ಕೆ.ಆರ್.ಪೇಟೆ- ನಿವೃತ್ತ ಶಿಕ್ಷಕರಾದ ಅಗ್ರಹಾರಬಾಚಹಳ್ಳಿ ಬಿ.ಹೆಚ್.ಮಂಜೇಗೌಡ, ಬಿ ಡಿ ಚಂದ್ರಶೇಖರ್, ಜಯರಾಮು ಕೆ ಎಸ್,ಪಿ.ಜಗದೀಶ್,ರಾಜಯ್ಯ ಸಿ ಅವರಿಗೆ ಅಖಿಲ ಕರ್ನಾಟಕ ಶಿಕ್ಷಕರ ಪ್ರತಿಭಾ ವೇದಿಕೆ ವತಿಯಿಂದ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂವಿನ ಮಣಿ ಹಾರ ಹಾಕಿ,ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿ ಅವರ ಉತ್ತಮ ಸೇವೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ಭಾಗವಹಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಬಿ ಆರ್ ಪಿ ಬೋರೇಗೌಡ ಮಾತನಾಡಿ ಅಖಿಲ ಕರ್ನಾಟಕ ಶಿಕ್ಷಕರ ಪ್ರತಿಭಾ ವೇದಿಕೆ ತಾಲ್ಲೂಕು ಶಾಖೆಯು ಪ್ರತಿ ವರ್ಷ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪ್ರೋತ್ಸಾಹ ಮಾಡುತ್ತಾ ಬರುತ್ತಿದೆ.ಅಲ್ಲದೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ.ವಯೋವೃತ್ತಿಯಿಂದ ನಿವೃತ್ತ ಹೊಂದಿದ ಶಿಕ್ಷಕರಿಗೆ ಇದೇ ವೇದಿಕೆ ವತಿಯಿಂದ ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸರ್ಕಾರಿ ಸೇವೆಗೆ ಸೇರಿದ ನಂತರ ಒಂದಲ್ಲ ಒಂದು ದಿನ ಸೇವೆಯಿಂದ ನಿವೃತ್ತಿ ಹೊಂದಲೇಬೇಕು.ಅದು ಸರ್ಕಾರಿ ನಿಯಮವಾಗಿದೆ.ನಾವು ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇವೆ ಎಂಬುದು ಮುಖ್ಯವಲ್ಲ ನಾವು ಸೇವೆಯಲ್ಲಿ ಮಾಡಿರುವ ಕಾರ್ಯಗಳು ನಮ್ಮ ಆತ್ಮಕ್ಕೆ ತೃಪ್ತಿಯಾಗುವಂತೆ ಕೆಲಸವನ್ನು ಮಾಡಿದಾಗ ಮಾತ್ರ ಕೆಲಸಕ್ಕೆ ಒಂದು ಬೆಲೆ ಗೌರವ ಸಿಗುತ್ತದೆ ಎಂದು ಕೆ.ಪಿ. ಬೋರೇಗೌಡ ತಿಳಿಸಿದರು.

ಶಿಕ್ಷಕರಾದ ಎ ಎಸ್ ಮೂರ್ತಿ ಮಾತನಾಡಿ ಶಿಕ್ಷಕ ವೃತ್ತಿಯಿಂದ ನಿವೃತ್ತ ಹೊಂದಿರುವ ಶಿಕ್ಷಕರ ಸಹಕಾರದಿಂದ ಅಖಿಲ ಕರ್ನಾಟಕ ಶಿಕ್ಷಕರ ಪ್ರತಿಭಾ ವೇದಿಕೆಯು ಹುಟ್ಟುಹಾಕಲು ಕಾರಣವಾಯಿತು.
ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲಗಳನ್ನು ಹೊಂದಲು,ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಹಾಗೂ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ದಾತ್ಮಕ ಮನೋಭಾವವನ್ನು ರೂಪಿಸಲು ಶಿಕ್ಷಕರಷ್ಟೇ ಪೋಷಕರಿಗೂ ಜವಾಬ್ದಾರಿ ಇರುತ್ತದೆ ಎಂಬುದನ್ನು ಅರಿತು ಸಮಾಜಕ್ಕೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆದು ಇಂದು ವೃತ್ತಿಯಿಂದ ನಿವೃತ್ತರಾದ ಶಿಕ್ಷಕರಿಗೆ ವಿಶ್ರಾಂತ ಜೀವನ ನೆಮ್ಮದಿ, ಶಾಂತಿ, ಆರೋಗ್ಯ, ಆಯಸ್ಸು ವೃದ್ದಿಸಲಿ ಹಾಗೆಯೇ ನಮ್ಮ ಅಖಿಲ ಕರ್ನಾಟಕ ಶಿಕ್ಷಕರ ಪ್ರತಿಭಾ ವೇದಿಕೆಗೆ ಅವರ ಮಾರ್ಗದರ್ಶನ ನಿರಂತರವಾಗಿ ನೀಡುವಂತೆ ಮನವಿ ಅವರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಶಿಕ್ಷಕರ ಪ್ರತಿಭಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಯೋಗೇಶ್, ಉಪಾಧ್ಯಕ್ಷರಾದ ಕೃಷ್ಣೇಗೌಡ, ಕಾರ್ಯದರ್ಶಿ ಚಂದ್ರಶೇಖರ್, ಗೌರವಾಧ್ಯಕ್ಷ ಮೂರ್ತಿ ಆರ್ ಎಸ್,ಬಿ ಎನ್ ನಾಗರಾಜು, ಎ ಎನ್,ರಾಮಕೃಷ್ಣ,ಮಹೇಶ್, ಕುಮಾರ್,ಶಿಕ್ಷಕರ ಸಂಘದ ನಿರ್ದೇಶಕ ದಿನೇಶ್,ಬಿ ಆರ್ ಪಿ ಕೆ ಪಿ ಬೋರೇಗೌಡ,ಧರ್ಮರತ್ನಾಕರ್,ಶೇಷಾದ್ರಿ,ವಸಂತರಾಜು, ಶಿವಕುಮಾರ್,ವಸಂತರಾಜು ಸೇರಿದಂತೆ ಇತರರು ಹಾಜರಿದ್ದರು.
- ಶ್ರೀನಿವಾಸ್ ಆರ್.