ಎಚ್.ಡಿ.ಕೋಟೆ: ವಿಶ್ವ ಪರಿಸರ ದಿನದ ಪ್ರಯುಕ್ತ ಹಾರ್ಟ್ ಸಂಸ್ಥೆ ಮೈಸೂರು ಹಾಗೂ ದೀಪು ಅರಸ್ ಪಾರ್ಥ ಬ್ರಿಕ್ಸ್ ಇಂಡಸ್ಟ್ರಿ ಸಹಯೋಗದೊಂದಿಗೆ ಜಕ್ಕಹಳ್ಳಿ ಗ್ರಾಮದ ಡೊಡ್ಡಕೆರೆ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಡಲಾಯಿತು.
ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮಾತನಾಡಿ, ವಿಶ್ವ ಪರಿಸರ ದಿನವನ್ನು 52 ವರ್ಷಗಳಿಂದ ಆಚರಿಸುತ್ತಾ ಬರುತ್ತಿದ್ದೇವೆ, ಆದರೇ, ನೆಟ್ಟ ಗಿಡವು ಮರವಾಗುವವರೆಗೆ ಅದರ ಜವಬ್ಧಾರಿಯನ್ನು ತೆಗೆದು ಕೊಳ್ಳುವವರ ಸಂಖ್ಯೆ ಅತಿ ವಿರಳ. ನೀವು ನೆಡುವ ಗಿಡಗಳನ್ನು ಎರಡು ವರ್ಷಗಳು ಅವುಗಳ ಪೋಷಣೆ ಮಾಡುವ ಹೊಣೆ ಹೊತ್ತು ಇತರರಿಗೆ ಪ್ರೇರಣೆ ಹಾಗೂ ಮಾದರಿಯಾಗಬೇಕು ಎಂದು ಕಿವಿ ಮಾತು ಹೇಳಿದರು.

ಗಿಡಗಳನ್ನು ನೀಡಿದ ಎಚ್.ಡಿಕೋಟೆಯ ಅರಣ್ಯ ಇಲಾಖೆ ಹಾಗು ಟ್ರೀ-ಗಾರ್ಡ್ಗಳ ನೆರವು ನೀಡಿದ ರಘುಲಾಲ್ ಕಂಪನಿಗೂ ಕೃತತಜ್ಞತೆಯನ್ನು ತಿಳಿಸಿದರು.
ದೀಪು ಅರಸ್ ಮಾತನಾಡಿ, ನಮ್ಮ ವೈಯಕ್ತಿಕ ಬದುಕಿನ ಜೊತೆ ಸಾಮಾಜಿಕ ಜವಬ್ಧಾರಿಗಳನ್ನು ಪ್ರದರ್ಶಿಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಅಲ್ಲದೇ 52ನೇ ವರ್ಷದ ವಿಶ್ವ ಪರಿಸರ ದಿನದಂದು 52 ಗಿಡಗಳನ್ನು ನೆಟ್ಟು ಇವುಗಳನ್ನು ಕಾಪಾಡುವ ನೇತೃತ್ವ ವಹಿಸಿರುವುದು ನಮಗೆ ಬಹಳ ಸಂತೋಷ ನೀಡುತ್ತಿದೆ ಎಂದರು.

ಸಂಧಿವಾತ ಹಾಗೂ ಕೀಲುರೋಗ ತಜ್ಞ ಡಾ.ಮಹಾಬಲೇಶ್ವರ ಮಮದಾಪುರ, ಸರಗೂರು ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕ ಕಿರಣ್, ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ, ಜಕ್ಕಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರೇಖಾ ಹಾಗೂ ಶಾಲಾ ವಿದ್ಯಾರ್ಥಿಗಳು, ಯೋಧ ಯೋಗೇಶ, ರವೀಂದ್ರ, ಶತೀಶ್, ಜಕ್ಕಹಳ್ಳಿ ಮತ್ತು ದೇವಲಾಪುರ ಗ್ರಾಮಸ್ಥರು ಸಾರ್ವಜನಿಕರು ಇದ್ದರು