ಕೊರಟಗೆರೆ: ಬಹುಜನ ಸಮಾಜವಾದಿ ಪಕ್ಷದಿಂದ ತಾಲೂಕಿನ ಮಂಡಲದ ಪದಾಧಿಕಾರಿಗಳು ಹಾಗೂ ಮುಖಂಡರುಗಳ ಜೊತೆ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಲಾಗಿತ್ತು.
ತುಮಕೂರು ಜಿಲ್ಲಾ ಅಧ್ಯಕ್ಷರಾದ ಆಂಜನಪ್ಪ ಮಾತನಾಡಿ, ಕೊರಟಗೆರೆ ತಾಲೂಕಿನ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದು. ಈ ಸಭೆಯ ಮುಖ್ಯ ಉದ್ದೇಶ ಬಹುಜನ ಪಾರ್ಟಿಯ ಹಳ್ಳಿ-ಹಳ್ಳಿಗಳಲ್ಲಿ ಮೆಂಬರ್ ಶಿಪ್ ಮಾಡುವ ಸಲುವಾಗಿ ಕರೆದಿದ್ದು, ಬಹುಜನ ಸಮಾಜವಾದ ಪಾರ್ಟಿ ಒಂದು ಜಾತಿ ಅಥವಾ ವರ್ಗಕ್ಕೆ ಹಾಗೂ ಎಸ್ಸಿ ಎಸ್ಟಿ ಸಮುದಾಯಗಳ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಎಲ್ಲ ವರ್ಗಗಳ ಪರವಾಗಿ ಕೆಲಸ ಮಾಡುವ ಪಕ್ಷ ಆಗಿದ್ದು. ಎಲ್ಲರೂ ಕೂಡ ಮೆಂಬರ್ ಶಿಪ್ ತೆಗೆದುಕೊಳ್ಳಬಹುದು ನಮ್ಮ ಪಾರ್ಟಿಯಲ್ಲಿ ಎಲ್ಲಾ ವರ್ಗದವರಿಗೂ ಕೆಲಸ ಮಾಡುವ ಅವಕಾಶಗಳು ಕಲ್ಪಿಸಿ ಕೊಟ್ಟಿರುವ ನಮ್ಮ ಪಕ್ಷಕ್ಕೆ ಸೇರ್ಪಡೆಯಾದವರಿಗೆ, ಅಧಿಕಾರವನ್ನು ಕೊಡಲು ನಮ್ಮ ನಮ್ಮ ಸಮಾಜವಾದಿ ಪಕ್ಷ ಸಿದ್ಧವಿರುತ್ತದೆ ಹಾಗೂ ಕೊರಟಗೆರೆ ತಾಲೂಕಿನಲ್ಲಿ ಯುವಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು. ಮುಂದಿನ ದಿನಗಳಲ್ಲಿ ಬಹುಜನ ಸಮಾಜವಾದಿ ಪಕ್ಷವನ್ನು ಬಲಪಡಿಸುವುದಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯ ರುದ್ರಪ್ಪ. ಜಿಲ್ಲಾ ಉಸ್ತುವಾರಿ ಎಸ್.ಎನ್. ರವಿಕುಮಾರ್ ತಾಲೂಕು ಅಧ್ಯಕ್ಷ ಎಸ್. ಜಿ. ಮಂಜುನಾಥ್. ಪ್ರದಾನ ಕಾರ್ಯದರ್ಶಿ ಬಡಕನಹಳ್ಳಿ ರಾಜಣ್ಣ. ತಾಲೂಕು ಉಪಾಧ್ಯಕ್ಷ ಶಿವದರ್ಶನ್. ಪಾವಗಡ ದೇವರಾಜು. ದೊಡ್ಡಪಾಲನಹಳ್ಳಿ ಕುಮಾರರಾಮ. ರಂಗರಾಜು. ಹಲವಾರು ಮುಖಂಡರು ಹಾಜರಿದ್ದರು.
- ನರಸಿಂಹಯ್ಯ ಕೋಳಾಲ