ಕೆ.ಆರ್.ಪೇಟೆ-ಸಾಕ್ಷಿಬೀಡು-ಡೇರಿ-ಅಧ್ಯಕ್ಷರಾಗಿ-ಯಶವಂತ್-ಗೆಲುವು- ಉಪಾಧ್ಯಕ್ಷರಾಗಿ-ಮಂಜಾಚಾರಿ-ಅವಿರೋಧ-ಆಯ್ಕೆ


ಕೆ.ಆರ್.ಪೇಟೆ: ತಾಲ್ಲೂಕಿನ ಸಾಕ್ಷಿಬೀಡು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯಶವಂತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನ ಬಯಸಿ ಯಶವಂತ್ ಮತ್ತು ಎಸ್.ಜಿ.ದರ್ಶನ್ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಯಶವಂತ್ 8ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನ ಬಯಸಿ ಮಂಜಾಚಾರಿ ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ. ಉಪಾಧ್ಯಕ್ಷರಾಗಿ ಮಂಜಾಚಾರಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಹೆಚ್.ಎಸ್.ಮುಕ್ತ ಕಾರ್ಯನಿರ್ವಹಣೆ ಮಾಡಿದರು. ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಸುಬ್ರಹ್ಮಣ್ಯ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷರಾದ ಯಶವಂತ್ ಮತ್ತು ಉಪಾಧ್ಯಕ್ಷ ಮಂಜಾಚಾರಿ ಅವರನ್ನು ಮುಖಂಡರಾದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್.ಪ್ರಭುದೇವೇಗೌಡ, ಗ್ರಾ.ಪಂ.ಸದಸ್ಯ ಎಸ್.ಎನ್.ಮಂಜೇಗೌಡ, ಗ್ರಾ.ಪಂ.ಅಧ್ಯಕ್ಷರಾದ ಸುಜಾತ ನಾಗರಾಜು, ಸದಸ್ಯ ಎಸ್.ಎನ್.ಮಂಜೇಗೌಡ, ಎಸ್.ಹೆಚ್.ನಾಗರಾಜು, ಉದಯಶಂಕರ್, ಅಶೋಕ್, ಲಕ್ಷ್ಮಣೇಗೌಡ, ಸಂಘದ ನಿರ್ದೇಶಕರಾದ ಸೋಮೇಶ್, ಪ್ರದೀಪ್ ಕುಮಾರ್, ನಿಂಗೇಗೌಡ, ಸ್ವಾಮಿ, ರಮೇಶ್, ರೇಣುಕಾ, ನೀಲಮ್ಮ, ಮಂಜುನಾಥ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದು ಅಭಿನಂದಿಸಿದರು.


ನೂತನ ಅಧ್ಯಕ್ಷ ಯಶವಂತ್ ಮಾತನಾಡಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ ನಿರ್ದೇಶಕರುಗಳಿಗೆ ಹಾಗೂ ಗ್ರಾಮದ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ನನ್ನ ಅಧಿಕಾರದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

– ಶ್ರೀನಿವಾಸ್‌ ಎಸ್‌

Leave a Reply

Your email address will not be published. Required fields are marked *

× How can I help you?