ಕೊರಟಗೆರೆ-ತಿಥಿ ಕಾರ್ಯ ಮುಗಿಸಿ ಊರಿಗೆ ತೆರಳುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ – ಸ್ಥಳದಲ್ಲೇ ದುರ್ಮರಣ

ಕೊರಟಗೆರೆ :- ಸಂಬಂಧಿಕರ ತಿಥಿ ಕಾರ್ಯ ಮುಗಿಸಿಕೊಂಡು ಊರಿಗೆ ಹಿಂತಿರುಗುತ್ತಿರುವಾಗ ಮಾರ್ಗ ಮಧ್ಯೆ ರಸ್ತೆ ದಾಟುವಾಗ ವ್ಯಕ್ತಿಯೋರ್ವನಿಗೆ ಕಾರುವೊಂದು ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಸಾವಿಗೀಡಾದ ದುರ್ಘಟನೆ ಕೊರಟಗೆರೆ ಗಡಿಭಾಗ ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. 

ತುಮಕೂರು ಜಿಲ್ಲೆ ಕೋರ  ಹೋಬಳಿ ಬೆಳದರ ಬಳಿಯ ಲಿಂಗಯ್ಯನಪಾಳ್ಯ ಕ್ರಾಸ್ ನಲ್ಲಿ ಈ ಅಪಘಾತ ಜರುಗಿದ್ದು, ಮಸ್ನಿ ಪಾಳ್ಯ ಗ್ರಾಮದ ರಾಮಚಂದ್ರಪ್ಪ 50 ವರ್ಷ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. 

ಮೃತ ರಾಮಚಂದ್ರಪ್ಪ  ಲಿಂಗಯ್ಯನಪಾಳ್ಯದ ಸಂಬಂಧಿಕರ ತಿಥಿ ಕಾರ್ಯ ಮುಗಿಸಿಕೊಂಡು ಸ್ವಗ್ರಾಮ ಮಸ್ನಿ ಪಾಳ್ಯ ಕ್ಕ ಹೋಗುತ್ತಿರುವಾಗ ಲಿಂಗಾಯನ ಪಾಳ್ಯ ಕ್ರಾಸ್ ನ ಬಳಿ ರಸ್ತೆ ದಾಟುವಾಗ ತುಮಕೂರು ಮಾರ್ಗದ ಕಡೆಯಿಂದ ಬಂದ ಕಾರು ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ರಾಮಚಂದ್ರಪ್ಪನವರಿಗೆ ತೀವ್ರ ತಲೆಗೆ ಪೆಟ್ಟಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಎನ್ನಲಾಗಿದೆ.

ಈ ಸಂಬಂಧ ತುಮಕೂರು ತಾಲೂಕಿನ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ -2 ಸತೀಶ್ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

– ಶ್ರೀನಿವಾಸ್‌, ಕೊರಟಗೆರೆ.

Leave a Reply

Your email address will not be published. Required fields are marked *