ಕೊರಟಗೆರೆ:– ಮೊಮ್ಮಗನನ್ನು ಕೀಟ್ಲೆ ಮಾಡುತ್ತಿದ್ದ ಯುವಕನನ್ನ ಪ್ರಶ್ನಿಸಿದ ಅಜ್ಜಿಗೆ ಮನಸೋ ಇಚ್ಚೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣವೂಂದು ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ಕೆಂಗನಪಾಳ್ಯ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದ್ದು, ಲಕ್ಷ್ಮೀನರಸಯ್ಯನ ಮಡದಿ ಅಶ್ವತಮ್ಮ (6೦ ವರ್ಷ) ಹತ್ಯೆಯಾದ ದುರ್ದೈವಿಯಾಗಿದ್ದು, ಇದೇ ಗ್ರಾಮದ ಭೀಮರಾಜು (40 ವರ್ಷ) ಕೊಲೆಗೈತ ಆರೋಪಿಯಾಗಿದ್ದಾನೆ ಎನ್ನಲಾಗಿದೆ.

ಮೃತೆ ಅಶ್ವತ್ಥಮ್ಮ ತನ್ನ ಮೊಮ್ಮಗ 13 ವರ್ಷದ ಗೋಕುಲ್ ಯಾದವ್ ಎಂಬುವರನ್ನು ಇದೇ ಗ್ರಾಮದ ಆರೋಪಿ ಭೀಮ್ ರಾಜು ಎಂಬುವರು 13 ವರ್ಷದ ಹುಡುಗ ಗೋಕುಲ್ ಯಾದವ್ ಎಂಬುವನನ್ನ ಅನಾವಶ್ಯಕವಾಗಿ ಕಾರಣವಿಲ್ಲದೆ ಕೀಟಲೆ ಮಾಡುತ್ತಿದ್ದ ಎನ್ನಲಾಗಿದ್ದು, ಗೋಕುಲ್ ಯಾದವ್ ಈತನಿಂದ ಕಿರುಕುಳ ತಾಳಲಾರದೆ ಮನೆಯ ಕಡೆ ಕಿರುಚಾಡಿಕೊಂಡು ಓಡೋಡಿ ಬರುತ್ತಿರುವಾಗ ಅಜ್ಜಿ ಅಶ್ವತಮ್ಮ ಮನೆಯಿಂದ ಹೊರಬಂದು ಮೊಮ್ಮಗನ ಚೀರಾಟವನ್ನು ಕಂಡು ಓಡಿಸಿಕೊಂಡು ಬರುತ್ತಿದ್ದ ಆರೋಪಿ ಭೀಮ್ ರಾಜು ಅವರನ್ನು ತರಾಟೆಗೆ ತೆಗೆದುಕೊಂಡ ತಕ್ಷಣ ಸಿಟ್ಟಿಗೆದ್ದ ಭೀಮರಾಜು ಅಲ್ಲೇ ಬಿದ್ದಿದ್ದ ದೊಣ್ಣೆಯನ್ನ ಹಿಡಿದು ಅಜ್ಜಿ ಅಶ್ವಥಮ್ಮಗೆ ತಲೆಗೆ ಏಕಾಏಕಿ ಹೊಡೆದ ಪರಿಣಾಮ ಅಜ್ಜಿಯ ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞ ಹೀನರಾಗಿ ಬಿದ್ದ ಅಜ್ಜಿಯನ್ನು ಕೊರಟಗೆರೆ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟಿದ್ದರಾದರೂ ಸ್ಥಳದಲ್ಲಿಯೇ ಕೊನೆ ಉಸಿರೆಳಿದ್ದಿದ್ದರೆ ಎನ್ನಲಾಗಿದೆ.

ಘಟನೆಯ ವಿವರ…
ಕೊರಟಗೆರೆ ತಾಲೂಕಿನ ಕೆಂಗನಪಾಳ್ಯದ ವೆಂಕಟೇಶಪ್ಪ ಎಂಬುವರ ಮನೆಯ ದನದ ಶೆಟ್ಟಿಗೆ ಶೀಟ್ ಹಾಕುತ್ತಿದ್ದದನ್ನ ನೋಡಿಕೊಂಡು ನಿಂತಿದ್ದ ಗೋಕುಲ್ ಯಾದವ್ ಎಂಬುವರ ಮೇಲೆ ಅನಾವಶ್ಯಕವಾಗಿ ಇದೇ ಗ್ರಾಮದ ಯುವಕ ಭಿಮರಾಜು ಕಿರುಕುಳ ಕೊಡಲು ಪ್ರಾರಂಭಿಸುತಿದ್ದಂತೆ 13 ವರ್ಷದ ಯುವಕ ಗೋಕುಲ್ ಯಾದವ್ ಕಿರುಕುಳ ತಾಳಲಾರದೆ ಭೀಮರಾಜುವಿನಿಂದ ತಪ್ಪಿಸಿಕೊಂಡು ಮನೆ ಕಡೆ ಓಡುತ್ತಿರುವಾಗ ಆರೋಪಿ ಭೀಮರಾಜು ಹಿಂಬಾಲಿಸಿಕೊಂಡು ಬರುತ್ತಿರುವುದು ಕಂಡು ಹೆದರಿದ ಗೋಕುಲ್ ಯಾದವ್ ಚಿರಾಡುತ್ತಿರುವುದನ್ನು ಕಂಡು ಮನೆಯಿಂದ ಹೊರಬಂದ ಅಜ್ಜಿ ಕಿರುಕುಳ ಕೊಡುತ್ತಿದ್ದ ಭೀಮರಾಜು ಅವರನ್ನ ತರಾಟೆಗೆ ತೆಗೆದುಕೊಂಡ ತಕ್ಷಣ ಸಿಟ್ಟಿಗೆದ್ದ ಭೀಮರಾಜು ದೊಣ್ಣೆಯಿಂದ ಅಜ್ಜಿಗೆ ಇದ್ದಕ್ಕಿದ್ದಂತೆ ಹಿಗ್ಗಾ-ಮುಗ್ಗ ಒಡೆದು ತಲೆಗೆ ತೀವ್ರ ಪೆಟ್ಟಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರಾದರೂ ಸ್ಥಳದಲ್ಲಿಯೇ ಕೊನೆ ಉಸಿರುಳುತ್ತಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ತುಮಕೂರು ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಅಡಿಷನಲ್ ಎಸ್ಪಿ ಗೋಪಾಲ್ ಡಿ ವೈ ಎಸ್ ಪಿ ಮಂಜುನಾಥ್ ಸಿಪಿಐ ಅನಿಲ್ ಪಿಎಸ್ಐ ಅಭಿಲಾಶ್ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ, ಆರೋಪಿ ತಲೆಮರೆಸಿಕೊಂಡರಾದರೂ ಒಂದೇ ದಿನದಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
- ಶ್ರೀನಿವಾಸ್ ಕೊರಟಗೆರೆ.