ಕೆ.ಆರ್.ಪೇಟೆ- ಗ್ರಾಮ ಪಂಚಾಯತ್ ಅರಿವು ಕೇಂದ್ರದ ಸಲಹಾ ಸಮಿತಿ ಸದ್ಯಸರ ತರಬೇತಿ ಕಾರ್ಯಗಾರ ಪಟ್ಟಣದ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕಿನ ಮಾಕವಳ್ಳಿ, ರಂಗನಾಥಪುರ ಕ್ರಾಸ್, ಶೀಳನೆರೆ, ಮುರುಕನಹಳ್ಳಿ, ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರ ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಹಾಗೂ ಅರಿವು ಕೇಂದ್ರ ನಿರ್ವಹಣೆ ಮಾಡುವ ಬಗ್ಗೆ, ಪ್ರತಿ ಗ್ರಾಮ ಪಂಚಾಯಿತಿಯ ತಲಾ 13ಮಂದಿ ಸಮಿತಿಯ ಸದಸ್ಯರಿಗೆ ಒಟ್ಟು 52ಮಂದಿ ಸದಸ್ಯರಿಗೆ ತರಬೇತಿಯನ್ನು ಬೆಳಿಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ಸಂಪನ್ಮೂಲ ವ್ಯಕ್ತಿಗಳಾದ ಶಾಂತಕುಮಾರ್ ಮತ್ತು ಪ್ರದೀಪ್ ಅವರು ತರಬೇತಿ ನೀಡಿದರು.

ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾದ ಶಾಂತಕುಮಾರ್ ಮತ್ತು ಪ್ರದೀಪ್ ಮಾತನಾಡಿ, “ಸಮಿತಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಅರಿತು, ಓದುಗರ ಸಂಖ್ಯೆ ಹೆಚ್ಚಿಸುವತ್ತ ಗಮನಹರಿಸಬೇಕು. ಸ್ಪರ್ಧೆಗಳನ್ನು ಏರ್ಪಡಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮ ಮಟ್ಟದಲ್ಲೇ ಸಮುದಾಯ ಸಾಕ್ಷರತೆಯನ್ನು ಬೆಳಸುವ ಗುರಿಯಿಂದ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು,” ಎಂದು ತಿಳಿಸಿದರು.
ಸಮಿತಿ ಬಗ್ಗೆ ಕಿರು ಮಾಹಿತಿ:-
ಗ್ರಾಮ ಪಂಚಾಯಿತಿ ಮಟ್ಟದ ಗ್ರಂಥಾಲಯ ಸಲಹಾ ಸಮಿತಿಗೆ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಪಿಡಿಓ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ. ಉಳಿದಂತೆ ಸದಸ್ಯರುಗಳಾಗಿ ಗ್ರಂಥಾಲಯ ಮೇಲ್ವಿಚಾರಕರು, ಸ್ಥಳೀಯ ಪ್ರಾಥಮಿಕ ಶಾಲೆಯ ಅಥವಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಣ ತಜ್ಞರು, ಪತ್ರಕರ್ತರು ಅಥವಾ ಸಾಹಿತಿಗಳು, ಯುವಕ ಮಂಡಳಿ, ಯುವತಿ ಮಂಡಳಿ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ರೈತ ಪ್ರತಿನಿಧಿ, ಮಹಿಳಾ ಸಂಘದ ಒಕ್ಕೂಟದ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ರಚಿಸಲಾಗಿದ್ದು, ಸಮಿತಿಯ ಎಲ್ಲಾ ಸದಸ್ಯರು ಕನಿಷ್ಠ ತಿಂಗಳಿಗೊಮ್ಮೆ ಸಭೆ ಸೇರಿಸಬೇಕು.

ತರಬೇತಿಯಲ್ಲಿ ರಂಗನಾಥಪುರ ಕ್ರಾಸ್ ಪಿಡಿಓ ವಿನೋದ್, ಶೀಳನೆರೆ ಪಿಡಿಓ ನವೀನ್ ಕುಮಾರ್, ಮರುಕನಹಳ್ಳಿ ಮಾಕವಳ್ಳಿ ರಂಗನಾಥಪುರ ಕ್ರಾಸ್ ಶೀಳನೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಗ್ರಾಮ ಪಂ ಅಧ್ಯಕ್ಷರು ಜಗದೀಶ್, ಸಾವಿತ್ರಮ್ಮ ಸದ್ಯಸರಾದ ಮಂಜೇಗೌಡ, ಗ್ರಂಥಾ ಪಾಲಕಿ ಸುಧಾ, ಮಾಕವಳ್ಳಿ ರಂಗನಾಥ್ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.