ಮಂಡ್ಯ-ಭಯೋತ್ಪಾದನೆಯ ವಿರುದ್ಧ ಹೋರಾಡುವ ಅನಿವಾರ್ಯತೆ ಇದೆ-RPS ಅಧ್ಯಕ್ಷ ರಾಕೇಶ್‌ಎಂ.ದೇಸರ್ಲಾ

ಮಂಡ್ಯ : ಜಮ್ಮು-ಕಾಶ್ಮೀರದ ಬೈಸರಾನ್ ಪ್ರದೇಶದಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿ ಭಾರತದ ಹೃದಯವನ್ನೇ ನಡುಗಿಸಿದ್ದು ಭಯೋತ್ಪಾದನೆಯ ವಿರುದ್ಧ ಹೋರಾಡುವ ಅನಿವಾರ್ಯತೆ ಎದುರಾಗಿದೆ ಎಂದು RPS ಅಧ್ಯಕ್ಷ ರಾಕೇಶ್ ಎಂ.ದೇಸರ್ಲಾ ಹೇಳಿದ್ದಾರೆ.

ಪುಹಲ್ಗಾಮ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಕಿಡಿಗೇಡಿಗಳು 28 ಭಾರತೀಯರನ್ನು ಹಿಂಸಾತ್ಮಕವಾಗಿ ಕೊಂದರು. ಅವರು ಯೋಧರು ಅಲ್ಲ, ರಾಜಕಾರಣಿಗಳು ಅಲ್ಲ ? ನಮ್ಮ ಸಾಮಾನ್ಯ ಸಹೋದರರು ? ಪ್ರವಾಸಿಗರು, ತೀರ್ಥಯಾತ್ರಿಗಳು, ಕುಟುಂಬದವರು ಎಂದು ಕಂಬನಿ ಮಿಡಿದಿದ್ದಾರೆ.


ಇದು ಕೇವಲ ದಾಳಿ ಅಲ್ಲ, ಇದು ಭಾರತದ ಸಾಮರಸ್ಯದ ಮೇಲಿನ ನಿಷ್ಠುರ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಭಯೋತ್ಪಾದಕರಿಗೆ ತಕ್ಷಣದ ಹಾಗೂ ನಿರ್ಧಾರಾತ್ಮಕ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ ಅವರು, ಪ್ರವಾಸಿ ಪ್ರದೇಶಗಳಲ್ಲಿ ನಾಗರಿಕ ಸುರಕ್ಷೆ ಜವಾಬ್ದಾರಿಯನ್ನು ತೀವ್ರಗೊಳಿಸುವಂತೆ ರಾಷ್ಟ್ರೀಯ ನಾಗರಿಕ ಸುರಕ್ಷತಾ ನೀತಿ ರೂಪಿಸಬೇಕು. ಹತ್ತಿರದ ಕುಟುಂಬಗಳಿಗೆ ಶೀಘ್ರ ಪರಿಹಾರ ಮತ್ತು ಪುನರ್ವಸತಿ ನೆರವು ನೀಡಬೇಕು. ಭಾರತ ವಿರೋಧಿ ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ದೇಶಗಳ ವಿರುದ್ಧ ಶಕ್ತಿಮತ್ತವಾದ ಉಲ್ಟಾ ರಾಜತಾಂತ್ರಿಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

“ಬೈಸರಾನ್‌ನಲ್ಲಿ ದುಷ್ಟರು ಮಾಡಿದ ಅಪರಾಧಕ್ಕೆ ರಾಷ್ಟ ಮೌನವಾಗಬಾರದು. ನಾವು ನಮ್ಮ ಶ್ರದ್ಧಾಂಜಲಿಯನ್ನು ಕೇವಲ ದೀಪದ ಮೂಲಕವಲ್ಲ ? ನ್ಯಾಯದ ಪಥದಲ್ಲಿ ಹೋರಾಟದ ಮೂಲಕ ತೋರಿಸುತ್ತೇವೆ. ಇದು ಭಾರತ ನಡುಗುವ ವಿಷಯವಲ್ಲ ? ಎದ್ದು ನಿಲ್ಲುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?