ಎಚ್.ಡಿ. ಕೋಟೆ: ಎಚ್.ಡಿ. ಕೋಟೆ ತಾಲ್ಲೂಕಿನ ಆದಿ ಕರ್ನಾಟಕ ಮಹಾಸಭೆಯ ನೂತನ ಅಧ್ಯಕ್ಷರಾಗಿ ಹೈರಿಗೆ ಶಿವರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಮಹಾಸಭೆಯ ಸಭೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಪ್ರಮುಖ ಪದಾಧಿಕಾರಿಗಳ ಆಯ್ಕೆ ವಿವರ:
- ಪ್ರಧಾನ ಕಾರ್ಯದರ್ಶಿ: ಭೀಮನಹಳ್ಳಿ ಸೋಮೇಶ
- ಕಾರ್ಯದರ್ಶಿ: ಮಂಜು ಹೊಸಮಾಳ
- ಕೋಟೆ ಟೌನ್ ಉಪಾಧ್ಯಕ್ಷ: ನಂಜಪ್ಪ
- ಕಸಬಾ ಉಪಾಧ್ಯಕ್ಷ: ರವಿ
- ಅಂತರಸಂತೆ ವಿಭಾಗದ ಉಪಾಧ್ಯಕ್ಷ: ನಾಗಯ್ಯ
- ಹಂಪಾಪುರ ವಿಭಾಗದ ಉಪಾಧ್ಯಕ್ಷ: ಸೋಮಣ್ಣ
ಸಭೆಯ ಅಂತ್ಯದಲ್ಲಿ ನೂತನ ಅಧ್ಯಕ್ಷ ಹೈರಿಗೆ ಶಿವರಾಜ್ ಮಾತನಾಡಿ, “ಆದಿ ಕರ್ನಾಟಕ ಸಮುದಾಯದ ಹಿತದೃಷ್ಠಿಯಿಂದ ಕಾರ್ಯನಿರ್ವಹಿಸುವೆವು. ಸಮುದಾಯದ ಎಲ್ಲ ವರ್ಗಗಳನ್ನು ಒಗ್ಗೂಡಿಸಿ ಸಬಲೀಕರಣದತ್ತ ಕಯ್ಯೊದ್ತೇವೆ” ಎಂದು ಆಶಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಪುರಸಭೆ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಸರಗೂರು ಶಿವಣ್ಣ, ಕಾರ್ಯದರ್ಶಿ ಮಲಾರ ಪುಟ್ಟಯ್ಯ, ರಮೇಶ್, ಜಿ.ಪಂ. ಮಾಜಿ ಸದಸ್ಯ ವೆಂಕಟಸ್ವಾಮಿ, ಎಚ್.ಸಿ. ಮಂಜುನಾಥ್, ಭಾಗ್ಯಲಕ್ಷ್ಮಿ ನಿಂಗರಾಜ್, ನಿವೃತ್ತ ಡಿಸಿಪಿ ಸಿದ್ದರಾಜು, ಉಮೇಶ್ ಬಿ. ನೂರಲಕುಪ್ಪೆ, ಬಸವರಾಜ್ ಕಾಡುಮನೆ ಪ್ರಸನ್ನ, ಮಂಚಯ್ಯ, ರವೀಂದ್ರ, ಮಹೇಶ್, ಸದಾಶಿವ, ಮುದ್ದು ಮಲ್ಲಯ್ಯ, ದೇವರಾಜು, ಮಲ್ಲೇಶ್, ಡಾ. ಮರಿದೇವಯ್ಯ, ಜವರಯ್ಯ, ಕೆಂಡಗಣ್ಣ, ಡಿ.ಪಿ. ಶಿವಣ್ಣ, ಕೃಷ್ಣ, ಚೆಲುವರಾಜು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
- ಶಿವಕುಮಾರ್