ಚಿಕ್ಕಮಗಳೂರು, ಜೂನ್ 12:- ತಾಲ್ಲೂಕಿನ ಇಳೆಹೊಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪುಟಾಣಿ ಮಕ್ಕಳಿಗೆ ಅನುಕೂಲವಾಗಲು ಎಸ್ಡಿಎಂಸಿ, ನೆನಪಿನಂಗಳ ವಿದ್ಯಾರ್ಥಿ ಸಂಘ, ಗ್ರಾಮಸ್ಥ ರು ಹಾಗೂ ದಾನಿಗಳ ಸಹಕಾರದಿಂದ 2025-26ನೇ ಸಾಲಿಗೆ ನೂತನವಾಗಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಯಿತು.
ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಚಿನ್ನಸ್ವಾಮಿ ಖಾಸಗೀ ಶಾಲೆಗಳಲ್ಲಿ ಲಭ್ಯವಾಗು ತ್ತಿದ್ದ ಎಲ್ಕೆಜಿ ಮತ್ತು ಯುಕೆಜಿ ಮಾದರಿಯ ತರಗತಿಗಳನ್ನು ಇದೀಗ ಸರ್ಕಾರಿ ಶಾಲೆಗಳಲ್ಲಿ ದಾನಿಗಳ ಸಹಕಾರದಿಂದ ಪುಟಾಣಿ ಮಕ್ಕಳಿಗೆ ಸಕಲ ಸವಲತ್ತಿನೊಂದಿಗೆ ಉಚಿತವಾಗಿ ಬೋಧಿಸಲಾಗುತ್ತಿದ್ದು ಪಾಲಕ ರು ಹೆಚ್ಚು ಮಕ್ಕಳನ್ನು ದಾಖಲಿಸಬೇಕು ಎಂದರು.

ಹಿಂದಿನ ಸಮಯದಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಪೋಷಿಸುವ ಕಾರ್ಯ ಮಾಡುತ್ತಿತ್ತು. ಇದೀಗ ಪೌಷ್ಠಿಕ ಆಹಾರ, ಉತ್ತಮ ಶಿಕ್ಷಕರು, ಸಮವಸ್ತ್ರ ಹಾಗೂ ಕಲಿಕಾ ಸಾಮಾಗ್ರಿಗಳನ್ನು ಎಲ್ಲವನ್ನು ಮಕ್ಕ ಳಿಗೆ ಕಲ್ಪಿಸುವ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪಟ್ಟಣದ ಖಾಸಗೀ ಶಾಲೆಗಳಿಗೆ ಪುಟಾಣಿ ಮಕ್ಕಳಿಗೆ ಕಳುಹಿಸಲು ಸ್ಥಳೀಯರಿಗೆ ಬಹುತೇಕ ಸಾವಿರಾರು ರೂ.ಗಳ ಖರ್ಚುವೆಚ್ಚಗಳು ತಗುಲುತ್ತದೆ. ಪಾಲಕರ ಆಶಯದಂತೆ ಗ್ರಾಮದಲ್ಲೇ, ವಿಶೇಷವಾಗಿ ಸರ್ಕಾರಿ ಶಾ ಲೆಗಳಲ್ಲಿ ದಾನಿಗಳು, ಶಾಲಾಡಳಿತ ನೆರವಿನಿಂದ ಪಾಲಕರನ್ನು ಕನಸನ್ನು ಈಡೇರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಕಾಫಿಬೆಳೆಗಾರ ಕೃಷ್ಣೇಗೌಡ ಮಾತನಾಡಿ, ದೇಶದ ಭವಿಷ್ಯವನ್ನು ಪ್ರಜ್ವಲಿಸುವ ಗ್ರಾಮದ ಪುಟಾಣಿಗಳಿಗೆ ಶಿಕ್ಷಣಕ್ಕೆ ಅನುವು ಮಾಡಲು ಎಲ್ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸುತ್ತಿರುವುದು ಖುಷಿಯ ವಿಷಯ. ಜೊತೆಗೆ ಮಕ್ಕಳನ್ನು ಅತ್ಯಂತ ಜಾಗೃತೆ ವಹಿಸಿ ಗಮನಹರಿಸುವ ಮುಖ್ಯ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರಾದ ನರೇಂದ್ರಗೌಡ, ರಮೇಶಗೌಡ, ಗ್ರಾ.ಪಂ. ಸದಸ್ಯರಾದ ಅರು ಣ್ಕುಮಾರ್, ಸುಧಾ, ಜಿಲ್ಲಾ ಸ್ತಿçಶಕ್ತಿ ಒಕ್ಕೂಟದ ಅಧ್ಯಕ್ಷೆ ಬಿ.ಎನ್.ದಿವ್ಯಾ, ನಿವೃತ ಶಿಕ್ಷಕಿ ಅಪೋಲಿನ್ ಸಾಲ್ಡಾನ, ಶಾಲೆಯ ಮುಖ್ಯಶಿಕ್ಷಕಿ ನವ್ಯ, ಶಾಲಾಭಿವೃದ್ದಿ ಅಧ್ಯಕ್ಷ ಕಲ್ಲೇಶ್, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
- ಸುರೇಶ್ ಎನ್.