ಕೊರಟಗೆರೆ:- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹೇಮಾವತಿ ಕೆನಾಲ್ ಹೋರಾಟದ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ನಿಕಟ ಪೂರ್ವ ತಾ.ಅಧ್ಯಕ್ಷ ಡಾ.ದರ್ಶನ್ ಕೆ.ಎಲ್ ಬೇಸರ ವ್ಯಕ್ತಪಡಿಸಿದರು.
ಕೊರಟಗೆರೆ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಯಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್ರವರು ಮಠಮಾನ್ಯಗಳಿಗೆ ಹೋಗಿ ಶ್ರೀಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದರೂ ಕೂಡ ದೇವರ ರೂಪದಲ್ಲಿ ಪೂಜಿಸುತ್ತಿದ್ದೇವೆ ಹಲವು ವೇದಿಕೆ ಕಾರ್ಯಕ್ರಮದ ಭಾಷಣದ ವೇಳೆ ನುಡಿದಿದ್ದಾರೆ.

ಆದರೆ ರೈತರ ಬೆಂಬಲಕ್ಕಾಗಿ ಹೋರಾಟದಲ್ಲಿ ಪಾಲ್ಗೊಂಡ ಅದೇ ಶ್ರೀಗಳ ಮತ್ತು ಶಾಸಕರು, ರೈತ ಪರ ಹೋರಾಟಗಾರರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಜನರಿಗೆ ದಾರಿತಪ್ಪಿಸುವಂತಹ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಐಪಿಎಲ್ ವಿಜಯೋತ್ಸವದಲ್ಲಿ ಕಾಲ್ತುಳಿಕ್ಕೆ ಮೃತಪಟ್ಟ 11ಮಂದಿಗೆ ಪೋಲಿಸ್ ಇಲಾಖೆ ಅಭದ್ರತೆ ಕಾರಣ ಎಂದು ಬೆಂಗಳೂರು ಪೋಲಿಸ್ ಆಯುಕ್ತರನ್ನು ಅಮಾನತು ಮಾಡಿದ್ದು ಒಂದೆಡೆಯಾದರೆ ಗುಬ್ಬಿಯಲ್ಲಿ ನಡೆದ ಹೇಮಾವತಿ ಹೋರಾಟಗಾರರಿಂದ ಅಧಿಕಾರಿಗಳ ಮೇಲೆ ಹಲ್ಲೆಯಾಗಿದೆ ಎಂದಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ ಎಂದರು.
- ಶ್ರೀನಿವಾಸ್, ಕೊರಟಗೆರೆ.