ಕೆ.ಆರ್.ಪೇಟೆ-ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಇರಲಿ- ಬಿಸಿಎಂ ಇಲಾಖೆಯ ಕಲ್ಯಾಣಾಧಿಕಾರಿ ಎಂ.ಎನ್.ವೆಂಕಟೇಶ್

ಕೆ.ಆರ್.ಪೇಟೆ,ಮೇ.31: ಸರ್ಕಾರಿ ಕೆಲಸ ಸಿಗವುದು ನಮ್ಮ ಪೂರ್ವ ಜನ್ಮದ ಪುಣ್ಯವಾಗಿದೆ. ಸೇವೆಯ ಅವಧಿಯಲ್ಲಿ ಪ್ರಾಮಾಣಿಕವಾಗಿ ಅರ್ಪಣಾ ಭಾವನೆಯಿಂದ ಕರ್ತವ್ಯ ನಿರ್ವಹಣೆ ಮಾಡಿದರೆ ದೇವರು ಮೆಚ್ಚುತ್ತಾನೆ. ಲಂಕಬಾಕರಾದರೆ ಮುಂದೆ ನಮ್ಮ ಕುಟುಂಬದ ಯಾರಿಗೆ ಸರ್ಕಾರಿ ನೌಕರಿಯನ್ನು ದೇವರು ಕರುಣಿಸುವುದಿಲ್ಲ. ಹಾಗಾಗಿ ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಇಂತಹ ನಿಟ್ಟಿನಲ್ಲಿ ಕೆಲಸ ಮಾಡಿದವರು ನಮ್ಮ ಬಿಸಿಎಂ ನೌಕರ ಕುಮಾರ್ ಎಂದು ತಾಲ್ಲೂಕು ಬಿಸಿಎಂ ಇಲಾಖೆಯ ಕಲ್ಯಾಣಾಧಿಕಾರಿ ಎಂ.ಎನ್.ವೆಂಕಟೇಶ್ ಹೆಮ್ಮೆಯಿಂದ ಹೇಳಿದರು.

ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಸರಳ ಕರ‍್ಯಕ್ರಮದಲ್ಲಿ ವಯೋ ನಿವೃತಿಹೊಂದಿದ ಅಡುಗೆ ಸಿಬ್ಬಂದಿ ಕುಮಾರ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಿ ಮಾತನಾಡಿದರು.

ನಾವು ಕೆಲಸಕ್ಕೆ ಸೇರಿದ ಈಗ ಸಿಗುವಷ್ಟು ಸೌಲಭ್ಯಗಳು ಇರುತ್ತಿರಲಿಲ್ಲಾ, ಬಹಳ ಕಷ್ಟದ ನಡುವೆ ನಮ್ಮ ಸಹೋದ್ಯೋಗಿಗಳು ಸರ್ಕಾರಿ ಕೆಲಸಮಾಡಿ ಬಂದಿದ್ದೇವೆ. ಈ ಹಿಂದೆ ಸಾಂಬಾರಿಗೆ ಒಳಕಲ್ಲಿನಿಂದ ಮಸಾಲೆ ಆಡಿಸಿ ಸೌಧೆಯಲ್ಲಿ ಮಕ್ಕಳಿಗೆ ವಸತಿ ನಿಲಯಗಳಲ್ಲಿ ಅಡುಗೆಮಾಡಬೇಕಿತ್ತು, ಅಂತಹ ಸಮಯದಲ್ಲಿಯೂ ಕೂಡಾ ಈಗ ನಿವೃತಿಯಾಗುತ್ತಿರುವ ಕುಮಾರ್ ಮತ್ತು ಅವರ ಸಂಗಡಿಗರು ಮಳೆ ಚಳಿಎನ್ನದೆ ನಿಗಧಿತ ಅವಧಿಯೊಳಗೆ ಮಕ್ಕಳಿಗೆ ಊಟ ನೀಡುತ್ತಿದ್ದರೂ.

ಮೊದಲು ಕಚೇರಿಯ ಕಡಿನಿರ್ವಹಣೆ ಸೇರಿದಂತೆ ಎಲ್ಲವನ್ನು ಕೈಯಿಂದಲೆ ಮಾಡಬೇಕಿತ್ತು. ಈಗ ಅಡುಗೆಮಾಡಲು ಗ್ಯಾಸ್ ಮತ್ತಿತರ ಯಂತ್ರಗಳು ಲಭ್ಯವಿದೆ, ಕಚೇರಿ ಕೆಲಸ ಮಾಡಲು ಕಪ್ಯೂಟರ್ ಸೇರಿದಂತೆ ಆಧುನಿಕ ತಂತ್ರಜ್ಞಾನದ ಸೌಲಭ್ಯವಿದೆ. ಈಗ ನೇಮಕವಾಗಿರುವ ಸೌಕರರು ತಮ್ಮ ಕೆಲಸಮಾಡಲು ಹೆಚ್ಚು ಶ್ರಮ ಹಾಕಬೇಕಾಗಿಲ್ಲಾ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನಿಗಧಿತ ಅವಧಿಯೊಳಗೆ ಗುಣಮಟ್ಟದ ಕೆಲಸವನ್ನು ನಿರ್ವಹಣೆಮಾಡಬೇಕು, ಜೊತೆಗೆ ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿದು ಇತರರಿಗೆ ಮಾದರಿಯಾಗಿರಬೇಕು ಎಂದು ಇತರ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

ಕಾರ‍್ಯಕ್ರಮದಲ್ಲಿ ಎಚ್.ಎಲ್.ಬಿ.ಸಿ, ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಮತ್ತು ಬಿಸಿಎಂ ಇಲಾಖೆಯಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತಿ ಹೊಂದಿದ ಕುಮಾರ್ ಮತ್ತು ಅದರ ಧರ್ಮಪತ್ನಿ ಕಮಲಮ್ಮ ಅವರನ್ನು ಇಲಾಖೆ ವತಿಯಿಂದ ಮತ್ತು ಅಡುಗೆ ಸಿಬ್ಬಂದಿಗಳ ಸಂಘದಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ನಿಲಯ ಪಾಲಕರಾದ ಪ್ರದೀಪ್, ಜಗದೀಶ್, ಚಿರಂಜೀ, ಚಂದ್ರಶೇಖರ್, ಗೀತಾ, ಪುಷ್ಪಾ, ಜೈತ್ರಾ, ಶೃತಿ, ಉಮೆ ಅಸ್ಮಾಖಾನಂ, ಕಚೇರಿ ಸಿಬ್ಬಂದಿಗಳಾದ ಕೆ.ಸವಿತಾ, ಮಧುಕುಮಾರ್, ದೀಪಿಕಾ, ಅನಿಲ್‌ಕುಮಾರ್, ವಿಜಯ್‌ಕುಮಾರ್, ಅಡುಗೆ ಸಿಬ್ಬಂದಿಗಳಾದ ನಾಗರಾಜ್, ರಕ್ಷತ್‌ನಾಗ್, ಸುಮಾ, ಭಗವಂತ್, ಕಲ್ಪನಾ, ದೀಪಿಕಾ, ಸುರೇಶ್, ಗುರುಮೂರ್ತಿ, ಶಂಭುಲಿಗಪ್ಪ, ಅಭಿಲಾಶ್ ಮತ್ತಿತರು ಹಾಜರಿದ್ದು ಕುಮಾರ್ ಅವರ ನಿವೃತಿ ಜೀವನ ಸುಖ ನೆಮ್ಮದಿಯಿಂದ ಕೂಡಿರಲಿ ಎಂದುಶುಭ ಹಾರೈಸಿದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *