ಕೆ.ಆರ್.ಪೇಟೆ-ಮುಖ್ಯಮಂತ್ರಿಗಳ- ಚಿನ್ನದ-ಪದಕ-ಪುರಸ್ಕೃತ- ಕೆ.ಆರ್.ಪೇಟೆ-ಪೊಲೀಸ್-ಇನ್ಸ್ ಪೆಕ್ಟರ್-ಸುಮಾರಾಣಿ-ಅವರಿಗೆ- ನಾಗರಿಕ-ಹಿತರಕ್ಷಣ-ಸಮಿತಿಯಿಂದ-ಅಭಿನಂದನೆ

ಕೆ.ಆರ್.ಪೇಟೆ : ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಭಾಜನರಾಗಿರುವ ಕೆ.ಆರ್. ಪೇಟೆ ಪಟ್ಟಣ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಬಿ.ಸುಮಾರಾಣಿ ಅವರನ್ನು ಕೆ.ಆರ್.ಪೇಟೆ ತಾಲೂಕು ನಾಗರೀಕ ಹಿತರಕ್ಷಣಾ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ನಾಟನಹಳ್ಳಿ ಗಂಗಾಧರ್ ಮಾತನಾಡಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ಜನಸ್ನೇಹಿ ಪೊಲೀಸ್ ಆಡಳಿತಕ್ಕೆ ಒತ್ತು ನೀಡಿ ಕೆಲಸ ಮಾಡುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರು ಶಿಸ್ತು ಮತ್ತು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯನ್ನು ಜಿಲ್ಲೆಯಲ್ಲಿಯೇ ಮಾದರಿ ಠಾಣೆಯಾಗಿ ಬದಲಾವಣೆ ಮಾಡುವ ಜೊತೆಗೆ ನೊಂದು ಠಾಣೆಗೆ ಬರುವ ಬಡಜನರ ಕಣ್ಣೀರು ಒರೆಸಿ, ನೊಂದವರ ನೋವಿಗೆ ಧನಿಯಾಗಿದ್ದಾರೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಎನ್. ಎಸ್.ಗಂಗಾಧರ್ ಅಭಿಮಾನದಿಂದ ಹೇಳಿದರು.‌

ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯಉಮೇಶ್, ಮಹಿಳಾ ಹೋರಾಟಗಾರ್ತಿ ಕೆ.ಎನ್. ಶಾರದಾ, ನಾಗಮಣಿ ಹೇಮಂತ್, ಮಾದೇಗೌಡ ಮೆಮೋರಿಯಲ್ ಆಸ್ಪತ್ರೆ ವ್ಯವಸ್ಥಾಪಕ ಬೋರೆಗೌಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?