ಕೆ ಆರ್ ಪೇಟೆ: ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ತಾಲ್ಲೂಕು ಕರ್ನಾಟಕ ಯುವ ರಕ್ಷಣೆ ವೇದಿಕೆ ಕನ್ನಡಪರ ಯುವ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬೊಮ್ಮೇಗೌಡ ಸರ್ಕಲ್ ನಲ್ಲಿ ಪ್ರತಿಭಟನಾಕಾರರು ತಮಿಳು ನಟ ಕಮಲ್ ಹಾಸನ್ ವಿರುದ್ಧ ಘೋಷಣೆ ಕೂಗಿ ಕಮಲ್ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕಾಲಲ್ಲಿ ತುಳಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಕರ್ನಾಟಕ ಯುವ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜಾವಿದ್ ಮಾತನಾಡಿ ತಮಿಳು ನಟ ಕಮಲ್ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು.ಕಮಲ್ ಹಾಸನ್ ಅವರ ದರ್ಪ ಕರ್ನಾಟಕದಲ್ಲಿ ನಡೆಯುವುದಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಅವರ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಖಡಕ್ ನಿರ್ಧಾರವನ್ನು ಚಿತ್ರರಂಗ ಕೈಗೊಂಡಿದ್ದರೂ ಕಮಲ್ ಹಾಸನ್ ಉದ್ದಟತನ ಮುಂದುವರಿಸಿರುವ ಅವರು ತಪ್ಪು ಮಾಡಿಲ್ಲ ಕ್ಷಮೆ ಕೇಳುವುದಿಲ್ಲ ದರ್ಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ಮೋಹನ್, ಮಹಿಳಾ ಘಟಕದ ಅಧ್ಯಕ್ಷರಾದ ರೋಷನ ಬಾನು, ಮಹಿಳಾ ಉಪಾಧ್ಯಕ್ಷರಾದ ಲೀಲಾವತಿ, ಸಂಘಟನಾ ಕಾರ್ಯದರ್ಶಿ ನಿಶಾರ್ ಹೋಬಳಿ ಅಧ್ಯಕ್ಷರಾದ ಮಂಜುನಾಥ್ ಬಿ. ಟಿ ಪದಾಧಿಕಾರಿಗಳಾದ ಆಟೋ ರಮೇಶ್ ವ್ಯಾನ್ ಸಣ್ಣಬೋರಯ್ಯ ರಾಮು ಪ್ರಜ್ವಲ್ ಆಟೊ ಪುರುಷೋತ್ತಮ್ ಅರಸು ಹಣ್ಣಿನ ಅಂಗಡಿ ಕೆಂದಣ್ಣ ಕೃಷ್ಣ ದೇವಿರಮ್ಮ,ಲಕ್ಷ್ಮಮ್ಮ ಇತರರು ಭಾಗವಹಿಸಿ ಪ್ರತಿಭಟನೆ ನಡೆಸಿದರು.
- ಶ್ರೀನಿವಾಸ್ ಆರ್.