ಕೆ.ಆರ್.ಪೇಟೆ-ಕಮಲಹಾಸನ್ ವಿರುದ್ದ ಜಯಕರ್ನಾಟಕ ಸಂಘಟನೆ ಪ್ರತಿಭಟನೆ

ಕೆ.ಆರ್.ಪೇಟೆ,ಮೇ.31: ಕನ್ನಡಭಾಷೆಯು ತಮಿಳು ಭಾಷೆಯಿಂದ ಹುಟ್ಟಿದ ಭಾಷೆಯಾಗಿದೆ ಎಂದು ಇತಿಹಾಸ ಗೊತ್ತಿಲ್ಲದೇ ಮಾತನಾಡಿರುವ ತಮಿಳು ನಟ ಕಮಲಹಾಸನ್ ಅವರ ನಡಾವಳಿಕೆಯನ್ನು ತಾಲ್ಲೂಕು ಜುಕರ್ನಾಟಕ ಸಂಘಟನೆಯ ಅಧ್ಯಕ್ಷ ಸೋಮಶೇಖರ್ ಹೇಳಿದರು.

ಅವರು ಪಟ್ಟಣದಲ್ಲಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ವತಿಯಿಂದ ಕಮಲಹಾಸನ್ ವಿರುದ್ದ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಕನ್ನಡ ಭಾಷೆಯು ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ತಮಿಳುಭಾಷೆ ಕೇವಲ 1000ವರ್ಷಗಳ ಭಾಷೆಯಾಗಿದೆ. ತಮಿಳು ಭಾಷೆಯು ತುಳು ಮತ್ತು ಮಲಯಾಳಂ ಭಾಷೆಗಳು ಹುಟ್ಟಿದ ನಂತರ ಹುಟ್ಟಿದ ಭಾಷೆಯಾಗಿದೆ. ತಮಿಳುಭಾಷೆಯಲ್ಲಿ ಶೇ.90ರಷ್ಟು ಮಲಯಾಳಂ, ಶೇ.25ರಷ್ಟು ದಕ್ಷಿಣ ಕನ್ನಡದ ಲಿಪಿಯಿಲ್ಲದ ತುಳು ಭಾಷೆಯ ಮಿಶ್ರಣವಾಗಿದೆ. ಕನ್ನಡ ಭಾಷೆಯು ಹಿಂದಿಗಿAತಲೂ ಹಳೆಯ ಭಾಷೆಯಾಗಿದೆ. ಪ್ರಾಯಶಃ ಸಂಸ್ಕೃತ ಭಾಷೆ ಬಿಟ್ಟರೆ ಕನ್ನಡವೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ ಎಂಬುದು ಇತಿಹಾಸ ಸಂಶೋಧಕರ ಗ್ರಂಥಗಳನ್ನು ಓದಿದರೆ ಅರ್ಥವಾಗುತ್ತದೆ.

ಇದರಿಂದಾಗಿಯೇ ಕನ್ನಡಭಾಷೆಗೆ 8ಜ್ಞಾನ ಪೀಠ ಪ್ರಶಸ್ತಿಗಳು ಬಂದಿವೆ. ಆದರೆ ತಮಿಳಿಗೆ ಒಂದೆರಡು ಜ್ಞಾನಪೀಠ ಪ್ರಶಸ್ತಿಗಳು ಬಂದಿರಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ಭಾಷೆ ಕನ್ನಡಭಾಷೆಯಾಗಿದೆ. ತಮಿಳು ಭಾಷೆಯ ಚಿತ್ರಗಳು ನಮ್ಮ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಬಿಡುಗಡೆ ಆಗದೇ ಇದ್ದರೆ ಆ ತಮಿಳು ಚಿತ್ರವು ಸೋಲುತ್ತವೆ. ಇದನ್ನು ಅರ್ಥ ಮಾಡಿಕೊಂಡು ಕಮಲಹಾಸನ್ ಅವರು ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಜೊತೆಗೆ ಕಮಲಹಾಸನ್ ಪರವಾಗಿ ಮಾತನಾಡಿರುವ ಚಿತ್ರನಟಿ ರಮ್ಯ, ಡಾ.ಶಿವರಾಜ್‌ಕುಮಾರ್ ಅವರೂ ಕೂಡ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಹೆಚ್.ಆರ್.ಸೋಮಶೇಖರ್ ಒತ್ತಾಯ ಮಾಡಿದರು.

ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ ಕೆರೆಕೋಡಿ ಆನಂದ್, ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಯುವ ಘಟಕದ ಅಧ್ಯಕ್ಷ ಕೆ.ಎಲ್.ಮಹೇಶ್, ನಗರ ಘಟಕದ ಅಧ್ಯಕ್ಷ ಮೋಹನ್, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಪದಾಧಿಕಾರಿಗಳಾದ ಎಂ.ಸಿ.ಜಗದೀಶ್, ಮನು(ಯುವರಾಜ್), ಅಕ್ಷಯ್, ಶಿವು, ಶಂಕರ್, ರಾಘು, ಬಾವಾಜಿ ಚಂದ್ರು, ಮಹಿಳಾ ಘಟಕದ ಪದಾಧಿಕಾರಿಗಳಾದ ರಾಜಮ್ಮ, ಪುಟ್ಟಮ್ಮ, ಕನ್ಯಾಕುಮಾರಿ, ಗೌರಮ್ಮ, ಭಾಗ್ಯ, ನಿಂಗಮ್ಮ, ಜಯಶೀಲ ಸೇರಿದಂತೆ ಹಲವಾರು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *