ಹಾಸನ: ಐತಿಹಾಸಿಕ ಹೊಯ್ಸಳರ ನಾಡು ಹಾಸನ ಜಿಲ್ಲೆಯ ಹಾಸನನಗರವು ನಗರಸಭೆಯಿಂದ ಮಹಾನಗರ ಪಾಲಿಕೆಗೆ ರೂಪಾಂತರಗೊಂಡರೂ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನಜೀವನ ಸಂಕಷ್ಟಕ್ಕೀಡಾಗಿದೆ. ಮಂಜುನಾಥ ಬಡಾವಣೆ, ಚಂದ್ರ ಲೇಔಟ್ (33ನೇ ವಾರ್ಡ್), ದೇವರಾಯಪಟ್ಟಣ ಚರ್ಚ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಸ್ಥಿತಿ ದಯನೀಯವಾಗಿದೆ.
ನಿವೃತ್ತ ಅಧಿಕಾರಿಗಳ ಮನೆಗಳು ಇರುವ ಈ ಬಡಾವಣೆಗಳಲ್ಲಿ ನೂರಾರು ಜನರು ಹಾಗೂ ರೈತರು ದೈನಂದಿನವಾಗಿ ಹಸು-ಕರುಗಳೊಂದಿಗೆ ಸಂಚರಿಸಬೇಕಾಗುತ್ತದೆ. ಆದರೆ ರಸ್ತೆಗಳ ದುಸ್ಥಿತಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಬೀಳುವ ಘಟನೆಗಳು ವರದಿಯಾಗಿವೆ. ಕೂಡಲೇ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಬೇಕೆಂದು ಅನೇಕ ಬಾರಿ ಮನವಿ ಸಲ್ಲಿಸಿದರೂ ಜನಪ್ರತಿನಿಧರು ನಿರ್ಲಕ್ಷದ ವರ್ತನೆ ತೋರಿರುವುದಾಗಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಅಧಿಕಾರಿ ಕುಮಾರೇಗೌಡರು, “ಮತ್ತಷ್ಟು ದಿನಗಳೂ ಸಮಸ್ಯೆ ನಿರ್ಲಕ್ಷವಾದರೆ ನಾವು ರಸ್ತೆಯ ಮೇಲೆಯೇ ಗಿಡ ನೆಟ್ಟು ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಸಿದರು. ಸ್ಥಳೀಯರು—ರಂಗೇಗೌಡ, ಪ್ರವೀಣ್, ಜಲೇಂದ್ರ, ಪುನೀತ್, ದರ್ಶನ್, ಲೆನ್ಸಿ, ಈಶ್ವರ್, ರೂಬಿನ್—ಹಾಜರಿದ್ದರು.
ವರದಿ: ಯತೀಶ್ ಶೆಟ್ಟಿಹಳ್ಳಿ, ಹಾಸನ