ಕೆಆರ್ ಪೇಟೆ – ತಾಲ್ಲೂಕು ಶೀಳನೆರೆ ಹೋಬಳಿ ಚಟ್ಟಂಗೆರೆ ಗ್ರಾಮದ ಮೂಲವಾಸಿ ಹಾಗೂ ಪ್ರಸ್ತುತ ಜಯನಗರ, ಕೆಆರ್ ಪೇಟೆ ಪಟ್ಟಣದಲ್ಲಿ ವಾಸಿಸುತ್ತಿದ್ದ ಸುಮಾ (ವಯಸ್ಸು 44) ಎಂಬ ಗೃಹಿಣಿ ಅಕಾಲಿಕವಾಗಿ ವಿಧಿವಶರಾಗಿದ್ದಾರೆ.
ಮೃತರು ಪತಿ ಹೇಮಗಿರಿ ಸಕ್ಕರೆ ನೌಕರ ಸ್ವಾಮಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರರನ್ನು ಅಗಲಿದ್ದಾರೆ. ತಮ್ಮ ಅಗಾಧ ಕುಟುಂಬ ಹಾಗೂ ಬಂಧುಬಳಗಕ್ಕೆ ಈ ದುಃಖಪೂರ್ಣ ಘಟನೆಯು ಆಘಾತವನ್ನುಂಟುಮಾಡಿದೆ.

ಅವರ ಅಂತ್ಯಕ್ರಿಯೆಯು ಇಂದು ಚಟ್ಟಂಗೆರೆ ಗ್ರಾಮದಲ್ಲಿ ನೆರವೇರಿತು. ಇವರ ನಿಧನಕ್ಕೆ ತಾಲ್ಲೂಕಿನ ವಿವಿಧ ಗಣ್ಯರು, ಬಂಧುಮಿತ್ರರು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದಾರೆ.
- ಶ್ರೀನಿವಾಸ್ ಆರ್.