ಎಚ್. ಡಿ.ಕೋಟೆ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ವಿದ್ಯುತ್ ಉತ್ಪಾದನೆ ಮಾಡಲು 18 ಎಕರೆ ಸರ್ಕಾರಿ ಭೂಮಿಯನ್ನು ಮೂವತ್ತು ವರ್ಷಗಳಿಗೆ ಗುತ್ತಿಗೆ ಪಡೆದ ಕಬಿನಿ ಸುಭಾಷ್ ಪವರ್ ಸ್ಟೇಷನ್ ನವರು ಜಮೀನನ್ನು ರಾಜ್ಯದ ವಿವಿಧ ಬ್ಯಾಂಕುಗಳಲ್ಲಿ ಅಡಮಾನ ಇಟ್ಟು ಸುಮಾರು 250 ಕೋಟಿ ರೂ ಗೂ ಸಾಲ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗಾಗಿ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಡತ ಪರಿಶೀಲನೆ ಮಾಡಿ ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಕಬಿನಿ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಗಣೇಶ್ ಮಾತನಾಡಿ ಕಬಿನಿ ಜಲಾಶಯದ ಮುಂಭಾಗದಲ್ಲಿ ಸುಮಾರು 18 ಎಕರೆ ಭೂಮಿಯನ್ನು 1998 ರಲ್ಲಿ ಗುತ್ತಿಗೆ ಆಧಾರದ ಮೇಲೆ ಪಡೆದು ನಂತರ 2022-23 ರಲ್ಲಿ ಏಕಾಏಕಿ ಗುತ್ತಿಗೆ ಪಡೆದ ಭೂಮಿ ಖಾಸಗಿ ಅವರ ಹೆಸರಿಗೆ ಖಾತೆ ಆಗಿರುತ್ತದೆ. ಜೊತೆಗೆ ಆರ್ ಟಿಸಿ ಕಾಲಂ 11 ರಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ಬಗ್ಗೆ ನಮೂದಾಗಿದೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸರಗೂರು ತಹಶಿಲ್ದಾರ್ ಮೋಹನ್ ಕುಮಾರಿ ಮಾತನಾಡಿ, ಆರ್ ಟಿಸಿ ಕಾಲಂ 11 ಬದಲು 9 ಗುತ್ತಿಗೆ ಪಡೆದವರ ಹೆಸರ ಕೂರಿದೆ ಇದನ್ನು ಆಧಾರವಾಗಿ ಇಟ್ಟುಕೊಂಡು ಸುಭಾಷ್ ಪವರ್ ಸ್ಟೇಷನ್ ಮಾಲಿಕರು ವಿವಿಧ ಬ್ಯಾಂಕು ಗಳಿಂದ ನೂರಾರು ಕೋಟ ರೂ ಸಾಲ ಪಡೆದಿರುತ್ತಾರೆ.
ಈ ಬಗ್ಗೆ ವರದಿ ನೀಡಲು ಹದಿನೈದು ದಿನಗಳ ಹಿಂದೆ ಸುಭಾಷ್ ಪವರ್ ಸ್ಟೇಷನ್ ಕಂಪನಿ ಯವರಿಗೆ ನೋಟೀಸ್ ಜಾರಿ ಮಾಡಿದ್ದರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.

ಈ ಬಗ್ಗೆ ಪರಿಶೀಲನೆ ನಡೆಸಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಜಮಾದು ಅಧಿಕಾರಿಗಳಿಗೆ ಸೂಚಿಸಿದರು..
ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ರಸ್ತೆಯಿಂದ ಎಚ್.ಡಿ.ಕೋಟೆ ವರೆಗೆ ಎಷ್ಟು ಮರಗಳು ಒಣಗಿದ್ದಾವೆ ಎಷ್ಟು ಹರಾಜು ಮಾಡಲಾಗಿದೆ ಎಂದು ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಾಮಾಜಿಕ ಅರಣ್ಯ ಅಧಿಕಾರಿ ಮೈಸೂರು ರಸ್ತೆಯಲ್ಲಿ ಒಂದು ಹಾಲದ ಮರ ಹಾಗೂ ಹಣಸೂರು ರಸ್ತೆಯಲ್ಲಿ ಒಂದು ಹಾಲದ ಮರ ಹಾಗೂ ಒಂದು ಮಾವಿನ ಮರವನ್ನು ಹರಾಜು ಮಾಡಿ ತೆರವು ಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಂತರ ಮಾತನಾಡಿದ ಶಾಸಕರು ಹೆಬ್ಬಳ್ಳ ಹಾಗೂ ಶಿರಮಹಳ್ಳಿ ಗ್ರಾಮದಲ್ಲಿ ಹಾಲದ ಮರದ ಬೇರು ಮನೆಯೊಳಗೆ ನುಗ್ಗಿದೆ ಇದರಿಂದ ವಾಸದ ಮನೆಗಳಿಗೆ ತೊಂದರೆ ಆಗುತ್ತಿದ್ದು ತೆರವು ಗೊಳಿಸುವಂತೆ ಎರಡು ವರ್ಷದ ಹಿಂದೆ ಅರ್ಜಿ ನೀಡಿದ್ದರು ಯಾಕೆ ತೆರವು ಗೊಳಿಸಲು ಕ್ರಮ ವಹಿಸಿಲ್ಲ ಅತೀ ಶೀಘ್ರವಾಗಿ ಮರ ತೆರವು ಮಾಡಲು ಮುಂದಾಗಬೇಕು ಎಂದು ಸೂಚಿಸಿದರು.

ಕೆ ಆರ್ ಡಿ ಎಲ್ ಸಂಸ್ಥೆ ಉದ್ದೇಶಿಸಿ ಮಾತನಾಡಿದ ಶಾಸಕರು ಎಚ್.ಡಿ.ಕೋಟೆ ತಾಲೂಕು ಪಂಚಾಯತಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಹಾಗೂ ತಾಲೂಕಿನಲ್ಲಿ ನೂತನವಾಗಿ ನಿಮ್ಮ ಸಂಸ್ಥೆ ವತಿಯಿಂದ ನಡೆಯುತ್ತಿರುವ ಅಂಗನವಾಡಿ ಕಟ್ಟಡ ಪೂರ್ಣ ಗೊಳಿಸಲು ತಿಳಿಸಲಾಗಿತ್ತು. ಜೊತೆಗೆ ತಾಲೂಕು ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾದ ಹಣದಲ್ಲಿ ಎಷ್ಟು ಖರ್ಚಾಗಿದೆ ಎಂಬ ಅಂಕಿಅಂಶಗಳನ್ನು ನೀಡಿಲ್ಲ. ತಾಲೂಕು ಪಂಚಾಯತಿ ಆವರಣದಲ್ಲಿ ಟಿಸಿ ಅಳವಡಿಸಲು ತಿಳಿಸಲಾಗಿತ್ತು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕೆ ಆರ್ ಡಿ ಎಲ್ ಸಂಸ್ಥೆಯ ಎಇಇ ಡಿ.ಬಿ ಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾನೆಮೂಲೆ ಹಾಡಿಯಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ನೀಡದೆ ಇರುವುದರಿಂದ ಅಂಗನವಾಡಿ ಕಟ್ಟಡ ಪೂರ್ಣಮಾಡಲು ಸಾಧ್ಯವಾಗಿಲ್ಲ. ತಾಲ್ಲೂಕು ಪಂಚಾಯತಿ ಕಟ್ಟಡಕ್ಕೆ ಬಿಡುಗಡೆ ಆದ ಹಣ ಅಷ್ಟು ಖರ್ಚಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಜಿಲ್ಲೆಯಲ್ಲಿ ಕೊನೆ ಸ್ಥಾನಕ್ಕೆ ಬಂದಿದ್ದು ಯಾಕೆ ಫಲಿತಾಂಶ ಹಿಂದುಳಿಯಲು ಕಾರಣ ಇದಕ್ಕೆ ಉತ್ತರ ನೀಡಬೇಕು. ಶಿಕ್ಷಕರು ತಾಲ್ಲೂಕಿನಲ್ಲಿ ಯಾವ ರೀತಿ ಕೆಲಸ ಮಾಡುತ್ತಿದ್ದೀರಾ ಎಂಬುದು ಈ ಬಾರಿ ಪಲಿತಾಂಶ ನೋಡಿದರೆ ತಿಳಿಯುತ್ತದೆ.

ಬಿ ಆರ್ ಸಿ ಕೃಷ್ಣಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಎಸ್ಎಸ್ಎಲ್ಸಿ ಒಂಬತ್ತನೆಯ ಸ್ಥಾನದಲ್ಲಿ ಇದ್ದು, ಶೇಕಡಾ 57 ಪಲಿತಾಂಶ ಬಂದಿದೆ. ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೋ ಆದರೂ ಕೂಡ ಫಲಿತಾಂಶ ಕಳಪೆ ಆಗಿದೆ.
3161 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅದರಲ್ಲಿ 1817 ಮಕ್ಕಳು ಉತ್ತೀರ್ಣರಾಗಿ ಶೇಕಡಾ 57 ಫಲಿತಾಂಶ ಬಂದಿದೆ. ಕನ್ನಡದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುಉತ್ತೀರ್ಣರಾಗಿದ್ದಾರೆ.
ಇನ್ನೂ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ಇದ್ದು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಶಾಸಕರು ಕನ್ನಡದಲ್ಲಿ ಹೆಚ್ಚು ಮಕ್ಕಳು ಫೈಲ್ ಆಗಲು ಕಾರಣವೇನು. ಸರ್ಕಾರದಿಂದ ಶಿಕ್ಷಣ ಇಲಾಖೆಗೆ ಸಾಕಷ್ಟು ಅನುದಾನ ನೀಡಿದರು ಕೂಡ ಶಿಕ್ಷಣ ದಲ್ಲಿ ಹಿಂದುಳಿಯಲು ಕಾರಣಬೇಕು. ಗಂಡ ಮಕ್ಕಳಲ್ಲಿ ಕಲಿಕ ಮಟ್ಟ ಕಡಿಮೆ ಆಗಲು ಕಾರಣಬೇಕು ಎಂದರು.
ಇದಕ್ಕೆ ಉತ್ತರಿಸಿದ ಬಿಆರ್ಸಿ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳು ಶಾಲೆಗೆ ತಪ್ಪಿಸಿಕೊಳ್ಳುವುದರಿಂದ, ನಿರಂತರವಾಗಿ ಗೈರುಹಾಜರಿ ಯಿಂದ ಫಲಿತಾಂಶ ಕಡಿಮೆ ಆಗಲು ಕಾರಣವಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಕೃಷಿ ಇಲಾಖೆ:
ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ನೀಡದೆ ಇರುವುದರಿಂದ ಸಕಾಲದಲ್ಲಿ ರೈತರು ಬಿತ್ತನೆ ಮಾಡಲು ಸಾಧ್ಯ ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ರೈತರಿಗೆ ಅನುಕೂಲ ಕಲ್ಪಿಸಿದೆ ವಿಫಲವಾಗಿದೆ. ತಾರಕ ಅಚ್ಚು ಕಟ್ಟು ರೈತರಿಗೆ ಬತ್ತ ಸಿಗುತ್ತಿಲ್ಲ. ಮಾಹಿತಿ ಕೊರತೆಯಿಂದ ರೈತರಿಗೆ ತೊಂದರೆ ಆಗಿದೆ. ಯಾವುದೇ ಬಿತ್ತನೆ ಬಗ್ಗೆ ಜಾಗೃತಿ ಮಾಡಿಸಲು ಇಲಾಖೆ ವಿಫಲವಾಗಿದೆ. ಯಾವ ಬಿತ್ತನೆ ಬೀಜ ಇದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಕೆಡಿಪಿ ಸದಸ್ಯರು ಶಾಸಕರ ಗಮನಕ್ಕೆ ತಂದರು.

ಸಭೆಗೂ ಮುನ್ನ ಶಾಸಕರು ಕಳೆದ ತ್ರೈಮಾಸಿಕ ವರದಿಯ ಅನುಪಾಲನೆ ವರದಿಯನ್ನು ಒಂಬತ್ತು ಇಲಾಖೆಗಳು ಮಾತ್ರ ನೀಡಿದ್ದು ಉಳಿದ ಇಲಾಖೆಯವರು ಯಾಕೆ ವರದಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಗಳಾದ ಶ್ರೀನಿವಾಸ್, ಮೋಹನ್ ಕುಮಾರಿ, ಇಓ ಗಳಾದ ಧರಣೀಶ್, ಪ್ರೇಮ್ ಕುಮಾರ್, ಗಂಗಾಧರ್, ಪೊಲೀಸ್ ಇನ್ಸ್ಪೆಕ್ಟರ್ ವಸಂತಕುಮಾರ್, ಕೆಡಿಪಿ ಸದಸ್ಯರಾದ ಚಲುವರಾಜು, ಚಾಮರಾಜು, ಅನಿತಾ, ರಾಮಚಾರಿ, ಉಪಕಾರಿ, ಎಂ.ಗಿರೀಶ್, ಮುಖಂಡರಾದ ಸುರೇಶ್, ಗಣೇಶ್, ಇದ್ದರು.
- ಶಿವಕುಮಾರ , ಕೊರಟಗೆರೆ
–