ಕೊರಟಗೆರೆ – ತಾಲ್ಲೂಕಿನ ಸುಪ್ರಸಿದ್ಧ ಮಠಗಳಲ್ಲಿ ಒಂದಾದ ಎಲೆರಾಂಪುರ ಕುಂಚಟಿಗ ಮಹಾಸಂಸ್ಥಾನ ಮಠದ ದ್ವಾರದ ಹೆಬ್ಬಾಗಿಲು ಗುದ್ದಲಿ ಪೂಜೆಯನ್ನು ಗೃಹ ಸಚಿವರು ಹಾಗೂ ರಾಜ್ಯದ ಗೃಹ ಸಚಿವರಾದ ಸಚಿವರಾದ ಡಾ: ಜಿ.ಪರಮೇಶ್ವರ್ ಹಾಗೂ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಮಠದ ಶಿವಾನಂದ ಶಿವಾಚಾರ್ಯ ಹಾಗೂ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ರವರ ದಿವ್ಯ ಹಸ್ತದೊಂದಿಗೆ ಇರಕಸಂದ್ರ ಕಾಲೋನಿ ಸರ್ಕಲ್ ನಲ್ಲಿ ಗುದ್ದಲಿ ಪೂಜೆಯನ್ನು ಮಾಡಲಾಗಿತ್ತು.
ಹಲವಾರು ದಿನಗಳಿಂದ ಮಠದ ಭಕ್ತಾದಿಗಳ ಆಸೆ ಈಡೇರಿಸುವಂತಹ ಶ್ರೀ ಕ್ಷೇತ್ರ ನರಸಿಂಹಗಿರಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಲೋಕೋಪಯೋಗಿ ಸರ್ಕಾರಿ ಇಲಾಖೆಯಿಂದ 25 ಲಕ್ಷಗಳ ರೂಪಾಯಿ ವೆಚ್ಚದಲ್ಲಿ ಮುಖ್ಯದ್ವಾರ ಹೆಬ್ಬಾಗಿಲು ಗುದ್ದಲಿ ಪೂಜೆಯನ್ನು ಡಾ: ಜಿ. ಪರಮೇಶ್ವರ್ ಅವರು ಸರ್ಕಾರಿ ಇಲಾಖೆಯ ರೊಂದಿಗೆ ಹಾಗೂ ಹಲವಾರು ಮುಖಂಡರ ಜೊತೆಯಲ್ಲಿ ನೆರವೇರಿಸಿದರು.

ಸಂದರ್ಭದಲ್ಲಿ ಮುಖಂಡರಾದ ವಾಲೆ ಚಂದ್ರಯ್ಯ. ಗುತ್ತಿಗೆದಾರರಾದ ಎ.ಡಿ. ಬಲರಾಮಯ್ಯ ಮಾವತೂರು ವೆಂಕಟಪ್ಪ. ಕೆ.ಪಿ.ಸಿ.ಸಿ.ಸದಸ್ಯ ದಿನೇಶ್. ವೆಂಕಟೇಶಮೂತಿ೯. ಮಾಜಿ ತಾಲ್ಲೂಕು ಪಂಚಾಯಿತಿ ಅದ್ಯಕ್ಷ ಕೆಂಪರಾಮಯ್ಯ. ಬಿ ಎಂ.ಸಿ. ಚಂದ್ರು. ಮಾರುತಿ ಪ್ರಸಾದ್. ಗ್ರಾಮ ಪಂಚಾಯತಿ ಸದಸ್ಯರಾದ ತಿಲಕ್. ಸುರೇಶ್. ಸಂಕೇನಹಳ್ಳಿ, ಭಾಗ್ಯಮ್ಮ. ಹೊಸಕೋಟೆ ಕೃಷ್ಣಪ್ಪ. ಬಸ್ ಏಜೆಂಟ್ ವೆಂಕಟೇಶ್. ತಣ್ಣೇನಹಳ್ಳಿ ವೆಂಕಟೇಶ್. ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ ನರಸಿಂಹಯ್ಯ ಹೊಸಕೋಟೆ