ಕೆ.ಆರ್.ಪೇಟೆ-ಕತ್ತರಘಟ್ಟ ದಲಿತ ರೈತನ ಜೀವಂತ ದಹನ ಪ್ರಕರಣ- ಜೆಡಿಎಸ್ ವತಿಯಿಂದ 50ಸಾವಿರ ಪರಿಹಾರ ನೀಡಿ ಸಾಂತ್ವನ ಹೇಳಿದ ಜೆಡಿಎಸ್(ಎಸ್.ಸಿ.) ವಿಭಾಗದ ರಾಜ್ಯಾಧ್ಯಕ್ಷ ಡಾ.ಕೆ.ಅನ್ನಧಾನಿ


ಕೆ.ಆರ್.ಪೇಟೆ,ಮೇ.31: ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ರೈತ ಯುವ ರೈತ ಜಯಕುಮಾರ್ ಜೀವಂತ ದಹನ ಪ್ರಕರಣವನ್ನು ತನಿಖೆ ನಡೆಸಬೇಕು. ಮೃತ ರೈತನ ಕುಟುಂಬಕ್ಕೆ ಕನಿಷ್ಠ 1ಕೋಟಿ ಪರಿಹಾರ ನೀಡಬೇಕು. ರೈತನ ಪತ್ನಿ ಲಕ್ಷಿö್ಮ ಅವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಕರ್ನಾಟಕ ಪ್ರದೇಶ ಜನತಾದಳ(ಎಸ್) ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರೂ ಆದ ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನಧಾನಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿಯ ದೌರ್ಜನ್ಯದಿಂದ ಹತ್ಯೆಯಾದ ದಲಿತ ಯುವ ರೈತ ಜಯಕುಮಾರ್ ಪತ್ನಿ ಲಕ್ಷಿö್ಮ ಅವರಿಗೆ ಜೆಡಿಎಸ್ ಪ.ಜಾ-ಪ.ಪಂ.ವಿಭಾಗದ ವತಿಯಿಂದ 50ಸಾವಿರ ಪರಿಹಾರವನ್ನು ವಿತರಣೆ ಮಾಡಿ, ಹತ್ಯೆ ನಡೆದ ಸ್ಥಳ ಪರಿಶೀಲಿಸಿ, ನೊಂದ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು.‌

ಕತ್ತರಘಟ್ಟ ಜೀವಂತ ದಹನ ಪ್ರಕರಣವು ಇಡೀ ನಾಗರೀಕ ಸಮಾಜವು ತಲೆ ತಗ್ಗಿಸುವ ವಿಚಾರವಾಗಿದೆ. ಈ ರೀತಿಯ ಹತ್ಯೆ ಪ್ರಕರಣವು ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಯಾವುದೇ ಸಮುದಾಯದಲ್ಲಿ ನಡೆಯದಂತೆ ಹಾಗೂ ಅಮಾನವೀಯ ದೌರ್ಜನ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇಡೀ ನಾಗರೀಕ ಸಮಾಜದ ಮೇಲಿದೆ. ಆರೋಪಿ ಸವರ್ಣೀಯ ವ್ಯಕ್ತಿ ಅನಿಲ್‌ಕುಮಾರ್ ರೌಡಿಶೀಟರ್ ಆಗಿದ್ದು ಈತ ಪದೇ ಪದೇ ಜಯಕುಮಾರ್ ಕುಟುಂಬದ ಮೇಲೆ ಜಮೀನು ಕಬಳಿಸುವ ಹಿನ್ನೆಲೆಯಲ್ಲಿ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾರೆ.

ಮೇ.15ರಂದು ಕೂಡ ಜಯಕುಮಾರ್ ಕುಟುಂಬದ ಮೇಲೆ ಜಗಳ ಮಾಡಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಆಗ ನೊಂದ ಜಯಕುಮಾರ್ ಪೊಲೀಸರಿಗೆ ದೂರು ನೀಡಿ ರಕ್ಷಣೆ ನೀಡುವಂತೆ ದೂರು ನೀಡಿದ್ದಾರೆ. ಆದರೆ ಪೊಲೀಸರು ರೌಡಿಶೀಟರ್ ವಿರುದ್ದ ದೂರ ಬಂದ ತಕ್ಷಣ ಕ್ರಮ ವಹಿಸಿದ್ದರೆ, ಜಯಕುಮಾರ್ ಸಾಯುತ್ತಿರಲಿಲ್ಲ. ಇದಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣವಾಗಿದೆ.

ಪೊಲೀಸರು ಆತ್ಮಹತ್ಯೆ ಎಂದು ಎಫ್.ಐ.ಆರ್.ನಲ್ಲಿ ಉಲ್ಲೇಖ ಮಾಡಿರುವುದು ಸರಿಯಲ್ಲ. ಕೂಡಲೇ ತನಿಖಾಧಿಕಾರಿಗಳಾದ ಧರಣಿದೇವಿ ಮಾಲಗತ್ತಿ ಅವರು ಪ್ರಾಮಾಣಿಕ ತನಿಖೆ ನಡೆಸಿ, ಆರೋಪಿ ಅನಿಲ್‌ಕುಮಾರ್ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಯಾಗುವಂತೆ ನ್ಯಾಯಾಲಯಕ್ಕೆ ಜಾರ್ಜ್ಶೀಟ್ ಸಲ್ಲಿಸಬೇಕು. ಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರೆ ಬೆಂಕಿಯ ಉರಿ ತಾಳಲಾರದೆ ಘಟನಾ ಸ್ಥಳದ ಸುತ್ತಲೂ ಓಡಾಡಬೇಕಿತ್ತು. ಆದರೆ ಅಂತಹ ಯಾವುದೇ ಕುರುಹುಗಳು ಕಂಡು ಬರುತ್ತಿಲ್ಲ. ಇದು ಖಚಿತವಾಗಿ ಬೆಂಕಿಗೆ ತಳ್ಳಿ ಹತ್ಯೆ ಮಾಡಿದ ಕೊಲೆ ಪ್ರಕರಣವಾಗಿದೆ ಎಂದು ಸ್ಪಷ್ಟವಾಗಿ ಕೆ.ಅನ್ನಧಾನಿ ಹೇಳಿದರು.

ಜೂ.8ರ ನಂತರ ಕುಮಾರಣ್ಣ ಕತ್ತರಘಟ್ಟಕ್ಕೆ ಭೇಟಿ ಡಾ.ಕೆ.ಅನ್ನಧಾನಿ ಕತ್ತರಘಟ್ಟಕ್ಕೆ ಬೇಟಿ ನೀಡಿದ ವೇಳೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಿಡಿಯೋ ಕಾಲ್ ಮೂಲಕ ಮೃತ ಜಯಕುಮಾರ್ ಪತ್ನಿ ಕತ್ತರಘಟ್ಟದ ಲಕ್ಷ್ಮಿ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಜೂನ್.8 ರ ನಂತರ ಕತ್ತರಘಟ್ಟಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡುತ್ತೇನೆ. ಧರ‍್ಯವಾಗಿದ್ದು ಇಬ್ಬರು ಪುಟ್ಟ ಮಕ್ಕಳು ಇದ್ದಾರೆ ಅವರ ಶಿಕ್ಷಣ ಮತ್ತು ಸಾಕುವ ಕಡೆ ಗಮನ ಹರಿಸಿ, ನಿಮ್ಮ ಆರೋಗ್ಯ ನೋಡಿಕೋ, ದರ‍್ಯವಾಗಿರು ತಾಯಿ ಜೆಡಿಎಸ್ ಪಕ್ಷವು ತಮ್ಮೊಂದಿಗೆ ಇರುತ್ತದೆ ಎಂದು ಲಕ್ಷ್ಮಿ ಕುಮಾರಣ್ಣ ಅವರು ವಿಡಿಯೋ ಕಾಲ್ ಮೂಲಕ ಸಾಂತ್ವನ ಹೇಳಿದರು.


ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು ಸಹೋದರ ಹೆಚ್.ಟಿ.ಲೋಕೇಶ್, ರಾಜ್ಯ ಜೆಡಿಎಸ್ ಎಸ್.ಸಿ.ವಿಭಾಗದ ರಾಜ್ಯ ಉಪಾಧ್ಯಕ್ಷ ಮುನಿರಾಜು, ರಾಜ್ಯ ಹಿರಿಯ ಉಪಾಧ್ಯಕ್ಷ ಮುನಿವೆಂಕಟಪ್ಪ, ಜಿಲ್ಲಾ ಜೆಡಿಎಸ್ ಎಸ್.ಸಿ ವಿಭಾಗದ ಅಧ್ಯಕ್ಷ ಸಾತನೂರು ಜಯರಾಂ, ತಾಲ್ಲೂಕು ಜೆಡಿಎಸ್ ಎಸ್ಸಿ ಘಟಕ ಅಧ್ಯಕ್ಷ ಹರಿಹರಪುರ ನರಸಿಂಹ, ಪಾಂಡವಪುರ ತಾಲ್ಲೂಕು ಅಧ್ಯಕ್ಷ ಬೊಮ್ಮರಾಜು, ಎಪಿಎಂಸಿ ಮಾಜಿ ನಿರ್ದೇಶಕ ಸಿಂಧುಘಟ್ಟ ಸೋಮಸುಂದರ್, ಎನ್.ಜೆ.ರಮೇಶ್, ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಊಚನಹಳ್ಳಿ ನಟರಾಜು, ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ವಕೀಲ ಕಣಿವೆ ಯೋಗೇಶ್, ದಲಿತ ಸೇನೆ ಜಿಲ್ಲಾಧ್ಯಕ್ಷ ಎನ್.ಜೆ.ಮಂಜು, ಪುರಸಭಾ ಸದಸ್ಯರಾದ ಬಿ.ಜಿ.ಗಿರೀಶ್, ಡಿ.ಪ್ರೇಂಕುಮಾರ್, ಡಿ.ಎಸ್.ಎಸ್.ಜಿಲ್ಲಾ ಸಂಘಟನಾ ಸಂಚಾಲಕ ಚಿಕ್ಕಗಾಡಿಗನಹಳ್ಳಿ ಸಂತೋಷ್, ಗ್ರಾ.ಪಂ.ಸದಸ್ಯ ಪರಮೇಶ್, ಪಾಂಡವಪುರ ಅಧ್ಯಕ್ಷ ಬೊಮ್ಮರಾಜು, ರಮೇಶ್, ಜವರಯ್ಯ, ದೇವಯ್ಯ, ಶ್ರೀಧರ, ನೀಲಯ್ಯ, ಕುಮಾರ್, ರವಿ, ಸ್ವಾಮಿ, ಮಂಜುನಾಥ್, ಮಾರ್ಗೋನಹಳ್ಳಿ ರಾಜಶೇಖರ್, ದಲಿತ ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಾಕ್ಷಿö್ಮನಾಗರಾಜು, ಡಿಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಬಂಡಿಹೊಳೆ ರಮೇಶ್, ಕತ್ತರಘಟ್ಟ ರಾಜೇಶ್, ಐಪನಹಳ್ಳಿ ರವೀಶ್, ಗ್ರಾ.ಪಂ.ಸದಸ್ಯ ಯೋಗೇಂದ್ರ, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಪ.ಜಾ ವಿಭಾಗದ ಅಧ್ಯಕ್ಷ ಅಘಲಯ ಯೋಗೇಶ್, ಮುಖಂಡರಾದ ರಾಮು, ಮಾಂಬಳ್ಳಿ ಜಯರಾಂ, ರಂಗಸ್ವಾಮಿ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *