ಎಚ್.ಡಿ. ಕೋಟೆ- ಜಮ್ಮುಕಾಶ್ಮೀರದ ಹತ್ಯೆ ಘಟನೆ ಖಂಡಿಸಿ ತಿರಂಗ ಯಾತ್ರೆ

ಎಚ್.ಡಿ.ಕೋಟೆ : ಇತ್ತೀಚೆಗೆ ಜಮ್ಮ ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಖಂಡಿಸಿ, ಉಗ್ರರ ಹಟ್ಟಹಾಸಕ್ಕೆ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಿದ ಯೋಧರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ತಿರಂಗಾ ಯಾತ್ರೆ ಪಟ್ಟಣದಲ್ಲಿ ನಡೆಯಿತು.

ಪಕ್ಷಾತೀತವಾಗಿ ತಾತ್ಯಾತೀತವಾಗಿ ನಡೆದ ತಿರಂಗ ಯಾತ್ರೆ ಆರಂಭದಲ್ಲಿ ಪಟ್ಟಣದ ಗದ್ದಿಗೆ ವೃತ್ತದಿಂದ ಆರಂಭಗೊಂಡು ಪಟ್ಟಣದ ಎಚ್.ಬಿ.ರಸ್ತೆ ಮಾರ್ಗವಾಗಿ ನೂರಾರು ಮಂದಿ ಕೈಗಳಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಭಾರತಾಂಬೆಗೆ ಜಯಕಾರದ ಘೋಷಣೆಗಳನ್ನು ಹಾಕುತ್ತಾ ತಾಲೂಕು ಆಡಳಿತ ಸೌಧದ ಮುಂದೆ ಸಮಾವೇಶಗೊಂಡರು.

ನಂತರ ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಎಂ ಕೃಷ್ಣನಾಯಕ ಮಾತನಾಡಿ, ಜಮ್ಮ ಕಾಶ್ಮೀರದಲ್ಲಿ ಭಾರತೀಯ ಪ್ರವಾಸಿಗರನ್ನು ಹಿಂದೂಗಳೆಂದು ಖಚಿತ ಪಡಿಸಿಕೊಂಡು ಪಾಕಿಸ್ತಾನದ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವುದು ವಿಶ್ವವೇ ತಲೆ ತಗ್ಗಿಸುವ ವಿಚಾರ ಪ್ರಕೃತಿಯ ಸೌಂದರ್ಯ ಸವಿಯಲು ತೆರಳಿದ 26ಮಂದಿ ಹಿಂದೂಗಳನ್ನು ಹತ್ಯೆ ಮಾಡಿರುವ ಪಾಕಿಸ್ತಾನದ ಉಗ್ರರ ಧಮಕ್ಕೆ ಪ್ರಧಾನಿ ನರೇಂದ್ರಮೋದಿ ಸಿಂದೂರ ಹೆಸರಿನಲ್ಲಿ ಭಾರತೀಯ ಸೈನಿಕರನ್ನು ಪಾಕಿಸ್ತಾನ ಉಗ್ರಗಾಮಿಗಳನ್ನು ಹತ್ಯ ಮಾಡಿರುವುದು ಮೆಚ್ಚುಗೆಯ ವಿಚಾರ ಹಾಗೂ ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನಿಂದ ಪಕ್ಷಾತೀತವಾಗಿ ಜಾತ್ಯತೀತವಾಗಿ ಅಭಿಮಾನದಿಂದ ಸೈನಿಕರಿಗೆ ಬಲ ತುಂಬುವುದಕ್ಕೆ ಅವರು ಮತ್ತಷ್ಟು ಹೋರಾಟ ಮಾಡುವುದಕ್ಕೆ ನಾವು ಇದೀನಿ ತಿರಂಗ ಯಾತ್ರೆ ನಡೆಸುತ್ತಿದ್ದೇವೆ.

ಇಲ್ಲಿ ನಾವು ನೆಮ್ಮದಿಯಾಗಿ ಇದೀವಿ ನಮ್ಮ ಸೈನಿಕರು ಬಾರ್ಡರ್ ಗಳಲ್ಲಿ ಯಷ್ಟು ಕಷ್ಟಪಡುತ್ತಾರೆ ಅವರ ಕುಟುಂಬವನ್ನೇ ಬಿಟ್ಟು ನಮ್ಮಗಳ ರಕ್ಷಣೆಗೆ ನಿಂತಿದ್ದಾರೆ ಈ ದೇಶದ ಪ್ರಧಾನಿಗಳಿಗೆ ಸೈನಿಕರಿಗೆ ಶಕ್ತಿ ತುಂಬುವುದಕ್ಕೆ ಎರಡು ತಾಲೂಕಿನ ಜನತೆ ಪರವಾಗಿ ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆಯಾಗಿ ಒಂದು ಲಕ್ಷ ಹಣವನ್ನು ನೀಡುತ್ತಿದ್ದೇನೆ ನಾವೆಲ್ಲರೂ ನೆಮ್ಮದಿಯಿಂದ ಇರಬೇಕಾದರೆ ಸೈನ್ಯವನ್ನು ಬಲಪಡಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಡುಗಲು ಪರಿವಣ ವಿರಕ್ತ ಮಠದ ಮಹದೇವಸ್ವಾಮಿಜಿಗಳು, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ವೆಂಕಟಸ್ವಾಮಿ, ಭೀಮನಹಳ್ಳಿ ಸೋಮೇಶ್, ಮಾರುತಿ, ಮೊದಲಾದವರು ಮಾತನಾಡಿ ಹತಾತ್ಮಾರಾದ ಹಿಂದೂಗಳ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಹೊರತಿಡುವುದು ಸ್ವಾಗತಾರ್ಹ ಎಂದ ಅವರು ಭಾರತೀಯರನ್ನು ವಿನಾಕಾರಣ ಕೆಣಕಿದರೆ ಏನಾಗುತ್ತದೆ ಎನ್ನುವುದಕ್ಕೆ ಭಾರತ ಪಾಕಿಸ್ತಾನಕ್ಕೆ ನೀಡಿರುವ ತಿರುಗೇಟು ಪ್ರತ್ಯಕ್ಷ ಸಾಕ್ಷಿಯಾಗಿದೆ.

ಶಾಂತಿಗೆ ಹೆಸರಾದ ಭಾರತ ದೇಶದೊಂದಿಗೆ ಪಾಕಿಸ್ತಾನ ಆಗಾಗ ಈ ರೀತಿ ಕ್ಯಾತೆ ತೆಗೆದು ಅಮಾಯಕರ ಮೇಲೆ ಆಕ್ರೋಶ ಮೆರೆಯುವುದು ಸರಿಯಲ್ಲ. ಮುಂದೆ ಇನ್ನೆಂದೂ ಈ ರೀತಿಯ ಘಟನೆ ಮರುಕಳಿಸದಂತೆ ಪಾಕಿಸ್ತಾನಕ್ಕೆ ಭಾರತೀಯ ಸೈನ್ಯ ತಕ್ಕ ಪಾಠ ಕಲಿಸಬೇಕು. ಸೈನ್ಯದ ಪರವಾಗಿ ದೇಶದ ಪ್ರಜೆಗಳಾದ ನಾವು ಎಂದೆಂದೂ ಬೆಂಬಲವಾಗಿರುತ್ತೇವೆ ಎನ್ನುವ ಸಂದೇಶ ಸಾರಿದ ಅವರು ಭಾರತ ಮಾತೆ ಮತ್ತು ದೇಶದ ಸೈನಿಕರಿಗೆ ಜಯಕಾರದ ಘೋಷಣೆಗಳನ್ನು ಹಾಕಿ ಅಲ್ಲಿಂದ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶಂಭೇ ಗೌಡ, ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ಗೋಪಾಲಸ್ವಾಮಿ, ಗುರುಸ್ವಾಮಿ, ಮೊತ್ತ ಬಸವರಾಜು, ಜಯಂತ್, ಬಿಡುಗಲು ರಾಜು, ಎಚ್.ಸಿ.ಲಕ್ಷ್ಮಣ್, ಸಿ ವಿ, ನಾಗರಾಜು, ಸುರೇಶ, ಸಿ ಕೆ, ಗಿರೀಶ್, ಮಿಲ್ ನಾಗರಾಜು, ಚಾಮರಾಜು, ಕನ್ನಡ ಪ್ರಮೋದ್, ಸಂತೋಷ್, ಶ್ರೀಕಾಂತ್, ಲೇಖನ, ಪ್ರಸನ್ನ, ಪ್ರಶಾಂತ್, ಗಿರೀಶ್, ಪ್ರದೀಪ್, ಕಾಳಸ್ವಾಮಿ, ವಿನೋದ್, ಸತೀಶ್ ಬಹದ್ದೂರ್, ರಾಧಿಕಾ, ಸುನಂದ ರಾಜ್, ಮಂಜುಳಾ, ಗಿರಿಜಾ, ಮಂಜುಳಾಬಾಯಿ ಸುರೇಶ್, ಚಂದ್ರಮೌಳಿ, ಶಿವಕುಮಾರ್, ಜವರೇಗೌಡ, ಗುರುಸ್ವಾಮಿ, ಬಿಟಿ ವೆಂಕಟೇಶ್, ಸುಧಾಕರ್, ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ವರ್ತಕರು ಸಾರ್ವಜನಿಕರು ಇದ್ದರು.

  • ಶಿವಕುಮಾರ, ಹೆಚ್.ಡಿ.ಕೋಟೆ.

Leave a Reply

Your email address will not be published. Required fields are marked *