ಮಂಡ್ಯ- ಪಾಂಡವಪುರದಿಂದ ಕಿರಂಗೂರು ಗ್ರಾಮದವರೆಗೂ ಅವೈಜ್ಞಾನಿಕ ರಸ್ತೆ, ಚರಂಡಿ ಕಾಮಗಾರಿ-ಸಿಎಂ, ಮೇಲಾಧಿಕಾರಿಗಳಿಗೆ ಸಮಗ್ರ ತನಿಖೆಗೆ ಪಾಪು ದೂರು

ಮಂಡ್ಯ : ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಂಡವಪುರದಿಂದ ಹಾದುಹೋಗಿ ಕಿರಂಗೂರು ಗ್ರಾಮದವರೆಗೂ ರಸ್ತೆ ಅಗಲೀಕರಣ ಮಾಡುತ್ತಿರುವುದು ಅವೈಜ್ಞಾನಿಕದಿಂದ ಕೂಡಿದೆ. ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡುತ್ತಿರುವುದು ಕೂಡ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಅವೈಜ್ಞಾನಿಕವಾಗಿದೆ ಕರ್ನಾಟಕ ರಾಜ್ಯ ರೈತಸಂಘದ ಮುಖಂಡರಾದ ಮೋಹನ್‌ಕುಮಾರ್ ಉ|| ಕಿರಂಗೂರು ಪಾಪು ಆರೋಪಿಸಿದ್ದಾರೆ.

ಕಿರಂಗೂರು ರಸ್ತೆ ಬದಿಯಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದಾರೆ. ಕೆಲವರು ಹೊಸದಾಗಿ ಚರಂಡಿ ಮಾಡಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಬರುವ ಬಡಜನರ ಮನೆಗಳು ನೂರು ವರ್ಷಗಳಿಂದ ಕೂಲಿಕಾರ್ಮಿಕ ಕುಟುಂಬಗಳು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮಾಡುವ ಯಾರೋ ಒಬ್ಬ ಗುತ್ತಿಗೆದಾರ ಬಂದು ಯಾವ ಮಾನದಂಡದ ಮೇಲೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಕೆ ಮಾಡಲು ಅನುಮತಿ ನೀಡಿದ್ದಾರೆ.



ಅದಕ್ಕೆ ಬೇಕಾದ ಯಂತ್ರೋಪಕರಣ, ಕೆಲಸಗಾರರು ಇದ್ದಾರಾ?  ಎಸ್ಟಿಮೇಟ್ ಪ್ರಕಾರ ಮರಳು, ಕಬ್ಬಿಣ, ಸಿಮೆಂಟ್, ಜಲ್ಲಿಕಲ್ಲು, ಎಂ ಸ್ಯಾಂಡ್ ಇನ್ನಿತರ ವಸ್ತುಗಳು ಗುಣಮಟ್ಟದಿಂದ ಕೂಡಿದೆಯಾ? ಎಂಬ ಬಗ್ಗೆ ಪರಿಶೀಲನೆ ಮಾಡದ ರಾಷ್ಟ್ರೀಯ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್‌ಗಳು ಮನಬಂದಂತೆ ಗುತ್ತಿಗೆದಾರನೂ ಕಳಪೆ ಗುಣಮಟ್ಟದ ವಸ್ತುಗಳನ್ನು ಹಾಕಿಕೊಂಡು ಕಾಮಗಾರಿ ಮಾಡುತ್ತಿರುವುದಕ್ಕೆ ಯಾರೂ ಹೊಣೆ? ಗುತ್ತಿಗೆದಾರನು ರಸ್ತೆಬದಿಯಲ್ಲಿರುವ ಬಡಜನರನ್ನು ಎಲ್ಲವನ್ನು ಬಿಚ್ಚಿಕೊಳ್ಳಿ, ಕಟ್ಟಡವನ್ನು ಖಾಲಿ ಮಾಡಿ ಎಂದು ಬೆದರಿಸುವ ತಂತ್ರವನ್ನು ಮಾಡುತ್ತಿದ್ದಾನೆ. ಆದರೆ ನೂರಾರು ವರ್ಷಗಳಿಂದ ವಾಸವಿರುವ ಮನೆಯ ಮಕ್ಕಳು, ಸಂಸಾರ ಎಲ್ಲಿ ಹೋಗಬೇಕು? ಗುತ್ತಿಗೆದಾರ ಹೇಳಲು ಯಾರು? ರಸ್ತೆ ಮಾಲೀಕ ಯಾರು? ರಾಷ್ಟ್ರೀಯ ಹೆದ್ದಾರಿಯ ಇಲಾಖಾಧಿಕಾರಿಗಳು ಇದುವರೆಗೂ ಭೇಟಿ ಮಾಡಿ ರಸ್ತೆ ಅಗಲೀಕರಣದ ಬಗ್ಗೆ, ಮನೆ ಕಳೆದುಕೊಳ್ಳುವವರನ್ನು ಸೇರಿಸಿ ಅವರ ಜತೆ ಚರ್ಚಿಸಿ ಸರ್ಕಾರದ ನಿಯಮ ಹೀಗಿದೆ, ಇಷ್ಟು ಮೀಟರ್ ರಸ್ತೆ, ಚರಂಡಿ ಮಾಡುತ್ತಿದ್ದೇವೆ ಎಂದು ಆಯಾಯ ಗ್ರಾಮಗಳಲ್ಲಿ ಸಭೆ ಕರೆದು ಕಾಮಗಾರಿಯ ಸೂಚನಾ ಫಲಕವನ್ನೂ ಹಾಕಿಲ್ಲ.

ಯಾರಿಗೂ ತಿಳುವಳಿಕೆಯೂ ನೀಡದೇ, ನೋಟೀಸ್‌ಗಳನ್ನೂ ನೀಡದೇ ಏಕಾಏಕಿ ಬಂದು ಮನೆ ಖಾಲಿ ಮಾಡಿ ಎಂದರೆ ಇದು ರಾಷ್ಟ್ರೀಯ ಹೆದ್ದಾರಿಯ ಕೇಂದ್ರ ಭೂ ಸಾರಿಗೆಯ ಮಂತ್ರಾಲಯದ ಮಾರ್ಗಸೂಚಿಯೇ? ಗೌರವಾನ್ವಿತ ಸುಪ್ರೀಂಕೋರ್ಟ್ ನ್ಯಾಯಾಲಯದ ಪ್ರಕಾರ ಪರ‍್ಯಾಯ ವ್ಯವಸ್ಥೆ ಮಾಡಿ ನಿಯಮಾನುಸಾರ ಅವರಿಗೆ ಮೂಲಭೂತ ಸೌಕರ‍್ಯಗಳನ್ನು ಒದಗಿಸಿಕೊಟ್ಟು ನಂತರ ರಸ್ತೆ ಅಗಲೀಕರಣ ಮಾಡಬೇಕೆಂಬ ಆದೇಶವಿದೆ. ಆದರೆ ಇಲಾಖಾಧಿಕಾರಿಗಳು, ಗುತ್ತಿಗೆದಾರರು ಒಂದು ನೋಟೀಸ್‌ನ್ನು ನೀಡದೇ ಎಷ್ಟು ಮೀಟರ್ ರಸ್ತೆ, ಎಷ್ಟು ಮೀಟರ್ ಚರಂಡಿ, ಎಷ್ಟು ಮನೆಗಳು, ಎಷ್ಟು ಕಟ್ಟಡಗಳು ಹೋಗುತ್ತವೆ ಎಂಬ ಕನಿಷ್ಠ ಜ್ಞಾನವಿಲ್ಲದೇ ಒಂದು ತಿಳುವಳಿಕೆ ನೋಟೀಸನ್ನು ನೀಡದೇ ಏಕಾಏಕಿ ಗುತ್ತಿಗೆದಾರ ಬಂದು ಬೆದರಿಸುವ ಕೆಲಸವನ್ನು ನಿಲ್ಲಿಸಬೇಕು.

ಇದುವರೆಗೂ ಮಾಡಿರುವ ಬಾಕ್ಸ್ ಚರಂಡಿಯನ್ನು ಎಸ್ಟಿಮೇಟ್ ಪ್ರಕಾರ ಗುಣಮಟ್ಟದಿಂದ ಮಾಡಿದ್ದಾರಾ? ಎಂಬ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಹಾಗೂ ಬಡಜನರ ಮನೆಗಳಿಗೆ ಪರ‍್ಯಾಯ ವ್ಯವಸ್ಥೆ ಮಾಡಬೇಕು, ಮನೆಕಳೆದುಕೊಂಡವರಿಗೆ ಪರಿಹಾರ ರೂಪದಲ್ಲಿ ಹಣ ವಿತರಣೆ ಮಾಡಬೇಕು. ಆಮೇಲೆ ರಸ್ತೆ ಅಗಲೀಕರಣ ಮಾಡಲಿ. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ.

ಇದರ ಸಂಬಂಧ ಮಾನ್ಯ ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಯವರಿಗೆ, ಸಂಸದರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಎಂಜಿನಿಯರ್‌ಗೆ ಸಮಗ್ರ ತನಿಖೆಗೆ ದೂರು ನೀಡುತ್ತೇವೆ ಎಂದು ಪಾಪು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *