ಹಾಸನ ಜೂ.11:- ತ್ಯಾಜ್ಯವಸ್ತುಗಳ ನಿರ್ವಹಣೆ ನಿಯಮ-2016ರಂತೆ ಮನೆಗಳಲ್ಲಿ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ ಮತ್ತು ಒಣ ಕಸ ತ್ಯಾಜ್ಯವಸ್ತುಗಳನ್ನು ನಗರದ ಸುತ್ತ ಮುತ್ತ ರಸ್ತೆ ಬದಿ/ಖಾಲಿ ನಿವೇಶನಗಳಲ್ಲಿ ಎಸೆಯುತ್ತಿರುವುದು ಕಂಡುಬಂದಿದ್ದು ಇದು ಘನ ತ್ಯಾಜ್ಯವಸ್ತುಗಳ ನಿರ್ವಹಣೆ ನಿಯಮ-2016ರಂತೆ ವಿರುದ್ಧವಾಗಿರುತ್ತದೆ.
ಕೆಲವು ಅನಾಗರಿಕರು ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು ಇದರಿಂದ ಹಾಸನ ನಗರ ಸೌಂದರ್ಯಕ್ಕೆ ದಕ್ಕೆ ಉಂಟಾಗುತ್ತಿರುತ್ತದೆ. ಆದ್ದರಿಂದ ಇದು ಅಂತಿಮ ಪ್ರಕಟಣೆ ಎಂದು ಭಾವಿಸಿ ಕಸವನ್ನು ಹಸಿ ಕಸ ಮತ್ತು ಒಣಕಸಗಳನ್ನಾಗಿ ವಿಂಗಡಿಸಿ ನೇರವಾಗಿ ಮಹಾನಗರ ಪಾಲಿಕೆಯ ದೈನಂದಿನ ಕಸ ಸಂಗ್ರಹಣೆ ಮಾಡುವ ವಾಹನಗಳಿಗೆ ನೀಡುವುದು ಕಡ್ಡಾಯವಾಗಿರುತ್ತದೆ.

ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಕಂಡು ಬಂದಲ್ಲಿ ಅಂತಹ ನಾಗರೀಕರಿಗೆ ರೂ.1000 ರಿಂದ 5000 ಗಳವರೆಗೆ ದಂಡ ವಿಧಿಸುವುದಲ್ಲದೇ ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಕ್ರಮವಹಿಸಲಾಗುವುದು. ಹಾಗೂ ತಮಗೆ ನೀಡಿರುವ ನಲ್ಲಿ ಸಂಪರ್ಕವನ್ನು ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.