್ನು ಐಎಸ್‌ಗಾಗಿ ಆಡಿಟ್ ಮಾಡುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯನ್ನು 38 ನಿಯಮಗಳು ಮತ್ತು 93ರಲ್ಲಿ 90 ಅಂಶಗಳ ಕುರಿತು ಸೂಕ್ಷ್ಮವಾಗಿ ಗಮನಿಸಿ ಈ ಹಿಂದೆ ನೀಡಲಾದ ಐಎಸ್‌ಒ ಅನ್ನು ಇದೀಗ 27001-2022 ಆಗಿ ಮೇಲ್ದರ್ಜೆಗೇರಿಸಿದೆ.

ಎನ್.ಕ್ಯೂ.ಎ.ಸಂಸ್ಥೆಯ ಜಿ.ಎಸ್.ಭಾರ್ಗವ್ ಅವರು ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾವಂದರಾದ ಡಾ.ಡಿ.ವೀರೇಂದ್ರಹೆಗ್ಗಡೆಯವರಿಗೆ ಪ್ರಮಾಣಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು.ಭಾರತ ದೇಶದಲ್ಲಿಯೇ ಐಎಸ್‌ಒ 27001-2022 ಪ್ರಮಾಣಪತ್ರ ಪಡೆದ ಚಾರಿಟೆಬಲ್ ಟ್ರಸ್ಟ್ ಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೊದಲಿಗೆ ಸಂಸ್ಥೆಯಾಗಿದೆ.

ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳ ನಿರ್ವಹಣೆಯ ಅತ್ಯುತ್ತಮ ಗುಣಮಟ್ಟದ ತಂತ್ರಜ್ಞಾನ, ಪಾರದರ್ಶಕತೆ, ಲೆಕ್ಕಾಚಾರಗಳು, ನಿಯಮಪಾಲನೆ ಮುಂತಾದ ಅನೇಕ ಪ್ರಮುಖ ವಿಷಯಗಳಲ್ಲಿ ವಿಶ್ವದರ್ಜೆಯ ಗುಣಮಟ್ಟವನ್ನು ಹೊಂದಿರುವುದಕ್ಕೆ ಈ ಪ್ರಮಾಣಪತ್ರ ಸಾಕ್ಷಿಯಾಗಿದೆ.

ಬ್ಯಾಂಕ್‌ಗಳ ವ್ಯವಹಾರಗಳ ಪಾರದರ್ಶಕತೆ, ನಿಖರತೆಯ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ಬ್ಯಾಂಕ್‌ಗಳಿಗೆ ಐಎಸ್‌ಒ 27001 ಮಾನ್ಯತೆ ಪಡೆಯಲೇಬೇಕೆಂದು ನಿರ್ದೇಶಿಸಿದೆ. ಬ್ಯಾಂಕ್‌ನ ಸೇವೆಗಳನ್ನು ಬ್ಯಾಂಕ್‌ನ ಬಿಸಿನೆಸ್ ಕರೆಸ್ಪಾಂಡೆಂಟ್ ಮೂಲಕ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ತರುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಸ್ವಯಂಪ್ರೇರಿತವಾಗಿ ತನ್ನ ಸಂಸ್ಥೆಯನ್ನು ಈ ಉತ್ಕೃಷ್ಟ ಆಡಿಟ್‌ಗೆ ಒಳಪಡಿಸಿ ಈ ಪ್ರಮಾಣಪತ್ರ ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಪೂಜ್ಯ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಹೇಮಾವತಿಹೆಗ್ಗಡೆ, ಶ್ರದ್ಧಾ ಅಮಿತ್, ಎಸ್.ಎಸ್.ಅನಿಲ್ ಕುಮಾರ್,ಇತರರು ಉಪಸ್ಥಿತರಿದ್ದರು.

ವಿಶೇಷ ವರದಿ: ಕೆ.ಬಿ.ಚಂದ್ರಚೂಡ

The post ಧರ್ಮಸ್ಥಳ-ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಐಎಸ್‌ಒ 27001-2022ರ ಗರಿ ದೇಶದಲ್ಲಿಯೇ ಪ್ರಥಮ ಪ್ರಶಸ್ತಿ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ appeared first on Vibrant Mysore News.

]]>
https://vibrantmysorenews.com/dharamsthala-sri-kshetra-dharamsthala-village-development-scheme-has-won-the-first-award-in-the-country-under-iso-27001-2022-for-dharamsthala-village-development-scheme/feed/ 0 17329
ಕೆ.ಆರ್.ಪೇಟೆ-ಕತ್ತರಘಟ್ಟದಲ್ಲಿ ದಲಿತ ಯುವ ರೈತ ಜೀವಂತ ದಹನ: ಪ್ರಕರಣವನ್ನು ಕೊಲೆ ಎಂದು ದಾಖಲಿಸಿ-50 ಲಕ್ಷ ಪರಿಹಾರ ನೀಡಲು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆಗ್ರಹ https://vibrantmysorenews.com/dalit-young-farmer-burnt-alive-in-kattaraghatta-case-registered-as-murder-bsp-state-president-krishnamurthy-demands-rs-50-lakh-compensation/ https://vibrantmysorenews.com/dalit-young-farmer-burnt-alive-in-kattaraghatta-case-registered-as-murder-bsp-state-president-krishnamurthy-demands-rs-50-lakh-compensation/#respond Wed, 21 May 2025 13:13:13 +0000 https://vibrantmysorenews.com/?p=17322 ಕೆ.ಆರ್.ಪೇಟೆ: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವ ರೈತ ಜಯಕುಮಾರ್ ಜೀವಂತವಾಗಿ ದಹನವಾಗಿರುವ ಘಟನೆಯನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮೃತ ಕುಟುಂಬಕ್ಕೆ ಕನಿಷ್ಠ 50ಲಕ್ಷ ಪರಿಹಾರ ನೀಡಬೇಕು. ಮೃತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು…

The post ಕೆ.ಆರ್.ಪೇಟೆ-ಕತ್ತರಘಟ್ಟದಲ್ಲಿ ದಲಿತ ಯುವ ರೈತ ಜೀವಂತ ದಹನ: ಪ್ರಕರಣವನ್ನು ಕೊಲೆ ಎಂದು ದಾಖಲಿಸಿ-50 ಲಕ್ಷ ಪರಿಹಾರ ನೀಡಲು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆಗ್ರಹ appeared first on Vibrant Mysore News.

]]>

ಕೆ.ಆರ್.ಪೇಟೆ: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವ ರೈತ ಜಯಕುಮಾರ್ ಜೀವಂತವಾಗಿ ದಹನವಾಗಿರುವ ಘಟನೆಯನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮೃತ ಕುಟುಂಬಕ್ಕೆ ಕನಿಷ್ಠ 50ಲಕ್ಷ ಪರಿಹಾರ ನೀಡಬೇಕು. ಮೃತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ರಾಜ್ಯ ಬಿಎಸ್ ಪಿ ಅಧ್ಯಕ್ಷ ಡಾ.ಎಂ. ಕೃಷ್ಣಮೂರ್ತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಅವರು ಇಂದು ಬಿಎಸ್ ಪಿ ಪಕ್ಷದ ರಾಜ್ಯ ಪದಾಧಿಕಾರಿಗಳು ಹಾಗೂ ತಾಲೂಕು ಘಟಕದ ಅಧ್ಯಕ್ಷ ಬಸ್ತಿ ಪ್ರದೀಪ್ ಅವರೊಂದಿಗೆ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗಿ ಯುವಕ ಜಯಕುಮಾರ್ ಜೀವಂತ ದಹನವಾದ ಘಟನಾ ಸ್ಥಳಕ್ಕೆ ಬೇಟಿ ನೀಡಿ ಮೃತ ರೈತ ಜಯಕುಮಾರ್ ಅವರ ಧರ್ಮಪತ್ನಿ ಲಕ್ಷ್ಮೀ ಆವರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕತ್ತರಘಟ್ಟ ಗ್ರಾಮದಲ್ಲಿ ನಡೆದಿರುವ ಜೀವಂತವಾಗಿ ಸುಟ್ಟು ದಹನ ಮಾಡಿರುವ ಭೀಭತ್ಸವಾದ ಕೊಲೆಯ ಘಟನೆಯನ್ನು ಅವಲೋಕನ ಮಾಡಿದರೆ ಮೇಲ್ನೋಟಕ್ಕೆ ದಲಿತ ಯುವ ರೈತನಾದ ಜಯಕುಮಾರ್ ವಿರುದ್ದ ಸಂಚು ನಡೆಸಿ ಬರ್ಬರವಾಗಿ ಅವರ ಕೊಲೆ ಮಾಡಿರುವಂತೆ ಕಂಡು ಬರುತ್ತಿದೆ. ಪೊಲೀಸರು ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸಿ ಕೊಲೆ ಆರೋಪಿಯಾಗಿರುವ ಕೃಷ್ಣೆಗೌಡರ ಮಗ ಅನಿಲ್ ಕುಮಾರ್ ಅವರನ್ನು ಕೂಡಲೇ ಬಂಧಿಸಿ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರವು ಮೃತರ ಧರ್ಮಪತ್ನಿ ಲಕ್ಷ್ಮೀ ಅವರ ಕುಟುಂಬಕ್ಕೆ 50ಲಕ್ಷ ರೂಪಾಯಿ ಪರಿಹಾರ ನೀಡಿ, ಲಕ್ಷ್ಮೀ ಅವರಿಗೆ ಸರ್ಕಾರಿ ಉದ್ಯೋಗ ನೀಡಿ ಸಹಾಯ ಮಾಡಬೇಕು ಎಂದು ಕೃಷ್ಣಮೂರ್ತಿ ಆಗ್ರಹಿಸಿದರು.

ಜಯಕುಮಾರ್ ಅವರು ಸ್ಥಿತ ಪ್ರಜ್ಞ ರೈತನಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ ಆದ್ದರಿಂದ ಮೃತ ರೈತನ ಸಾವಿನ ಪ್ರಕರಣವನ್ನು ಕೊಲೆ ಎಂದು ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ್ ಬಾಳದಂಡಿ ಅವರನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಎಸ್ ಪಿ ತಾಲೂಕು ಘಟಕದ ಅಧ್ಯಕ್ಷ ಬಸ್ತಿ ಪ್ರದೀಪ್, ಜಿಲ್ಲಾ ಕಾರ್ಯದರ್ಶಿ ಗಂಗಾಧರ್, ಮುಖಂಡರಾದ ಗಾಡಿಗನಹಳ್ಳಿ ಚೆಲುವರಾಜು, ಪರಮೇಶ್, ಗೋವಿಂದರಾಜು ಸೇರಿದಂತೆ ಕತ್ತರಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

The post ಕೆ.ಆರ್.ಪೇಟೆ-ಕತ್ತರಘಟ್ಟದಲ್ಲಿ ದಲಿತ ಯುವ ರೈತ ಜೀವಂತ ದಹನ: ಪ್ರಕರಣವನ್ನು ಕೊಲೆ ಎಂದು ದಾಖಲಿಸಿ-50 ಲಕ್ಷ ಪರಿಹಾರ ನೀಡಲು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆಗ್ರಹ appeared first on Vibrant Mysore News.

]]>
https://vibrantmysorenews.com/dalit-young-farmer-burnt-alive-in-kattaraghatta-case-registered-as-murder-bsp-state-president-krishnamurthy-demands-rs-50-lakh-compensation/feed/ 0 17322
ತುಮಕೂರು-ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದವರು ದಿ.ರಾಜೀವ್ ಗಾಂಧಿ-ಇಕ್ಬಾಲ್ ಅಹಮದ್ https://vibrantmysorenews.com/tumkur-those-who-took-india-on-the-path-of-development-were-rajiv-gandhi-iqbal-ahmed/ https://vibrantmysorenews.com/tumkur-those-who-took-india-on-the-path-of-development-were-rajiv-gandhi-iqbal-ahmed/#respond Wed, 21 May 2025 13:05:29 +0000 https://vibrantmysorenews.com/?p=17315 ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿಯವರ 35ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕಾಂಗ್ರೆಸ್ ಕಚೇರಿಯಲ್ಲಿ ಇರಿಸಿದ್ದ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ…

The post ತುಮಕೂರು-ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದವರು ದಿ.ರಾಜೀವ್ ಗಾಂಧಿ-ಇಕ್ಬಾಲ್ ಅಹಮದ್ appeared first on Vibrant Mysore News.

]]>

ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿಯವರ 35ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಕಾಂಗ್ರೆಸ್ ಕಚೇರಿಯಲ್ಲಿ ಇರಿಸಿದ್ದ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿಗಳ ಜೀವನ ಮತ್ತು ಸಾಧನೆಯನ್ನು ನೆನಪು ಮಾಡಿಕೊಳ್ಳುವ ಮೂಲಕ ಮಾನವ ಬಾಂಬ್‌ಗೆ ತುತ್ತಾದ ಪಕ್ಷದ ನಾಯಕರಿಗೆ ಮುಖಂಡರುಗಳು ಶ್ರದ್ದಾಂಜಲಿ ಸಲ್ಲಿಸಿದರು.

ಮತ್ತೊರ್ವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಕಿರಿಯ ವಯಸ್ಸಿನಲ್ಲಿಯೇ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಮೂಲಕ ಆ ಹುದ್ದೆಗೆ ಘನತೆಯನ್ನು ತಂದು ಕೊಟ್ಟುವರು ರಾಜೀವ್‌ಗಾಂಧಿ,ಭಾರತವಲ್ಲದೆ, ಭಾರತದ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿಯೂ ಶಾಂತಿ ನೆಲಸಬೇಕು ಎಂಬ ಕನಸು ಕಂಡಿದ್ದ ರಾಜೀವ್‌ಗಾಂಧಿ ಶ್ರೀಲಂಕಾ ದೇಶದಲ್ಲಿ ಎಲ್‌ಟಿಟಿಇ ಉಪಟಳಕ್ಕೆ ಕಡಿವಾಣ ಹಾಕಲು ಶಾಂತಿಪಾಲನಾ ಪಡೆ ಕಳುಹಿಸಿದ್ದ ವಿಚಾರವಾಗಿ ದ್ವೇಷವಾಗಿ ಪರಿಗಣಿಸಿದ ಎಲ್.ಟಿ.ಟಿ.ಇಯವರು ಚುನಾವಣಾ ಪ್ರಚಾರಕ್ಕೆ ತೆರಳಿದ ಅವರನ್ನು ಮಾನವ ಬಾಂಬ್ ಮೂಲಕ ಕೊಲೆ ಮಾಡಿದರು.ಭಯೋತ್ಪಾಧಕರಿಗೆ ಜಾತಿ, ಮತ, ಧರ್ಮದ ಇಲ್ಲ. ಭಯೋತ್ಪಾಧಕರು ಎಲ್ಲಿಯೇ ಇದ್ದರೂ ಅವರನ್ನು ಕಾನೂನಿಗೆ ಒಪ್ಪಿಸುವ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಒಂದು ದೇಶದ ಪ್ರಧಾನಿಯ ಮಗನಾಗಿ ಪೈಲೆಟ್ ಆಗುವ ಮೂಲಕ ದೇಶ ಸೇವೆಗೆ ಮುಂದಾಗಿದ್ದ ರಾಜೀವ್‌ಗಾಂಧಿ,ಇಂದಿರಾಗಾಂಧಿಯ ಹತ್ಯೆಯಿಂದಾಗಿ ಅನಿವಾರ್ಯವಾಗಿ ಪ್ರಧಾನಿ ಪಟ್ಟ ವಹಿಸಿಕೊಂಡರು.ದೇಶ ಹಿಂದೆ ಉಳಿಯಲು ಕಾರಣವೆನೆಂದು ತಿಳಿಯಲು ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿ, ಅಧ್ಯಯನ ನಡೆಸಿ, ವಿಜ್ಞಾನ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭಾರತಕ್ಕೆ ಭದ್ರ ಬುನಾದಿ ಹಾಕಿದರು.ಅದರ ಫಲವಾಗಿ ಇಂದು ಭಾರತ ವಿಶ್ವದ ಮುಂದುವರೆದ ರಾಷ್ಟçಗಳ ಪಟ್ಟಿಯಲ್ಲಿದೆ.ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದರೂ ಲೆಕ್ಕಿಸದೆ ಜನರೊಂದಿಗೆ ಜನರ ಕಲ್ಯಾಣಕ್ಕಾಗಿ ದುಡಿದ ಮಹನೀಯರು ರಾಜೀವ್‌ಗಾಂಧಿ, ಆದರೆ ಇಂದಿನ ಪ್ರಧಾನಿ ಕಳದೆ ಎರಡು ವರ್ಷಗಳಿಂದ ನಮ್ಮದೇ ದೇಶದ ಮಣಿಪುರ ಹೊತ್ತಿ ಉರಿದರು ಅತ್ತತಿರುಗಿಯೂ ನೋಡಿಲ್ಲ.ಇದು ಓರ್ವ ಪ್ರಧಾನಿಯ ಅಡಳಿತ ವೈಖರಿಯೇ ಎಂದು ನಾವೆಲ್ಲರೂ ಪ್ರಶ್ನಿಸಬೇಕಿದೆ ಎಂದರು.

ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶಗೌಡ ಅವರು ಬೆಳಗ್ಗೆ ಸರಕಾರ ಮತ್ತು ಜಿಲ್ಲಾ ಮಂತ್ರಿಯನ್ನು ಟೀಕಿಸುವುದು, ಸರಕಾರದ ನೀಡಿದ ಹಣದಲ್ಲಿಯೇ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆ ನಡೆಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವರಿಗೆ ನೈತಿಕತೆ ಇದೆಯೇ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಪ್ರಶ್ನಿಸಿದರು.

ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ, ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷರಾದ ಮೆಸ್ ಮಹೇಶ್, ಜಿಲ್ಲಾ ವಕ್ತಾರರಾದ ಕೆ.ಎಂ.ಸುಜಾತ, ಮಾಧ್ಯಮ ಸಂಯೋಜಕರಾದ ತೋವಿನಕೆರೆ ಪುಟ್ಟರಾಜುಸೇರಿದಂತೆ ಹಲವರು ಉಪಸ್ಥಿತರಿದ್ದರು.

The post ತುಮಕೂರು-ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದವರು ದಿ.ರಾಜೀವ್ ಗಾಂಧಿ-ಇಕ್ಬಾಲ್ ಅಹಮದ್ appeared first on Vibrant Mysore News.

]]>
https://vibrantmysorenews.com/tumkur-those-who-took-india-on-the-path-of-development-were-rajiv-gandhi-iqbal-ahmed/feed/ 0 17315