ಹೊಳಲ್ಕೆರೆ: ಪಟ್ಟಣದ ಸಿದ್ದರಾಮಪ್ಪ ಬಡಾವಣೆಯ 2ನೇ ಕ್ರಾಸ್ನಲ್ಲಿ ಭಾನುವಾರ ಸಂಜೆ ನಡೆದ ದಾರುಣ ಘಟನೆ ಇದಾಗಿದ್ದು, ಇಸೂಪ್ ಎಂಬುವವರ 3 ವರ್ಷದ ಮಗ ಪೈಜೂನ್ ಎಂಬ ಮಗು ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ಸುಮಾರು 4 ರಿಂದ 5 ಬೀದಿನಾಯಿಗಳು ಏಕಾಏಕಿ ಎರಗಿ ಕಚ್ಚಿದ ಘಟನೆ ನಡೆದಿದೆ.

ಸಂಘಟನೆಯ ಬಳಿಕ ಪೈಜೂನ್ಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದರು. ಈ ದಾಳಿಯಿಂದ ಮಕ್ಕಳ ಸುರಕ್ಷತೆ ಕುರಿತು ಪೋಷಕರಲ್ಲಿ ಆತಂಕ ಮನೆಮಾಡಿದೆ. ಈ ಕುರಿತು ಮಾತನಾಡಿದ ಸ್ಥಳೀಯರು, “ತಂಡೆ ತಾಯಿಗಳು ಮಕ್ಕಳ ಮೇಲೆ ನಿಗಾ ಇಡಬೇಕು, ಅಲ್ಲದೆ ಬೀದಿನಾಯಿಗಳ ಅಟ್ಟಹಾಸ ತಡೆಯಲು ನಗರಪಾಲಿಕೆ ತ್ವರಿತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
– ನೂರ್ ಅಹಮ್ಮದ್