ಎಚ್.ಡಿ.ಕೋಟೆ: ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ಎಡತೊರೆ ಗಣೇಶ್, ಉಪಾಧ್ಯಕ್ಷರಾಗಿ ಬಸವರಾಜ್ ತೆಲಗುಮಸಳ್ಳಿ ನೇಮಕವಾಗಿದ್ದಾರೆ.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟದ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ಮಂಜುನಾಥ್ ಕೊತ್ತೆಗಾಲ, ಖಜಾಂಚಿಯಾಗಿ ಪ್ರಭ ನೇಮಕಗೊಂಡರು.
ಅಂತರಸಂತೆ ಹೋಬಳಿ ಘಟಕದ ಅಧ್ಯಕ್ಷರಾಗಿ ಗೋಪಾಲ್, ಉಪಾ ಧ್ಯಕ್ಷರಾಗಿ ದೇವಮ್ಮ ಸಿ.ನೂರಲಕುಪ್ಪೆ, ಕಾರ್ಯದರ್ಶಿಯಾಗಿ ಪುಟ್ಟಸ್ವಾಮಿ, ಖಜಾಂಚಿಯಾಗಿ ನಿಂಗರಾಜ್, ಹಂಪಾಪುರ ಹೋಬಳಿ ಘಟಕದ ಅಧ್ಯಕ್ಷರಾಗಿ ಕೆ.ನರಸಿಂಹ, ಉಪಾಧ್ಯಕ್ಷರಾಗಿ ಪ್ರಭ, ಕಾರ್ಯದರ್ಶಿಯಾಗಿ ದೇವಣ್ಣ, ಖಜಾಂಚಿಯಾಗಿ ಸೋಮಣ್ಣ, ಕಸಬಾ ಹೋಬಳಿ ಅಧ್ಯಕ್ಷರಾಗಿ ಗಣೇಶ್, ಉಪಾಧ್ಯಕ್ಷರಾಗಿ ಜಯಮ್ಮ, ಕಾರ್ಯದರ್ಶಿಯಾಗಿ ಹನುಮಯ್ಯ, ಖಜಾಂಚಿಯಾಗಿ ಗುಜ್ಜಯ್ಯ, ಸರಗೂರು ಹೋಬಳಿ ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ಶಿವಮ್ಮ, ಕಾರ್ಯದರ್ಶಿಯಾಗಿ ಮಂಜು ನಾಥ್, ಖಜಾಂಚಿಯಾಗಿ ಮಹದೇವಮ್ಮ, ಕಂದಲಿಕೆ ಹೋಬಳಿ ಅಧ್ಯಕ್ಷರಾಗಿ ಬಸವರಾಜ್, ಉಪಾಧ್ಯಕ್ಷರಾಗಿ ನಾಗಯ್ಯ, ಕಾರ್ಯದರ್ಶಿಯಾಗಿ ಸವಿತಾ, ಖಜಾಂಚಿಯಾಗಿ ನಿಂಗ ರಾಜ್ ನೇಮಕಗೊಂಡರು.

ರಾಜ್ಯಾಧ್ಯಕ್ಷ ಮಹದೇವ ಮತ್ತು ಮಾಜಿ ಅಧ್ಯಕ್ಷ ಶಿವಣ್ಣ, ಮಲ್ಲಿಗಮ್ಮ ಕೋಹಳ ನೇಮಕ ಪ್ರಕ್ರಿಯೆ ನಡೆಸಿದರು.
ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಬಿ.ಉಮೇಶ್ ಮಾತಾನಾಡಿ, ಒಕ್ಕೂಟವು ರಾಜ್ಯಮಟ್ಟದಲ್ಲಿ ಟ್ರೇಡ್ ಯೂನಿಯನ್ ಅಡಿಯಲ್ಲಿ ನೋಂದಣಿಯಾಗಿದೆ. ಒಕ್ಕೂಟದಲ್ಲಿ ಜೀತ ಮುಕ್ತರು, ಕೃಷಿಕರು, ಕೂಲಿಕಾರರನ್ನು ಸೇರಿಸಿ ಅವರ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡಬೇಕಿದೆ. ಪ್ರತಿ ಸದಸ್ಯರು ವಾರ್ಷಿಕವಾಗಿ ಒಂದು ದಿನದ ಕೂಲಿಯನ್ನು ಒಕ್ಕೂಟಕ್ಕೆ ನೀಡುವ ಮೂಲಕ ಒಕ್ಕೂಟವನ್ನು ಗಟ್ಟಿಗೊಳಿಸಬೇಕು ಎಂದರು.

ಜೀವಿಕ ಜಿಲ್ಲಾ ಸಂಚಾಲಕ ಬಸವರಾಜ್ ಮಾತನಾಡಿದರು. ತಾಲೂಕು ಸಂಚಾಲಕ ಚಂದ್ರಶೇಖರ ಮೂರ್ತಿ, ಶಿವರಾಜ್, ನಟರಾಜ್, ಶ್ರೀನಿವಾಸ್, ಮಹದೇವ, ಶಿವಣ್ಣ, ಮಲ್ಲಿಗಮ್ಮ, ಗೋಪಾಲ್, ಮಂಜುನಾಥ್, ಲಕ್ಷ್ಮಮ್ಮ, ಜಯಮ್ಮ, ನಂಜುಂಡಯ್ಯ, ಸೋಮೇಶ್ ಸೇರಿದಂತೆ ಮತ್ತಿತರರಿದ್ದರು.
– ಶಿವಕುಮಾರ