ಕೊರಟಗೆರೆ- ಕಾಲೇಜಿನಲ್ಲಿ ಗಮಕ ವಾಚನ-ವ್ಯಾಖ್ಯಾನ ಕಾರ್ಯಾಗಾರ

ಕೊರಟಗೆರೆ:- 64 ಲಲಿತ ಕಲೆಗಳಲ್ಲಿ ಗಮಕ ಕೂಡ ಒಂದಾಗಿದೆ. ಜನಪದದಿಂದ ಆಧುನಿಕ ಸಾಹಿತ್ಯದವರೆಗಿನ ಕನ್ನಡ ಕಾವ್ಯವನ್ನು ಅತ್ಯಂತ ರಾಗಬದ್ಧವಾಗಿ, ಸಾಹಿತ್ಯಕ್ಕೆ ಧಕ್ಕೆ ಬರದಂತೆ ಹಾಡುವ ವಿಶಿಷ್ಟಕಲೆ ಎಂದು ಗಮಕಿ ಶ್ರೀನಿವಾಸ್‌ಮೂರ್ತಿ ಅಭಿಪ್ರಾಯಪಟ್ಟರು.

ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯುಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಗಮಕ ವಾಚನ-ವ್ಯಾಖ್ಯಾನ ಪಠ್ಯಾಧಾರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಬೇರೆ ಯಾವ ಭಾಷೆಗಳಲ್ಲಿಯೂ ಇಲ್ಲದ ವಿಶಿಷ್ಟ ಪ್ರಕಾರ ಕನ್ನಡದಲ್ಲಿದ್ದು, ಕವಿ ರಚಿಸಿದ ಕಾವ್ಯವು ಅತ್ಯಂತ ಸಮರ್ಥವಾಗಿ ಸಹೃದಯ ವೃಂದಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತದೆ ಎಂದು ಹೇಳಿದರು.

ಗಮಕಿ ಶ್ರೀದೇವಿ ಅನಂತರಾಮು ನಡುಗನ್ನಡ ಸಾಹಿತ್ಯದ ವಚನಗಳನ್ನು ಮೊದಲುಗೊಂಡಂತೆ ಹರಿಹರನ ಗುಂಡಯ್ಯನ ರಗಳೆ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರ ವ್ಯಾಸ ಭಾರತದ ಪದ್ಯ ಭಾಗಗಳನ್ನು ವಾಚಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಭಾರ ಪ್ರಾಶುಂಪಾಲ ಡಾ.ಕೆಬಿ ಜ್ಯೋತಿ ವಹಿಸಿದ್ದು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಜಿ ಸಿದ್ದರಾಮಯ್ಯ, ಕಾರ್ಯದರ್ಶಿ ಕುಮಾರಸ್ವಾಮಿ, ಐಕ್ಯೂಎಸಿ ಸಂಚಾಲಕಿ ಡಾ.ದೀಪಾ ಡಿ.ಎಸ್, ಕನ್ನಡ ವಿಭಾಗ ಮುಖ್ಯಸ್ಥ ಡಾ.ಚೈತಾಲಿ, ಮುನಿರಾಜು, ಪ್ರಾಧ್ಯಾಪಕ ಡಾ.ರಮೇಶ್, ಡಾ.ಶಿವಪ್ಪ, ಡಾ.ಅಮಿತಾ, ರೂಪ ಎಂ.ಎನ್, ಶಿವರಾಮಯ್ಯ ಹಾಜರಿದ್ದರು.

– ಶ್ರೀನಿವಾಸ್‌ , ಕೊರಟಗೆರೆ.

Leave a Reply

Your email address will not be published. Required fields are marked *