ಕೊರಟಗೆರೆ-ಅಗತ್ಯವಿದ್ದರೆ ಸರ್ಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆಗೊಳಿಸಿ ಹೇಮಾವತಿಯಿಂದ ಹೊಸ ನಾಲೆ ಮೂಲಕ ನೀರು ಹರಿಸಲಿ-ಬಿಜೆಪಿ ಮುಖಂಡ ಬಿ.ಎಚ್ ಅನಿಲ್‌ಕುಮಾರ್

ಕೊರಟಗೆರೆ:- ‘‘ನಮ್ಮ ನೀರು ನಮ್ಮ ಹಕ್ಕು’’ ಎಂದು ಮೇ.31ರಂದು ಗುಬ್ಬಿ ತಾಲ್ಲೂಕಿನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸರ್ಕಾರದ ವಿರುದ್ಧ ಜಿಲ್ಲೆಯ ಮಠಾಧೀಶರು, ಎನ್‌ಡಿಎ ಪಕ್ಷದ ಶಾಸಕರು, ಮುಖಂಡರು, ರೈತರು ಕೈಗೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡವರ ಮೇಲೆ 109 ಸೆಕ್ಷನ್ ಮೂಲಕ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಎಚ್ ಅನಿಲ್‌ಕುಮಾರ್ ತಿಳಿಸಿದರು.

ಕೊರಟಗೆರೆ ಪಾಂಚಜನ್ಯ ಕಚೇರಿಯಲ್ಲಿ ಎನ್‌ಡಿಎ ಪಕ್ಷದ ವತಿಯಿಂದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಜಿಲ್ಲೆಯ ಅವಿಭಾಜ್ಯ ಅಂಗ. ಕುಣಿಗಲ್ ಹೊರತುಪಡಿಸಿ ಇತರೆ ಜಿಲ್ಲೆಗಳಿಗೆ ನೀರು ಹರಿಸಲು ಎನ್‌ಡಿಎ ಪಕ್ಷ ಮತ್ತು ರೈತರು ಬಿಡುವುದಿಲ್ಲ. ಅಗತ್ಯವಿದ್ದರೆ ಸರ್ಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆಗೊಳಿಸಿ ಹೇಮಾವತಿಯಿಂದ ಹೊಸ ನಾಲೆ ಮೂಲಕ ನೀರು ಹರಿಸಲಿ ಎಂದು ಹೇಳಿದರು.

ಕೊರಟಗೆರೆ, ಮಧುಗಿರಿ, ಪಾವಗಡ ಬರಪೀಡಿತ ಪ್ರದೇಶವೆಂದು ಕೇಂದ್ರ ಸರ್ಕಾರದಿಂದಲೇ ಘೋಷಣೆಯಾಗಿದ್ದು, ಈ ಭಾಗದ ರೈತರ ಹಿತ ಕಾಯದೇ ಕೊಟ್ಟಿರುವ ಕಡಿಮೆ ಟಿಎಂಸಿ ನೀರನ್ನು ರಾಜ್ಯ ಸರ್ಕಾರ  ಕಿತ್ತುಕೊಂಡು ಗೃಹ ಸಚಿವರ ಸೂಚನೆಯಂತೆ ಪ್ರತಿಭಟನಾಕಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ಯೋಜನೆ ಮತ್ತು ಕೇಸ್ ವಜಾಗೊಳಿಸದ್ದಿದ್ದರೆ ಮುಂಬರುವ ದಿನಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡುವುದರ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ತುಂಬಾಡಿ ಲಕ್ಷ್ಮೀಶ್ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ ನಾಲೆ ಮೂಲಕ ಕೇವಲ ೨೬ಟಿಎಂಸಿ ನೀರು ಮಾತ್ರ ಬರುತ್ತಿದೆ. ಕುಣಿಗಲ್ ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗ. ಈ ತಾಲ್ಲೂಕಿನ ಮೂಲಕ ಮಾಗಡಿ, ರಾಮನಗರಕ್ಕೆ ಹೇಮಾವತಿ ಹರಿಸುವ ಯೋಜನೆ ಶೀಘ್ರವೇ ಕೈ ಬಿಡಬೇಕು. ರೈತರ ಜೀವನಾಡಿಯಾಗಿ ಪ್ರತಿಭಟನೆಯಲ್ಲಿ ಭಾಗಿಯಾದ ಮಠಾಧೀಶರು, ಶಾಸಕರು, ರೈತರ ಮೇಲೆ ದಾಖಲಾಗಿರುವ ಕ್ರಿಮಿನಲ್ ಕೇಸ್ ವಜಾಗೊಳಿಸಬೇಕು ಇಲ್ಲದಿದ್ದರೆ ಹೋರಾಟದ ಕಿಚ್ಚು ಹೆಚ್ಚಲಿದೆ ಎಂದು ಹೇಳಿದರು.

ಬಿಜೆಪಿ ಮಂಡಲದ ತಾ.ಅಧ್ಯಕ್ಷ ರುದ್ರೇಶ್ ಮಾತನಾಡಿ, ಮೇ.೩೧ರಂದು ಗುಬ್ಬಿಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಅವೈಜ್ಞಾನಿಕ ಕಾಮಗಾರಿ ವಿರುದ್ದ ನಡೆದ ಪ್ರತಿಭಟನೆಗೆ ರಾಜ್ಯವೇ ಬೆಚ್ಚಿಬಿದ್ದಿದೆ. ಗೃಹ ಸಚಿವರ ಮಾರ್ಗದರ್ಶನದಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರಮುಖ ಮಠಾಧೀಶರು, ಶಾಸಕರು, ರೈತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ಕ್ರಿಮಿನಲ್ ಕೇಸ್ ದಾಖಲಿಸಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ನಿಕಟ ಪೂರ್ವ ಮಂಡಲ ಅಧ್ಯಕ್ಷ ದರ್ಶನ್ ಕೆ.ಎಲ್,  ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಮಧುಗಿರಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಸ್ವಾಮಿ, ತಾ.ಪಂ ಮಾಜಿ ಸದಸ್ಯ ಸಾಕಣ್ಣ, ಪ.ಪಂ ಸದಸ್ಯ ಪ್ರದೀಪ್‌ಕುಮಾರ್, ದಾಸಲುಕುಂಟೆ ರಘು, ದಾಡಿ ವೆಂಕಟೇಶ್, ದಯಾನಂದ, ಮಮತಾ, ವಿಶ್ವನಾಥ್ ಅಪ್ಪಾಜಿ, ಯತೀಶ್, ಉಮೇಶ್, ಚೇತನ್, ಸುರೇಶ್, ಆನಂದ್, ಮೂರ್ತಿ ಸೇರಿದಂತೆ ಇತರರು ಇದ್ದರು.

ಜಿಲ್ಲೆಯ ನೀರು ರಕ್ಷಣೆಗೆ ಮುಂದಾದ ಹೋರಾಟಗಾರರ ಮೇಲೆ ಕೊಲೆಗಾರರೆಂದು ಸರ್ಕಾರ ಪರಿಗಣಿಸಿ ಕೇಸ್ ದಾಖಲಿಸಿರುವುದು ಖಂಡನೀಯ. ಹೇಮಾವತಿ ನೀರು ಇತರೆ ಜಿಲ್ಲೆಗಳಿಗೆ ಹರಿಯಲು ಜಿಲ್ಲೆಯ ಗೃಹ ಸಚಿವರೇ ಮುಂದಾಗಿರುವುದು ವಿಷಾಧನೀಯ. ಮಾಧ್ಯಮದ ಹೇಳಿಕೆಯಲ್ಲಿ ಯಾರನ್ನು ಬಂಧಿಸಿಲ್ಲವವೆಂದು ಒಂದು ಗಂಟೆಯ ಹೋರಾಟದಲ್ಲಿ ಪಾಲ್ಗೊಂಡು ಮಠಾಧೀಶರು, ಶಾಸಕರು, ಹೋರಾಟಗಾರರನ್ನು ಬಂದಿಸಿ ಗೃಹ ಖಾತೆಗೆ ಪರಮೇಶ್ವರ್ ಅನರ್ಹ ವ್ಯಕ್ತಿಯಾಗಿದ್ದಾರೆ.

  • ದಾಡಿ ವೆಂಕಟೇಶ್, ಬಿಜೆಪಿ ಮುಖಂಡ.

-ಶ್ರೀನಿವಾಸ್‌, ಕೊರಟಗೆರೆ.

Leave a Reply

Your email address will not be published. Required fields are marked *