ಕೊರಟಗೆರೆ :- ತಾಲ್ಲೂಕಿನ ಸಿದ್ದರಬೆಟ್ಟ ಕ್ಷೇತ್ರದಲ್ಲಿ ಪುಸ್ತಕ ದಾಸೋಹ ಸಮಾರಂಭ ನಡೆಯಲಿದೆ ಎಂದು ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಸಿದ್ದರಬೇಟ್ಟದ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ 19ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಮಠ ಮತ್ತು ಕೊರಟಗೆರೆ ತಾಲ್ಲೂಕು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸಹಯೋಗದೊಂದಿಗೆ ಜೂನ್ 7 ಶನಿವಾರ ಬೆಳಿಗ್ಗೆ ೧೧-೦೦ ಗಂಟೆಗೆ ಶ್ರೀ ಮಠದಲ್ಲಿ ಪುಸ್ತಕ ದಾಸೋಹ ಸಮಾರಂಭ ನಡೆಯಲ್ಲಿದ್ದು ಈ ಕಾರ್ಯಕ್ರಮಕ್ಕೆ ಅಟವಿ ಶಿವಲಿಂಗ ಸ್ವಾಮಿಜಿ, ವೀರಭದ್ರಶಿವಾಚಾರ್ಯ ಸ್ವಾಮಿಜಿ. ರಮಾನಂದ ಸ್ವಾಮಿಜಿ, ಸಿದ್ದಲಿಂಗ ಸ್ವಾಮೀಜಿ, ಸಿದ್ದರೇಣುಕ ಶಿವಾಚಾರ್ಯ ಸ್ವಾಮೀಜಿ, ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಆಗಮಿಸುವರು, ತುಮಕೂರು ಜಿಲ್ಲಾಪಂಚಾಯತ್ ಸಿ.ಇ.ಓ. ಪ್ರಭು ಅದ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ್ ಮಂಜುನಾಥ್, ಕಾರ್ಯನಿರ್ವಾಹಣಾಧಿಕಾರಿ ಅಪೂರ್ವ, ಹಿರಿಯ ಪತ್ರಕರ್ತ ಪದ್ಮರಾಜು, ಶಿವಮೂರ್ತಿ, ಗ್ರಂಥಾಲಯ ಸಂಘದ ಅದ್ಯಕ್ಷ ದಯಾನಂದಸ್ವಾಮಿ ರವರು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೋಳುವರು ತಮಗೆ ಇಷ್ಟವಾದ ಪುಸ್ತಕವನ್ನು ಪಡೆಯಬಹುದಾಗಿದ್ದು ಸಾರ್ವಜಿನಿಕರು ಪುಸ್ತಕ ಪ್ರಿಯರು ಭಾಗವಹಿಸುವಂತೆ ಕೋರಿದ್ದಾರೆ.