ಕೊರಟಗೆರೆ ;– ಭಾರತ ದೇಶವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಪೂರ್ವಜರು ಮಾಡಿದ ಧರ್ಮಗಳ ಮಾರ್ಗದಿಂದ ಮನುಷ್ಯನು ಇಲ್ಲಿಯವರೆಗೂ ನಡೆದುಕೊಂಡು ಬಂದಿದ್ದು ಅಂತಹ ಧರ್ಮಜಾಗೃತಿಗೆ ಮಠಗಳ ಕೊಡಿಗೆ ಸಾಕಷ್ಟು ಇದ್ದು ಭಾರತದೇಶ ಬಸವಬಾರತವಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಬಾಳೇಹೊನ್ನೂರು ಖಾಸಾ ಶಾಖಾ ಮಠದಿಂದ ನಡೆ ೧೯ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಜಗದ್ದುರು ರೇಣುಕಾಚಾರ್ಯ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಹಾಗೂ ಸಾಮೂಹಿಕ ವಿವಾಹಗಳು, ಜನಜಾಗೃತಿ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ 21 ನೇ ಶತಮಾನದಲ್ಲಿ ಮನುಷ್ಯನು ಧರ್ಮಕ್ಕೆ ವೆತಿರೇಕವಾಗಿ ನಡೆದುಕೊಳ್ಳುತ್ತಿದ್ದಾನೆ ಧರ್ಮದಲ್ಲಿ ಒಳ್ಳೆಯ ಬದಲಾವಣೆಗಳು ಆಗಬೇಕಿದೆ ಆದರೆ ಧರ್ಮವನ್ನು ಕೆಟ್ಟವಿಚಾರಗಳಿಗೂ ಬದಲಾವಣೆ ತರುವ ಪ್ರಸಂಗಗಳು ನಡೆಯುತ್ತಿದ್ದು ಇದರಿಂದಲೇ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಳಾಗುತ್ತಿದೆ.

ಈ ಅಧರ್ಮದ ಮಾರ್ಗದಿಂದ ನನ್ನ ಗೃಹ ಇಲಾಖೆಯಲ್ಲಿ ಬರುವ ಅನೇಕ ಮಾಹಿತಿಗಳಲ್ಲಿ ಮಕ್ಕಳು ಹೆತ್ತವರನ್ನು ಆಸ್ತಿ ಮತ್ತು ಕ್ಷಲ್ಲಕ ಕಾರಣಗಳಿಗೆ ಕೊಲೆ ಮಾಡುವ ಹಂತಕ್ಕೆ ತಲುಪುತಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದ್ದು ಸಮಾಜಕ್ಕೆ ಸನ್ಮಾಮಾರ್ಗವನ್ನು ತೋರುವ ಕೆಲಸಗಳು ಮಠದಿಂದ ಆಗಬೇಕಿದೆ, ತುಮಕೂರು ಜಿಲ್ಲೆಯ ಮಠಗಳು ವಿಶ್ವಖ್ಯಾತಿಯಾಗುತ್ತಿದ್ದು ಸಿದ್ದಗಂಗಾ ಶ್ರೀಗಳು ದೈಹಿಕವಾಗಿ ನಮ್ಮ ಜೋತೆ ಇಲ್ಲದಿದ್ದರೂ ಅವರ ಮಾರ್ಗದರ್ಶನ ಸೇವೆ ಅವರು ತೋರಿಸಿಕೊಟ್ಟ ವಿಚಾರ ಧಾರೆಗಳು ನಮ್ಮೊಂದಿಗೆ ಸದಾ ಇದ್ದು ಅವರು ಎಂದೆಂದಿಗೂ ಜನರಲ್ಲಿ ಸದಾ ಇರುತ್ತಾರೆ ಎಂದರು.

ಸಿದ್ದರಬೆಟ್ಟವು ಬಹಳ ಪ್ರಾಚೀನ ಪುರಾತನ ಇತಿಹಾಸ ಪ್ರಸಿದ್ದ ಸಸ್ಯ ಕ್ಷೇತ್ರವಾಗಿದ್ದು ಈ ಸ್ಥಳದಲ್ಲಿ ಧರ್ಮಜಾಗೃತಿ ಕೇಂದ್ರ ಅವಶ್ಯಕತೆ ಇತ್ತು, ಈ ಕ್ಷೇತ್ರದಲ್ಲಿ ಶ್ರೀ ವೀರಭದ್ರವ ಶಿವಾಚಾರ್ಯಸ್ವಾಮೀಜಿಗಳು ಪೀಠಾಧ್ಯಕ್ಷರಾದ ಮೇಲೆ ಕ್ಷೇತ್ರವನ್ನು ಪ್ರಬುದ್ದ ಮಾನಕ್ಕೆ ಬೆಳಿಸಿದ್ದಾರೆ, ಅವರ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಿಗೆ ಚಿಂತನೆಗೆ ನಾನೂ ಸಹ ಕೈಜೋಡಿಸಿ ದುಡಿಯುತ್ತೇನೆ ಶ್ರೀ ಮಠವು ಕಡಿಮೆ ಅವದಿಯಲ್ಲಿ ಲಕ್ಷಾಂತ ಭಕ್ತರ ಪ್ರೀತಿಯನ್ನು ಜಾತ್ಯಾತೀತವಾಗಿ ಸಂಪಾದಿಸಿರುವುದು ಬಹುದೊಡ್ಡ ಸಾಧನೆಯಾಗಿದೆ ಎಂದರು.

ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ ಭಾರತ ಸರ್ಕಾರದಿಂದ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಹಾಗೂ ದೇವರಾಯನದುರ್ಗಾ ಧರ್ಮ ಕ್ಷೇತ್ರಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರಕ್ಕೆ ಅನುದಾನಕ್ಕಾಗಿ ಮನವಿ ಮಾಡಿದ್ದೇನೆ, ಶೀಘ್ರದಲ್ಲೇ ಅನುದಾನವನ್ನು ಬಿಡುಗಡೆಗೊಳಿಸಿ ಎರಡು ಕ್ಷೇತ್ರಗಳ ಅಭಿವೃದ್ದಿಗೆ ನೀಡಲಾಗುವುದು, ಪ್ರಧಾನಿ ನರೇಂದ್ರ ಮೋದಿರವರು ವಿಶ್ವಕಂಡಂತಾ ಮಹಾನ್ ನಾಯಕರು ನನ್ನ ಇಲಾಖೆಗೆ ಸಂಬಂದಿಸಿದಂತೆ ಇತ್ತಿಚೆಗೆ 48 ಸಾವಿರ ಕೋಟಿಗಳನ್ನು ಖರ್ಚುಮಾಡಿ ವಿಶ್ವದ ಅತಿ ಎತ್ತರದ ರೈಲ್ವೇ ಸೇನಾ ಬಿಡ್ಜನ್ನು ನಿರ್ಮಿಸಿದ್ದಾರೆ, ರಾಯದುರ್ಗಾ-ತುಮಕೂರು ರೈಲ್ವೇ ಯೋಜನೆಗೆ ೩೯ ಸಾವಿರ ಕೋಟಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದ ಅವರು ಸಿದ್ದರಬೆಟ್ಟ ಕ್ಷೇತ್ರವು ಅತ್ಯಂತ ಪವಿತ್ರರವಾದ ಕ್ಷೇತ್ರವಾಗಿದ್ದು ರಂಭಾಪುರಿ ಮಠಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ ಇಂತಹ ಖಾಸಾ ಮಠವು ಸಿದ್ದರಬೆಟ್ಟದಲ್ಲಿ ನೆಲೆಗೊಂಡು ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿಗಳ ಮಾರ್ಗದರ್ಶನಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದು ಇನ್ನು 10-15 ವರ್ಷಗಳಲ್ಲಿ ವಿಶ್ವವಿಖ್ಯಾತಿಯನ್ನು ಪಡೆಯುತ್ತದೆ, ಶ್ರೀ ಮಠದ ಎಲ್ಲಾ ಮೂಲಭೂತ ಸೌಕರ್ಯದ ಅಭಿವೃಧ್ದಿಗೆ ಅನುದಾನ ನೀಡಲು ಸದಾಸಿದ್ದನಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಡಾ,ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ, ಶ್ರೀ ಡಾ.ಹನುಮಂತನಾಥಸ್ವಾಮೀಜಿ, ಶ್ರೀ ರೇಣುಕಾ ಶಿವಾಚಾರ್ಯಸ್ವಾಮೀಜಿ, ಖಾರದ ಮಠದ ವೀರಬಸವಸ್ವಾಮೀಜಿ, ತಂಗನಹಳ್ಳಿ ಬಸವಲಿಂಗ ಸ್ವಾಮೀಜಿ, ಶಾಸಕ ಜ್ಯೋತಿ ಗಣೇಶ್, ಮಾಜಿ ವಿಧಾನ ಪತಿಷತ್ ಸದಸ್ಯ ಗುಂಡುಮಲೆ ತಿಪ್ಪೆಸ್ವಾಮಿ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ.ಸಿಇಓ ಪ್ರಭು, ಜಿಲ್ಲಾ ವರೀಷ್ಠಾಧಿಕಾರಿ ಕೆ.ವಿ.ಅಶೋಕ್, ಉಪವಿಭಾಗಾಧಿಕಾರಿ ಗೋಟೂರುಶಿವಪ್ಪ, ತಹಶೀಲ್ದಾರ್ ಮಂಜುನಾಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಬಿಜೆಪಿ ಮಂಡಲಾಧ್ಯಕ್ಷ ರುದ್ರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ವೀರಭದ್ರಯ್ಯ, ಜಿಲ್ಲಾ ಯುವ ಅಧ್ಯಕ್ಷ ದರ್ಶನ್, ನಿದೇಶಕ ಜಿ.ಎಂ.ಶಿವಾನಂದ್, ತಾಲೂಕು ವೀರಶೈವ ಲಿಂಗಾಯಿತಿ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದಮಲ್ಲಯ್ಯ, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಮುಖಂಡರುಗಳಾದ ಕೆ.ಬಿ.ಲೋಕೇಶ್, ಗೊಂದಿಹಳ್ಳಿ ರಂಗರಾಜು, ಸಿದ್ದರಬೆಟ್ಟ ರೋಟರಿ ಕಬ್ಲ್ ಕೆ.ಎನ್.ರಘು ಸೇರಿದಂತೆ ಇನ್ನಿತರರು ಹಾಜರಿದ್ದರು.
- ಶ್ರೀನಿವಾಸ್ , ಕೊರಟಗೆರೆ.