ಎಚ್‌.ಡಿ.ಕೋಟೆ-ಸುಭಾಷ್ ಪವರ್ ಕಂಪನಿ‌ ನೀರಾವರಿ ನಿಗಮದ ಆಸ್ತಿ ಕಬಳಿಸಿಲ್ಲ- ಬ್ಯುಸಿನೆಸ್ ಹೆಡ್ ಅಂಜುಮಿತ್ರಾ ಸ್ಪಷ್ಟನೆ

ಎಚ್‌.ಡಿ.ಕೋಟೆ: 2001ರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರ್.ಟಿ.ಸಿಯಲ್ಲಿ ಹೆಸರು ಬದಲಾವಣೆಯಾಗಿತ್ತೆ ವಿನಹ ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಬ್ಯುಸಿನೆಸ್ ಹೆಡ್ ಅಂಜುಮಿತ್ರಾ ಸ್ಪಷ್ಟ ಪಡಿಸಿದ್ದಾರೆ.

ತಾಲೂಕಿನ ಸರ್ಕಾರಿ‌ ಜಮೀನನ್ನು ಖಾಸಗಿ ಕಂಪನಿ ಕಬಳಿಸತ್ತಿದೆ ಎಂಬ ಆರೋಪದ ಕುರಿತು ಬೀಚನಹಳ್ಳಿಯ ಸುಭಾಷ್ ಪವರ್ ಕಾರ್ಪೋರೇಷನ್ ಕಚೇರಿಯಲ್ಲಿ ಮಾತನಾಡಿ, ಕಲ್ಕತ್ತಾ ಮೂಲದ ಕಂಪನಿ ಇದಾಗಿದ್ದು, ಕಳೆದ 25 ವರ್ಷಗಳ ಹಿಂದೆ 24 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಜಮೀನು ಗುತ್ತಿಗೆ ಪಡೆದಿದ್ದೇವೆ.

ಅಧಿಕಾರಿಗಳ ತಪ್ಪಿನಿಂದ ಆರ್.ಟಿ.ಸಿಯಲ್ಲಿ ಸುಭಾಷ್ ಪವರ್ ಕಾರ್ಪೊರೇಷನ್ ಎಂದು ನಮೂದಾಗಿತ್ತು. ಇದನ್ನು ಬಂಡವಾಳ ಮಾಡಿಕೊಂಡ ಕೆಲವರು ನಮ್ಮ ಕಂಪನಿಯ ಮೇಲೆ ಕೆಟ್ಟ ಹೆಸರು ತರಲು ಸರ್ಕಾರಿ ಜಮೀನನ್ನು ಹೊಡೆಯುವ ಹುನ್ನಾರದಿಂದ ಹೆಸರು ಬದಲಿಸಲಾಗಿದೆ ಎಂದು ಆರೋಪಿಸಿ ಸುದ್ದಿ ಹರಡಿಸಿ ಜನರಲ್ಲಿ ಗೊಂದಲ ಮೂಡಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

2001ರ ಆರ್.ಟಿ.ಸಿಯಲ್ಲಿ ಸುಜಾತ ಪವರ್ ಕಾರ್ಪೊರೇಷನ್ ಎಂದು ನಮೂದಾಗಿತ್ತು ಇದು ಅಧಿಕಾರಿಗಳ ತಪ್ಪೇ ಹೊರತು ನಮ್ಮದಲ್ಲ. ನಾವು ಈ ಹಿಂದೆ ಎರಡು ಬಾರಿ ಬ್ಯಾಂಕ್ ನಿಂದ ಸಾಲ ಪಡೆದು ಮರುಪಾವತಿಸಿರುವುದು ಪವರ್ ಕಂಪನಿಯ ವ್ಯಹಿವಾಟಿನ ಮೇಲೆಯೇ ಹೊರತು ನೀರಾವರಿ‌ ನಿಗಮದ ಆಸ್ತಿಯಿಂದಲ್ಲ ಪ್ರಸ್ತುತ ಇ.ಸಿಯಲ್ಲಿ ನೀರಾವರಿ ನಿಗಮದ ಹೆಸರಿದೆ.

ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ. ನಮ್ಮ ಕಂಪನಿ ವಿರುದ್ಧ ಆಧಾರ ರಹಿತ ಅಪಪ್ರಚಾರ ಮಾಡುವುದು ಸರಿಯಲ್ಲ. ಸರ್ಕಾರಿ ಜಮೀನು ಸರ್ಕಾರದ್ದೇ ಹೊರತು ನಮ್ಮದಲ್ಲ ಎಂದು ತಿಳಿಸಿದರು.
ಕಂಪನಿಯ ಜನರಲ್ ಮ್ಯಾನೇಜರ್ ಎಂ.ಇಳಯಮರನ್ ಇದ್ದರು.

ಶಿವಕುಮಾರ , ಕೋಟೆ.

Leave a Reply

Your email address will not be published. Required fields are marked *