ಹಾಸನ, ಜೂನ್ 17: ಹಾಸನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಐಎಎಸ್ ಅಧಿಕಾರಿ ಸತ್ಯಭಾಮ ಸಿ ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಲತಾ ಕುಮಾರಿ ಕೆ ಎಸ್. ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸತ್ಯಭಾಮ ಸಿ ಅವರು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕರಾಗಿ ಬದಲಾವಣೆಯಾಗಿದ್ದಾರೆ. ಹೊಸ ಡಿಸಿ ಆಗಿ ನೇಮಕಗೊಂಡ ಲತಾ ಕುಮಾರಿ ಕೆ ಎಸ್ ಅವರು ಈ ಹಿಂದೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಲತಾ ಕುಮಾರಿ ಅವರ ನೇಮಕದಿಂದ ಹಾಸನ ಜಿಲ್ಲಾಡಳಿತದಲ್ಲಿ ಹೊಸತನ ಆರಂಭವಾಗಲಿದೆ. ಅಧಿಕಾರಿಯ ಈ ಬದಲಾವಣೆಗಳು ಸರ್ಕಾರಿ ಕಾರ್ಯ ನಿರ್ವಹಣೆಯಲ್ಲಿ ನೂತನ ಚುರುಕು ನೀಡಲಿವೆ ಎಂಬ ನಿರೀಕ್ಷೆಯಿದೆ.
- ನೂರ್ ಆಹಮ್ಮದ್