ಕೊರಟಗೆರೆ- ನಿವೃತ್ತ ಶಿಕ್ಷಕ ಈರಣ್ಣ ನವರಿಗೆ ಉಚಿತ ಕಂಪ್ಯೋಟರ್ ತರಬೇತಿ ಸಂಸ್ಥೆಯಿಂದ ಸನ್ಮಾನ

ಕೊರಟಗೆರೆ ;- ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಕೆ.ಎಸ್.ವೀರಣ್ಣನವರು ತಮ್ಮ ಸೇವಾ ಅವದಿಯ 37 ವರ್ಷಗಳ ಸುದಿರ್ಘ ಸೇವೆಯಲ್ಲಿ ವಿದ್ಯಾರ್ಥಿಗಳೊಂದಿನ ಉತ್ತಮ ಸಂಬಂಧ ವೃತ್ತಿಯಲ್ಲಿ ಬದ್ದತೆ, ಶಿಸ್ತುಬದ್ದ ಜೀವನ, ಹಿರಿಯರಿಗೆ ನೀಡುತ್ತಿದ್ದ ಗೌರವ, ಸಂಸ್ಕಾರ ಬಹಳ ದೊಡ್ಡದು ಅವರ ನಿವೃತ್ತಿಯಾಗಿರುವುದು ಶಿಕ್ಷಣ ಕ್ಷೇತ್ರದಲ್ಲಿ ಬೇಸರ ತಂದಿದ್ದು ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಉಚಿತ ಬೀಮ್ ಕಂಪ್ಯೋಟರ್ ಮತ್ತು ಹೊಲಿಗೆ ತರಬೇತಿ ಸಂಸ್ಥೆಯ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯತಿಯಿಂದ ನಡೆಯುತಿರುವ ತಾಲೂಕಿನ ವಿಧ್ಯಾರ್ಥಿಗಳಿಗೆ ಉಚಿತ ಕಂಪ್ಯೋಟರ್ ಮತ್ತು ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರದಲ್ಲಿ 37 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವ್ಥತ್ತರಾದ ಕೆ.ಎಸ್.ವೀರಣ್ಣ ರವರನ್ನು ಗೌರವಿಸಿ ಮಾತನಾಡಿ ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿ ಹೊಳವನಹಳ್ಳಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸೇವೆಸಲ್ಲಿಸಿ ನಿವೃತ್ತರಾದ ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ನಿವೃತ್ತ ಹಿರಿಯ ಶಿಕ್ಷಕ ಬಿ.ಹನುಮಂತರೆಡ್ಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ದೇವರ ಕೆಲಸ ಎಂದು ಭಾವಿಸಿ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆಯೊಂದಿಗೆ ಸೇವೆಸಲ್ಲಿಸಿ ಶಿಕ್ಷಣ ಸೇರಿದಂತೆ ಸಾರ್ವಜನಿಕರೊಂದಿಗೆ ಹೊಂದಾಣಿಕೆ, ಪ್ರೀತಿ, ವಿಶ್ವಾಸ ಉತ್ತಮ ಒಡನಾಟದೊಂದಿಗೆ ಸೇವೆ ಸಲ್ಲಿಸಿದ ಅವರ ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದದರು.

ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಶಿಕ್ಷಕ ಎನ್.ಪದ್ಮನಾಭ್ ಮಾತನಾಡಿ ಸರ್ಕಾರಿ ವೃತ್ತಿ ಜೀನದಲ್ಲಿ ನಿವೃತ್ತಿ ಸಹಜ, ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಜನರು ನೆನೆಸುತ್ತಾರೆ ಅಂತಹವರ ಸಾಲಿನಲ್ಲಿ ನಿವೃತ್ತಿ ಹೊಂದಿದ ಹೊಳವನಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಉತ್ತಮ ಸೇವೆ ಸಲ್ಲಿಸಿದ ಕೆ.ಎಸ್.ವೀರಣ್ಣನವರು ನಿಲ್ಲುತ್ತಾರೆ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಕೆ.ಎಸ್.ವೀರಣ್ಣ ನನ್ನ ಸೇವೆಯನ್ನು ಗುರುತಿಸಿ ಗೌರವಿಸಿದ ಬೀಮ್ ಸಂಸ್ಥೆಗೆ ಅಭಿನಂದಿಸಿ ವಿದ್ಯಾರ್ಥಿಗಳು ವಿದ್ಯೆಯನ್ನು ಕಷ್ಟ ಪಟ್ಟು ಕಲಿಯದೆ ಇಷ್ಠಪಟ್ಟು ಕಲಿಯ ಬೇಕು, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಹಾಜರಾತಿ ಯೊಂದಿಗೆ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ, ಗಂಡು ಮಕ್ಕಳು ಶಾಲೆಗಳಿಗೆ ಗೈರುಹಾಜರಾಗಿ ಎಸ್.ಎಸ್.ಎಲ್.ಸಿ ಪಿಯುಸಿಗೆ ಶಿಕ್ಷಣ ಮುಟಕು ಗೊಳಿಸಿ ಸಣ್ಣ ಪುಟ್ಟ ಕೆಲಸಗಳಲ್ಲ ತೊಡಗುತ್ತಿರುವುದು ಕಂಡು ಬರುತ್ತಿದ್ದು ಗಂಡು ಮಕ್ಕಳು ವಿದ್ಯಾಬ್ಯಾಸದ ಸಮಯದಲ್ಲಿ ಬೇರೆ ಕೆಟ್ಟ ಚಟಗಳಿಗೆ ಬಲಿಯಾಗದೆ ವಿಧ್ಯಾಬ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸೂಚಿಸಿದ. 

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹೆಚ್.ಎಲ್.ನಾರಾಯಣ್, ಬೀಮ್ ತರಬೇತಿ ಸಂಸ್ಥೆಯ ಶಿಕ್ಷಕರುಗಳಾದ ಶ್ರೀದೇವಿ, ನಾಗಮಣಿ, ಚೈತ್ರ, ಸುಧಾ ಸೇರಿದಂತಗೆ ತರಬೇತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

  • ಶ್ರೀನಿವಾಸ್‌ , ಕೊರಟಗೆರೆ.

Leave a Reply

Your email address will not be published. Required fields are marked *