ಕೊರಟಗೆರೆ : ಪಿ ಎಲ್ ಡಿ ಬ್ಯಾಂಕ್ ವತಿಯಿಂದ ರೈತ ಸದಸ್ಯರಿಗೆ 50 ಕೋಟಿಗೂ ಹೆಚ್ಚು ಸಾಲ ವಿತರಣೆಯಾಗಿದ್ದು ಅದನ್ನ ಸದುಪಯೋಗ ಪಡಿಸಿಕೊಳ್ಳುವಂತೆ ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷ ಚಿಕ್ಕರಂಗಯ್ಯ ರೈತರಿಗೆ ಕಿವಿಮಾತು ಹೇಳಿದ್ದರು.
ಕೊರಟಗೆರೆ ಪಿಎಲ್ಡಿ ಬ್ಯಾಂಕ್ ನಲ್ಲಿ ಇತ್ತೀಚಿಗೆ 50 ಕೋಟಿ ಸಾಲವನ್ನು ಸಣ್ಣ ಹಿಡುವಳಿದಾರರಿಗೆ ಸಾಲ ವಿತರಣೆ ಮಾಡಲಾಗಿದ್ದು, ರೈತಾಪಿ ವರ್ಗ ಬೇಸಾಯ, ಪಶು ಸಂಗೋಪನೆ, ಕುರಿ ಮೇಕೆ ಸಾಕಾಣಿಕೆ ಸೇರಿದಂತೆ ಇನ್ನಿತರ ಕಸುಬು ಆಧಾರಿತ ಸಾಲ ಪಡೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ರೈತರು ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂದರು.

ಕೊರಟಗೆರೆ ಪಿಎಲ್ಡಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರೈತಪಿ ವರ್ಗ ತಾವು ಬ್ಯಾಂಕಿನ ಮೇಲೆ ಇಟ್ಟಿರುವ ಅಪರಿಮಿತ ವಿಶ್ವಾಸ ಮತ್ತು ತಾವುಗಳು ನೀಡುತ್ತಿರುವ ಸಂಪೂರ್ಣ ಸಹಕಾರದಿಂದ ಬ್ಯಾಂಕ್ ಯಶಸ್ಸಿನ ಮೆಟ್ಟಿಲೇರಿದ್ದು, ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಹಾಗೂ ನೌಕರವರ್ಗದ ಸಹಕಾರ ನಮ್ಮ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸಿ ನಮ್ಮ ನಿರೀಕ್ಷೆ ಮೀರಿ ಬ್ಯಾಂಕ್ ಉತ್ತುಂಗ ದತ್ತ ಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ನಾಗರಾಜು ಮಾತನಾಡಿ ನಬಾರ್ಡ್ ಹಾಗೂ ಠೇವಣಿ ಹಣದಿಂದ ರೈತಾಪಿ ವರ್ಗಕ್ಕೆ ಸಾಲ ನೀಡಲಾಗಿದ್ದು ರೈತರು ಇದನ್ನು ಸದುಪಯೋಗಪಡಿಸಿಕೊಂಡು ತಾವು ಆರ್ಥಿಕ ಸಂಕಷ್ಟದಿಂದ ಹೊರಬರಬೇಕು ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಕೆ.ಎಲ್, ಕೆ .ಎಲ್ ಆನಂದ್, ರಂಗಣ್ಣ, ಪುಟ್ಟನರಸಪ್ಪ , ಎಲ್ ವಿ ಪ್ರಕಾಶ್, ವೆಂಕಟಪ್ಪ, ವೆಂಕಟೇಶ್ ಗೌಡ,ಕಾಮಣ್ಣ, ಡಿಸಿ ರವೀಂದ್ರ, ಎಲ್ ವಿ ಪ್ರಕಾಶ್ ,ಎಮ್ ವಿ ವೆಂಕಟಪ್ಪ ,ನೇತ್ರಮ್ಮ, ಲಕ್ಷ್ಮೀನಾರಾಯಣ್, ಕೆಂಚಮ್ಮ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
– ಶ್ರೀನಿವಾಸ್, ಕೊರಟಗೆರೆ.