ಕೊರಟಗೆರೆ :- ಗಾಳಿ ಹಾಗೂ ಮಳೆಗೆ ವಿದ್ಯುತ್ ಲೈನ್ ಹರಿದು ಬಿದ್ದು, ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಸವಿಗೀಡಾದ ಯುವಕನ ಕುಟುಂಬಕ್ಕೆ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ 5 ಲಕ್ಷ ಚೆಕ್ ವಿತರಿಸಿ ಅವರ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು.
ಬೆಸ್ಕಾಂ ಎಇಇ ಪ್ರಸನ್ ಕುಮಾರ್ ಬೆಸ್ಕಾಂನಿಂದ ನಡೆದ ಅವಘಡಕ್ಕೆ, ಇಲಾಖಾ ವತಿಯಿಂದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೂಲಕ ಮೃತ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಿಸಿದ್ದರು, ಚಿಕಿತ್ಸೆ ಪಡುತ್ತಿರುವ ನರಸಿಂಹ ರಾಜು ಅವರಿಗೆ ಚಿಕಿತ್ಸಾ ವೆಚ್ಚ ಭರಿಸುವುದರ ಜೊತೆಗೆ ಇಲಾಖೆ ವತಿಯಿಂದ ಸಹಕರಿಸಲಾಗುವುದು ಎನ್ನಲಾಗಿದೆ.

ಘಟನೆ ವಿವರ:-
ಕೊರಟಗೆರೆ ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ಅಪಾರ ನಷ್ಟವಾಗಿದ್ದು, ಮಧ್ಯರಾತ್ರಿ ದ್ವಿಚಕ್ರವಾಹನದಲ್ಲಿ ಊರಿಗೆ ತೆರಳುತ್ತಿದ್ದ ಯುವಕರ ಮೇಲೆ ವಿದ್ಯುತ್ ತಂತಿ ಬಿದ್ದು, ವಿದ್ಯುತ್ ತಂತಿ ಸ್ಪರ್ಶವಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ತೀವ್ರ ಗಾಯವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಘಟನೆ ಜರುಗಿದೆ.

ಸಾವಿಗೀಡಾದ ದುರ್ದೈವಿ ಯೋಗೇಶ್
ಕೊರಟಗೆರೆ ತಾಲೂಕಿನ ವಡ್ಡಗೆರೆ ಹಾಗೂ ಚೀಲಗಾನಹಳ್ಳಿ ಮಧ್ಯ ಅಡಿಕೆ ಹಾಗೂ ಬಾಳೇ ತೋಟದ ಸಮೀಪ ಈ ದುರ್ಘಟನೆ ಜರುಗಿದ್ದು, ಚಿಲಗಾನಹಳ್ಳಿ ವಾಸಿ ಯೋಗೇಶ್ 33 ವರ್ಷ ಸಾವಿಗೀಡಾದ ದುರ್ದೈವಿಯಾಗಿದ್ದಾನೆ, ಇದೇ ಗ್ರಾಮದ ನರಸಿಂಹಯ್ಯನ ಮಗ ನರಸಿಂಹರಾಜು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನರಸಿಂಹರಾಜು
ಈ ಸಂಬಂಧ ತಹಸೀಲ್ದಾರ್ ಮಂಜುನಾಥ್, ಬೆಸ್ಕಾಂ ಎಇಇ ಪ್ರಸನ್ ಕುಮಾರ್ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
- ಶ್ರೀನಿವಾಸ್ , ಕೊರಟಗೆರೆ