ಎಚ್.ಡಿ.ಕೋಟೆ: ತಾಲೂಕಿನ ಅಣ್ಣೂರು ಗ್ರಾಮ ಪಂಚಾಯ್ತಿ ವತಿಯಿಂದ ಪಂಚಾಯ್ತಿ ಮಟ್ಟದ ಕೆಡಿಪಿ ಸಭೆ ಮತ್ತು ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಡಾ.ಕೃಷ್ಣರಾಜ್ ಮಾತಾನಾಡಿ, ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಡಿಪಿ ಸಭೆಯನ್ನ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ.ಎಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇದೆಯೋ ಅಲ್ಲಿ ನೂರಕ್ಕೆ ನೂರರಷ್ಟು ಅಭಿವೃದ್ಧಿ ಆಗುತ್ತದೆ ಎಂಬುದಕ್ಕೆ ಅಣ್ಣೂರು ಗ್ರಾಮ ಪಂಚಾಯ್ತಿ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಈ ಪಂಚಾಯ್ತಿಯಲ್ಲಿ ನಡೆದಿರುವ ನರೇಗಾ, ವಸತಿ, ಸ್ವಚ್ಚತಾ ಹಾಗೂ ಮತ್ತಿತರ ಕೆಲಸಗಳಲ್ಲಿ ನೂರರಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಶಂಸೆ ಮಾಡಿದರು.
ಪಂಚಾಯ್ತಿ ಉಪಾಧ್ಯಕ್ಷ ಎಡತೊರೆ ಮಹೇಶ್ ಮಾತಾನಾಡಿ, ಸರ್ಕಾರದ ಆದೇಶವಿದ್ದರು ಪಂಚಾಯ್ತಿಗಳಲ್ಲಿ ಕೆಡಿಪಿ ಸಭೆಗಳನ್ನು ಮಾಡುತ್ತಿಲ್ಲ ಯಾಕೆಂದರೆ ಅಧಿಕಾರಿಗಳಿಗೆ ಮಾಹಿತಿ ಕೊರತೆ ಇದೆ ಆದರೆ ನಾವು ವಿದ್ಯಾವಂತರಾಗಿ ಪಂಚಾಯ್ತಿ ಕಾಯ್ದೆಯನ್ನ ತಿಳಿದುಕೊಂಡು ಕಾಯ್ದೆಯನ್ವಯ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಂಚಾಯತಿ ಸದಸ್ಯರೆಲ್ಲ ಸಭೆ ಸೇರಿ ತಿರ್ಮಾನಿಸಿ ಇಂದು ತಾಲೂಕು ಮಟ್ಟದ ಅಧಿಕಾರಿಗಳನ್ನ ಕರೆದು ಪಂಚಾಯ್ತಿ ಮಟ್ಟದ ಕೆಡಿಪಿ ಸಭೆಯನ್ನು ಮಾಡುತ್ತಿದ್ದೇವೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಸದಸ್ಯ ಸ್ವಾಮಿ ಸಭೆಯನ್ನು ಕುರಿತು ಮಾತಾನಾಡಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್, ಕಾರ್ಯದರ್ಶಿ ಮೋಹನ್, ಪಂಚಾಯ್ತಿ ಅಧ್ಯಕ್ಷೆ ಜಯಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಜಿ.ಪಂ ಉಪಕಾರ್ಯದರ್ಶಿ ಡಾ. ಕೃಷ್ಣರಾಜ್, ಇಒ ಧರಣೇಶ್, ನರೇಗಾ ಅಧಿಕಾರಿ ಅಶಿಷ್ ಶೆಟ್ಟಿ, , ಸದಸ್ಯರಾದ ಸ್ವಾಮಿ, ಜಯಮ್ಮ, ಸರಸ್ವತಿ, ಸಿದ್ದಮ್ಮ, ರಾಜೇಶ್, ಶಿವಮ್ಮ, ಶಶಿಕುಮಾರ್, ಜಯಲಕ್ಷ್ಮಿ, ರಾಜು, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲಾ ಮುಖ್ಯಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಇದ್ದರು.
- ಶಿವಕುಮಾರ, ಕೋಟೆ.